ರಾಮ್ ಪ್ರಕಾಶ್ ರೈ ಕೆ. ಹೊಸ ಸರಣಿ “ಸಿನಿ ಪನೋರಮಾ” ಇಂದಿನಿಂದ
ಯಾರ ದೃಷ್ಟಿಗೂ ಬೀಳದಂತೆ ಹೋಟೆಲಿನ ಹಿಂಬಾಗಿಲ ಬಳಿ ಕುಳಿತು ಆಕೆ ಬಿರಿಯಾನಿಯ ಚಪ್ಪರಿಸುತ್ತಿದ್ದಳು, ಅದರ ಕಾಲಾತೀತ ಪ್ರೇಯಸಿ ಮೊಸರು ಬಜ್ಜಿಯ ಒಂಚೂರು ಹೆಚ್ಚೆನಿಸುವಷ್ಟು ಸೇರಿಸಿಕೊಂಡು. ಅಲ್ಲೇ ಆಗಿದ್ದು ಅವರ ಪರಿಣಯದ ಉದ್ಘಾಟನೆ. ಮುಂದೆ ಆತ ಅವಳಿಗೆ ತನ್ನದೇ ಶೈಲಿಯ ಬಿರಿಯಾನಿಯ ಮಾಡಿ ತಿನ್ನಿಸುತ್ತಿದ್ದರೆ, ಅವಳು ಆತನೆಡೆಗೆ ತನ್ನ ಚಂದಿರ ಮೂಡುವ ಕೆನ್ನೆಗಳ ಒಳಸೆಳೆದು ತುಟಿಯಂಚಿನಲ್ಲಿ ನಗು ಚೆಲ್ಲುತ್ತಾ ಪ್ರೀತಿಯ ಭಾವವ ತಣ್ಣಗೆ ಧಾರೆಯೆರೆಯುತ್ತಿದ್ದಳು.
ರಾಮ್ ಪ್ರಕಾಶ್ ರೈ ಕೆ. ಬರೆಯುವ ಸಿನಿಮಾಗಳ ಕುರಿತ “ಸಿನಿ ಪನೋರಮಾ” ಸರಣಿ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ
ಮಲಗು ಮಲಗೆನ್ನ ಮಗುವೆ…: ಚಂದ್ರಮತಿ ಸೋಂದಾ ಸರಣಿ
ನನಗೆ ಈಗಲೂ ನೆನಪಿದೆ, ನನ್ನ ತಮ್ಮಂದಿರನ್ನು, ಅಕ್ಕನ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುವಂತೆ ಅಮ್ಮ ಹೇಳುತ್ತಿದ್ದಳು. ಸುಮ್ಮನೆ ತೂಗಿದರೆ ಮಕ್ಕಳು ಅಳುತ್ತಿದ್ದವು. ಲಾಲಿಪದ ಹೇಳಿದರೆ ಸಾಕು ಕೆಲವೇ ಹೊತ್ತಿನಲ್ಲಿ ಅವು ಮಲಗುತ್ತಿದ್ದವು. ಆಗೆಲ್ಲ ನಾವು ದೊಡ್ಡವರು ಹೇಳುತ್ತಿದ್ದ ಜೋಗುಳ, ಲಾಲಿಪದಗಳನ್ನು ಕೇಳಿ ಕಲಿಯುತ್ತಿದ್ದೆವು. ʻಅಳದಿರು ತಮ್ಮಯ್ಯ ಅಳಿರ ಕಣ್ಣಿಗೆ ನಿದ್ದೆ ಬೆಳಗಾದರೆ ಬಕ್ಕು ನಿನ ಮಾವ ತಮ್ಮಯ್ನ ಮಡಿಲಿಗೆ ತಕ್ಕು ಕಡಲೆಯʼ ಅಂತಲೋ ನಮ್ಮದೇ ಆದ ರಾಗದಲ್ಲಿ ಹಾಡುವುದಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿಮೂರನೆಯ ಕಂತಿನಲ್ಲಿ ಲಾಲಿಹಾಡುಗಳ ಕುರಿತ ಬರಹ ನಿಮ್ಮ ಓದಿಗೆ
ಲೋಕಲ್ ಫಂಡ್ ಡಿಸ್ಪೆನ್ಸರಿಯೂ.. ಮೊಡವೆ ಪುರಾಣವೂ..: ಎಚ್. ಗೋಪಾಲಕೃಷ್ಣ ಸರಣಿ
ಆಗಾಗ ಈ ಮೊಡವೆ ಹಿಸಿಕಿ ಹಿಸುಕಿ ಕೀವು ಇತ್ಯಾದಿ ಅದರೊಳಗಿಂದ ಆಚೆಗೆ ತೆಗೀತಿದ್ದೆ. ಮುಖದ ತುಂಬಾ ಹೀಗೆ ನಾನೇ ಮಾಡಿಕೊಂಡ ಮೊಡವೆ ನಿರ್ಮೂಲನ ಯೋಜನೆಯ ಗುರುತುಗಳು ಹೇರಳವಾಗಿ ಇದ್ದವು, ಇದ್ದವು ಏನು ಈಗಲೂ ಇವೆ. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ
ಒಟ್ಟಿಗೆ ಬಾಳಿದ ತೆರದಿ… : ಸುಮಾವೀಣಾ ಸರಣಿ
ನಮ್ಮಲ್ಲಿ ನಿದ್ರೆಯಲ್ಲಿ ಬೆಚ್ಚಿ ಬೀಳುವ, ಮಾತನಾಡುವವರು ಇದ್ದರು. ಜೊತೆ ಜೊತೆಗೆ ವಾಯುವಾತದ ನಾನಾ ಸದ್ದು….. ನಮ್ಮ ಕಾಲದಲ್ಲಿ ಲ್ಯಾಂಡ್ ಲೈನ್ ಫೋನ್ ಬಿಟ್ಟರೆ ಸೆಲ್ ಫೋನ್ಗಳು ಇರಲಿಲ್ಲ. ಇದ್ದಿದ್ದರೆ ಅದೆಷ್ಟು ವಿಡಿಯೋಗಳು ವೈರಲ್ ಆಗುತ್ತಿದ್ದವೋ ಏನೋ? ಗೊತ್ತಿಲ್ಲ! ಆದರೂ ಒಬ್ಬಾಕೆ ನಿದ್ರೆಯಲ್ಲಿ ಓಡಾಡುತ್ತಿದ್ದಳು. ಅದೊಂದು ಡಿಸಾರ್ಡರ್ ಎನ್ನುತ್ತಾರೆ. ಅವರನ್ನು ತಕ್ಷಣಕ್ಕೆ ಎಬ್ಬಿಸಬಾರದು ಇತ್ಯಾದಿ ಇತ್ಯಾದಿ……
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ
ಯಾರಿಗೂ ಗೊತ್ತಿರದ ಒಂದು ಪುಟ್ಟ ಗುಲಾಬಿ…: ಚೈತ್ರಾ ಶಿವಯೋಗಿಮಠ ಸರಣಿ
ಎಮಿಲಿ ಮನೆಯೇ ಮಂದಿರವೆಂದು ನಂಬಿದ್ದವಳು. ಇಗರ್ಜಿಗಳಿಗೆ ಹೆಚ್ಚಾಗಿ ಭಾಗವಹಿಸದೇ, ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಅನಾರೋಗ್ಯ ನಡುವೆಯೂ ಒಂದಿಷ್ಟು ಉಲ್ಲಸಿತಳಾಗಿರೋವಾಗ ಅನೇಕ ಸೃಜನಶೀಲ ಕೆಲಸಗಳಲ್ಲಿ ಮಗ್ನಳಾಗುತ್ತಿದ್ದಳು. ಸ್ನೇಹಿತರಿಗೆ ಪತ್ರ ಬರೆಯುವುದು, ತಾನು ಬರೆದ ಪದ್ಯಗಳಲ್ಲಿ ಕೆಲವನ್ನು ಮಾತ್ರ ಸನ್ಮಿತ್ರರಿಗೆ ಟಪಾಲು ಹಾಕಿದರೂ ಅವೆಷ್ಟೋ ಪದ್ಯಗಳು ಅವಳಲ್ಲೇ ಉಳಿಯುತ್ತಿದ್ವು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ
ಅನುಸೂಯ ಯತೀಶ್ ಬರೆಯುವ ಹೊಸ ಸರಣಿ “ಬೆಳೆಯುವ ಮೊಳಕೆ” ಶುರು
ಮೂರನೇ ತರಗತಿ ಮಗುವಿನಿಂದ ಲಕ್ಷದವರೆಗೂ ಸಂಖ್ಯಾ ಬರವಣಿಗೆಯನ್ನು ನಿರೀಕ್ಷಿಸಿದ್ದು ನನ್ನ ಪ್ರಮಾದ ಎಂದು ತಕ್ಷಣವೇ ಹೊಳೆಯಿತು. ಆ ವಿದ್ಯಾರ್ಥಿಯ ಬಳಿ ಹೋದೆ, ಆ ಮಗುಭಯದಿಂದ ಥರಥರ ನಡುಗುತ್ತಾ “ಕಲಿತುಕೊಳ್ಳುವೆ ಮಿಸ್ ಹೊಡಿಬೇಡಿ, ಬೈಬೇಡಿ” ಅಂದಳು. ಆ ಕ್ಷಣ ಕಣ್ಣಾಲಿಗಳು ತುಂಬಿ ಅವಳ ಕೈ ಮೇಲೆ ನನ್ನ ಪೌರುಷದ ಹನಿಗಳು ಬಿದ್ದು ಅವಳ ಕೈಯನ್ನ ತೊಳೆದವು.
ಅನುಸೂಯ ಯತೀಶ್ ಬರೆಯುವ ಮಕ್ಕಳೊಂದಿಗಿನ ಶಿಕ್ಷಕಿಯ ಅನುಭವ ಕಥನದ ಹೊಸ ಸರಣಿ
ಕಿರಾಣಿ ಅಂಗಡಿ ಮತ್ತು ಅಮ್ಮ ಎಂಬ ಬೆರಗು: ಮಾರುತಿ ಗೋಪಿಕುಂಟೆ ಸರಣಿ
ಬಂದಿದ್ದವರು ಅನುಕೂಲದ ಕುಟುಂಬದವರು. ಮನೆಯ ಗೌರವ ಉಳಿಸುವ ಸಂಕಷ್ಟ ಅಮ್ಮನಿಗೆ. ಇಂತಹ ಸಂದರ್ಭದಲ್ಲಿ ಅಮ್ಮ ಅದ್ಹೇಗೆ ನಿಭಾಯಿಸುತ್ತಿದ್ದಳು ಎಂಬುದು ನನಗೆ ಯಾವಾಗಲೂ ಬೆರಗು. ಇಂದಿಗೂ ಅಮ್ಮ ಅಂದ್ರ ಅದೊಂದು ತಣಿಯಲಾರದ ಆಶ್ಚರ್ಯ. ಅವರು ಆ ದಿನ ಮನೆಯಲ್ಲಿಯೆ ಉಳಿದರು. ಬೆಳಗ್ಗೆ ಅವರಿಗೆ ಅಮ್ಮ ಒಗ್ಗರಣೆಯ ಅನ್ನವನ್ನು ಮಾಡಿದ್ದಳು. ಅವರು ತುಂಬಾ ಚೆನ್ನಾಗಿದೆ ಎಂದು ಉಪಾಹಾರ ಸೇವಿಸಿ ಊರಿಗೆ ಹೊರಟುಹೋದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತೈದನೆಯ ಕಂತು
ಭೂಮಿಯ ಆಳದ ಪಥದಲ್ಲಿ ಚಲಿಸುವ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
“ಅವರ ಕಾವ್ಯದಲ್ಲಿ ಕ್ರಿಸ್ತನ ಕ್ರೂಶಾರೋಹಣ, ಐಸಾಕ್-ನ ತ್ಯಾಗ ಮತ್ತು ಇತರರ, ಹಾಗೂ ತನ್ನ ಸ್ವಂತ ಸಾವಿನ ದೃಶ್ಯಗಳು, ಹಾಗೂ ಪ್ರಾಣಿಗಳ ವಧೆ ಮತ್ತು ದೇಶೀಯ ಜೀವನದ ಅಭಿವ್ಯಕ್ತಿಯಾಗಿ ಬಿಡಿಸಿದ ಚಿತ್ರಗಳೊಂದಿಗೆ ಸಂಯೋಜಿಸಲಾಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಲಿಥುವೇನಿಯಾ ದೇಶದ ಕವಿ ಶಿಗಿತಾಸ್ ಪಾರೂಲ್ಶ್ಕಿಸ್ರ (Sigitas Parulskis) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಜೈಲಿನಲ್ಲಿ ಇಂದ್ರಲೋಕ: ಕೆ. ಸತ್ಯನಾರಾಯಣ ಸರಣಿ
ಎಲ್ಲವೂ ಭರ್ತಿಯಾಗಿದ್ದವು. ಖಾಲಿಯಾದ ತಕ್ಷಣ ಹೊಸಬರು ಯಾರಾದರೂ ತಕ್ಷಣ ಬಂದು ಹಿಡಿದುಕೊಂಡುಬಿಡುತ್ತಿದ್ದರು. ಸಚಿವರು, ನಾಯಕರು, ಪದಾಧಿಕಾರಿಗಳು, ಕುಲಾಧಿಪತಿಗಳು, ಗುತ್ತಿಗೆದಾರರು, ಅಭಿಯಂತರರು, ಒಬ್ಬರ ಮೇಲೆ ಒಬ್ಬರು, ಒಬ್ಬರ ಹಿಂದೆ ಒಬ್ಬರು. ಪಿಸುಮಾತುಗಳಲ್ಲಿ ಕೇಳಿಸಿದ ಪ್ರಕಾರ, ನ್ಯಾಯಾಲವು ಜಾಮೀನು ಆದೇಶವನ್ನು ನೀಡುವಾಗ, ರದ್ದುಪಡಿಸುವಾಗ, ಇಂದ್ರಭವನದಲ್ಲಿ ಯಾವ ರೀತಿಯ, ಯಾವ ಸ್ತರದ ಮನೆಗಳು, ವಿಲ್ಲಾಗಳು ಯಾವಾಗ ಖಾಲಿಯಾಗುತ್ತವೆ….
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ









