ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಕೆ. ದಯಾನಂದ ಕತೆ
ಕಷ್ಟಪಟ್ಟು ಎದ್ದು ಗೋಡೆಗೆ ಒರಗಿಕೊಂಡ ಆಕೆ ಕೈ ಸನ್ನೆ ಮಾಡಿ ನೀರು ಕೇಳಿದಳು. ಹತ್ತಿರದಲ್ಲೇ ನಿಂತಿದ್ದ ಹುಡುಗಿಯೊಬ್ಬಳು ನೀರು ತಂದುಕೊಟ್ಟಳು. ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಆಕೆ ದೊಡ್ಡ ಉಸಿರು ಬಿಟ್ಟು, ‘ಮಗ ಸತ್ತರೆ ತಾಯಿ ಏನು ಹೇಳ್ತಾಳಪ್ಪ. ಮಗ ಸತ್ತ, ಸಾಯಿಸಿದ್ರು’ ಎಂದು ಅಳಲು ಶುರುಮಾಡಿದಳು. ಕಣ್ಣೀರು ಒರೆಸಿಕೊಳ್ಳುತ್ತಾ, ‘ಇನ್ನೊಬ್ಬ ಮಗ ಇದ್ದಿದ್ರೆ ಆ ಪಾಪಿಗಳನ್ನ ಹೊಡೆದುಕೊಂದು ಈ ಸಾವಿಗೆ ಸೇಡು ತೀರಿಸ್ಕೊ ಅಂತ ಹೇಳಬೋದಿತ್ತು. ಆದ್ರೆ ಇದ್ದವ್ನು ಒಬ್ಬನೇ ಮಗ. ಅವನು ವಾಪಸ್ ಬರ್ತಾನಾ’ ಎಂದು ಬರಿಗಣ್ಣುಗಳಿಂದ ಅವನನ್ನು ನೋಡಿದಳು.
ಕೆ. ಪ್ರಭಾಕರನ್ ಅನುವಾದಿಸಿದ ಎಂ ಮುಕುಂದನ್ ಕಥೆ
ಕಾನ್ಫೆರೆನ್ಸ್ ರೂಮಿನ ಪಳ ಪಳಾ ಹೊಳೆಯುತ್ತಿದ್ದ ಮೇಜಿನಮೇಲೆ ಫ್ಲವರ್ ಪಾಟೂ ಮಿನರಲ್ ವಾಟರ್ ಬಾಟಲುಗಳೂ ಬಂದು ನಿಂತವು. ಗಾಜಿನ ಬಾಗಿಲುಗಳ ಮೂಲಕ ನೋಡಿದರೆ, ಮಂಜು ಮುಸುಕಿದ ಪರ್ವತ ಶ್ರೇಣಿಗಳಲ್ಲಿ ಎಳೆಬಿಸಿಲು ಸ್ಪಷ್ಟಗೊಳ್ಳುತ್ತಿರುವುದು, ಮಸುಕಾಗುತ್ತಿರುವುದು ಕಾಣಬಹುದು. ಆಕಾಶದಲ್ಲಿ ಮಳೆಯ ಸೂಚನೆಗಳು ಗೋಚರಿಸುತ್ತಿದ್ದವು. ಅವರು ಕಂಪನಿಯ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾ ವಾದವಿವಾದಗಳನ್ನು ಮುಂದಿಡುತ್ತಿದ್ದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ದಾಕ್ಷಾಯಣಿ ಯಡಹಳ್ಳಿ ಕತೆ
ಗಂಡಗ ಹ್ಯಾಂಗ್ ಹೇಳ್ಳಿ ಅನ್ನ ಚಿಂತ್ಯಾತು. ಕೂಸು ಅತ್ತತ್ತ್ ತೊಡಿ ಮ್ಯಾಲೆ ಮಕ್ಕೊಂತು. ಅಕಿನೂ ಅತ್ತತ್ತ್ ಹೈರಾಣಾಗಿದ್ಲು. ಗಲ್ಲದ್ ಮ್ಯಾಲೆ ಕೈ ಇಟ್ಗೊಂಡು ಚಿಂತೀ ಮಾಡ್ಕೊಂತ ಕುಂತ್ಲು. ಹಂಗ ಕಣ್ಣ್ ಮುಚ್ಚಿದ್ವು. ಬಾಗ್ಲಾ ತಗದು ಪರಪ್ಪ ಒಳ್ಗ ಬಂದಾ. `ಯಾಕ್ ಮಕ್ಕೊಂಡಿಯಲೇ ಏನಾಗೇತಿ, ಗಲ್ಲಕ್ಕ್ ಕೈ ಹಚ್ಚೀದಿ ಗುಡ್ಡ್ ಬಂದು ತೆಲಿ ಮ್ಯಾಲೆ ಬಿದ್ದೈತೇನಂದ”. ಸುಮ್ನ ಇದ್ಲು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ದಾಕ್ಷಾಯಣಿ ಯಡಹಳ್ಳಿ ಬರೆದ ಕತೆ ‘ವರ್ತುಲ’ ನಿಮ್ಮ ಈ ಭಾನುವಾರದ ಓದಿಗೆ
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ
ಮೂಲೆಯ ಮುರುಕು ಬೆಂಚಿನಲ್ಲಿ ಕುಳಿತು ಆ ವ್ಯಕ್ತಿಯ ಮಾತು- ವರ್ತನೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವೆಂಕಪ್ಪ- ಅಣ್ಣುವಿಗೆ ಇನ್ನಷ್ಟು ಕುತೂಹಲವಾಯಿತು. “ಇವನೊಬ್ಬ ಬೋನಸ್ ಆಯುಷ್ಯದಲ್ಲಿ ಬದುಕುತ್ತಿದ್ದಾನೆ. ಇವನ ದುರ್ಬುದ್ಧಿಯನ್ನು ದೇವರು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದಿದ್ದರೆ ಇಷ್ಟರಲ್ಲಾಗಲೇ ಇವನು ಕೊಟ್ಟಾಯಿ ಆಗಿ, ಇವನ ಮೂರನೇ ವರ್ಷದ ಶ್ರಾದ್ಧ ಮುಗಿದಿರಬೇಕಿತ್ತು” ಎಂದು ರಾಮಣನ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದವರು ಈ ಇಬ್ಬರು, ವೆಂಕಪ್ಪ ಮತ್ತು ಅಣ್ಣು. ಇನ್ನಷ್ಟು ದಿನ ಬದುಕಿರಬೇಕಿತ್ತು…
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ ಕತೆ
ನನ್ನೊಳಗೆ ಉಷಾ ಜೀವಂತವಾಗಿಯೇ ಇದ್ದಳು. ಕೆಲವೊಮ್ಮೆ ಕನಸುಗಳಲ್ಲಿ ಬಂದು ತನ್ನ ದುಃಖದ ಕಥೆಗಳನ್ನು ಹೇಳಿಕೊಂಡಳು. ಇನ್ನು ಕೆಲವೊಮ್ಮೆ ಅವಳೊಬ್ಬ ಸದ್ಗೃಹಿಣಿಯಾಗಿ ತಲೆಗೆ ಮಿಂದು, ಕೂದಲು ಕಟ್ಟಿಕೊಂಡು, ಬಟ್ಟೆ ತುರುಬು ಹಾಕಿ, ಮಂಗಲ ಕುಂಕುಮವನ್ನಿಟ್ಟುಕೊಂಡು ನಂದಿನಿ ಹಾಲಿನ ಪ್ಯಾಕೆಟ್ ಮನೆಯೊಳಗೆ ತರುತ್ತಿರುವಂತೆ ಕನಸಾಗುತ್ತಿತ್ತು. ‘ಸದಾಶಿವಯ್ಯನವರ ಮಾತನ್ನು ಎಂದಿಗೂ ನಂಬಬೇಡ’ ಎಂದು ಒಂದು ಸಲ ಹೇಳಿ ಹೋದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಚಿಂತಾಮಣಿ ಕೊಡ್ಲೆಕೆರೆ
ಸದಾಶಿವ ಸೊರಟೂರು ಬರೆದ ಈ ಭಾನುವಾರದ ಕಥೆ
ಬೆಳಕಿರುವ ಜಗದಲ್ಲಿ ತನ್ನವರು ಎಲ್ಲೋ ಕಳೆದು ಹೋಗಿರುವಾಗ ಹುಡುಕಿ ಸೇರಿಕೊಳ್ಳಲು ಹಂಬಲಿಸಿ ಸೋತು ಹೋದಳು. ಸುಮ್ಮನೆ ಅಲೆಯಬೇಕು. ಒಂದೂರಲಿ ಒಂದೆರಡು ದಿನ. ಭಿಕ್ಷೆಯ ಕೂಳು ಹೊಟ್ಟೆಗಿತ್ತು. ಹರಿದ ಎರಡು ದುಪ್ಪಟಿಗಳು ರಾತ್ರಿ ಚಳಿಗಿದ್ದವು. ರಾತ್ರಿ ಮಾತ್ರ ಸ್ನಾನದ ಹಂಗಿನಲ್ಲಿ ಅವಳ ಬೆತ್ತಲೆ ದೇಹವನ್ನು ನೋಡಿತ್ತು. ಆಚೆ ನೆಲದಲ್ಲಿ ಕೂಡಿಸಿಟ್ಟ ಮೂರು ಕಲ್ಲುಗಳು ಅವಳ ಅಡುಗೆ ಮನೆ. ಇಂತಿಪ್ಪ ಆಕೆಯ ಬದುಕು ಬೆಳಕು, ಕತ್ತಲುಗಳ ಮಧ್ಯೆ ನುಗ್ಗುತ್ತಿತ್ತು.
ಸದಾಶಿವ ಸೊರಟೂರು ಬರೆದ ಕಥೆ “ಬಯಲು” ನಿಮ್ಮ ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚೀಮನಹಳ್ಳಿ ರಮೇಶಬಾಬು ಕತೆ
ಮಳೆ ನಿಂತಿತ್ತಾದರೂ ಸಂದಿಯಲ್ಲಿರುವ ನೀರು ಖಾಲಿಯಾಗುವವರೆಗು ಮನೆಯೊಳಗೆ ನೀರು ಬರುತ್ತಲೆ ಇತ್ತು. ಹಾಗಾಗಿ ಅವಳು ಬಹುಪಾಲು ರಾತ್ರಿಯೆಲ್ಲ ಹಾಗೆ ನೀರನ್ನು ಹೊರ ಹಾಕುತ್ತಲೆ ಇದ್ದಳು. ಅದಾದ ಮೇಲೆ ಮಣ್ಣನ್ನೆಲ್ಲ ತೆಗೆದು ಒಂದಷ್ಟು ಸ್ವಚ್ಛಗೊಳಿಸಿದ್ದಳಾದರು ಮುಂಜಾವಿನವರೆಗೂ ತಾರಸಿ ಸೋರುತ್ತಲೆ ಇತ್ತು. ಅವಳು ತುಂಬಿದ ಪಾತ್ರೆಗಳಲ್ಲಿನ ನೀರನ್ನು ಆಚೆ ಚಲ್ಲಿ ಮತ್ತೆ ಅದೇ ಜಾಗದಲ್ಲಿ ಇಡುತ್ತಿದ್ದಳು. ಹೀಗೆ ರಾತ್ರಿಯೆಲ್ಲ ಎದ್ದು ಬಗ್ಗಿ ಓಡಾಡಿ ಹೈರಾಣಾಗಿದ್ದಳು. ರಾತ್ರಿಯ ಕತ್ತಲಲ್ಲಿ ಅದುಮಿಟ್ಟುಕೊಂಡಿದ್ದ ಅವಳೆಲ್ಲ ಭಾವನೆಗಳು ಬೆಳಗಾಗುತ್ತಿದ್ದಂತೆ ಸಿಡಿದು ಸದ್ದು ಮಾಡತೊಡಗಿದವು.
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್”
ಮದಿಮಾಲ್ ನೆನಪಾದರೆ ಯಾಕೋ ನನ್ನ ಕಾಲ್ಗುಣದಿಂದಾಗಿ ಸಾಲು ಸಾಲಾಗಿ ಸತ್ತು ಮಲಗಿದವರೇ ನೆನಪಾಗುತ್ತಿದ್ದರು. ಮೊದಲ ಬಾರಿಗೆ ಆಸೆಯಿಂದ ಗಂಡನ ಮನೆಗೆ ಮದಿಮಾಲ್ ಮೀನು ತೆಗೆದುಕೊಂಡು ಹೋದಾಗ ಅತ್ತೆ ಅದನ್ನು ತೊಟ್ಟೆ ಸಹಿತ ಅಂಗಳಕ್ಕೆ ಬಿಸಾಡಿದ್ದು, ಜಿಮ್ಮಿ ನಾಯಿ, ಮಂಗು ಬೆಕ್ಕು ಆ ಮದಿಮಾಲ್ ಮೀನನ್ನು ಕಚ್ಚಿಕೊಂಡು ಓಡಿ ಹೋದದ್ದು, ಈ ದೃಶ್ಯಗಳೆಲ್ಲವೂ ಕಣ್ಣಿಗೆ ಕಟ್ಟಿದಂತೆಯೇ ಆ ನಂತರವೂ ನನ್ನ ಜೊತೆ ಶಾಶ್ವತವಾಗಿ ಉಳಿದು ಹೋದವು.
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್” ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿದಾನಂದ ಸಾಲಿ ಕತೆ
ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್ಕ್ಲಾಸ್ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ.









