Advertisement
ಆರ್‌. ವಿಜಯರಾಘವನ್‌ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು

ಆರ್‌. ವಿಜಯರಾಘವನ್‌ ಬರೆದ ಅಮರುವಿನ ಶೃಂಗಾರ ಶತಕದ ಕೆಲವು ಕವಿತೆಗಳು

ಮೊದಲು ಪುಟ್ಟ ಮೊಗ್ಗುಗಳಂತಿದ್ದ
ನನ್ನ ಮೊಲೆಗಳು
ನಿನ್ನ ಕೈಗಳಡಿಯಲ್ಲಿ
ಉಬ್ಬಿ ಕೊಬ್ಬಿ ಹೋದವು
ನನ್ನ ದನಿ ನಿನ್ನ ಉಪದೇಶ ಕೇಳಿ
ತಮ್ಮ ಮುಗ್ಧ ಸರಳತೆಯನ್ನು
ಕಳೆದುಕೊಂಡವು
ಏನು ಮಾಡಲಿ
ಈ ನನ್ನ ಪೋಷಕಿಯ
ಕೊರಳ ತೊರೆದು
ನನ್ನ ತೋಳುಗಳು
ನಿನ್ನ ಕೊರಳಿಗೆ ಸುತ್ತಿಕೊಂಡವು
ಆದರೆ ನೀನೋ
ನನ್ನ ನೆರೆಹೊರೆಯಲ್ಲಿ
ಸುಳಿವುದನೇ ಮರೆತುಬಿಟ್ಟೆ
***

ಅವಳು ಅದೆಂತೋ
ಹಗಲ ದೂಡಿಬಿಟ್ಟಳು
ಕಾಯುತ್ತಾ ಅಂದಿನಿರುಳ
ನೂರು ಸಂತೋಷಗಳನ್ನು
ಅವಳಿನಿಯನೂ ಬಂದೇಬಿಟ್ಟ!
ಶಯ್ಯೆಗೆ ಸಲ್ಲುವ ಸಮಯವೂ ಆಯಿತು
ಅವನ ಅರಸಿಕ ಬಂಧುಗಳು
ಅವನೊಡನೆ ರಸಹೀನ ಮಾತುಗಳ
ಆಡುವುದನು ನಿಲ್ಲಿಸಲಾರರು
ಬಯಕೆ ಹೆಚ್ಚಾಗಿ, ಹುಚ್ಚಾಗಿ
ಅವಳು ಚಿಟ್ಟನೆ ಚೀರಿಕೊಂಡಳು
ಅಯ್ಯೋ ನನ್ನನ್ನೇನೋ ಕಚ್ಚಿಬಿಟ್ಟಿದೆ
ಅವಳು ದೀಪದ ಮೇಲೆ
ಅವಳ ಉಡುಗೆಯನ್ನು ಕೊಡವುತ್ತಾ
ಅದನ್ನು ನಂದಿಸಿಯೇಬಿಟ್ಟಳು

***

ನಿನಗೊಂದು ಗುಟ್ಟು ಹೇಳುತ್ತೇನೆ ಬಾ
ಎಂದವನು ಆ ಯಾರೂ ಇಲ್ಲದೆಡೆಗೆ
ನನ್ನ ಕರೆದುಕೊಂಡ
ನನ್ನ ಮಗುವಿನಂತಹ
ಹೃದಯ ಅವನ ಬಳಿ
ಸಾರುತ್ತಿದ್ದಂತೆ ಡವಡವ ಬಡಿದುಕೊಂಡಿತು
ಅವನು ನನ್ನ ಕಿವಿಯಲ್ಲೇನೋ ಉಸುರಿದ
ಬಾಯ ಬಳಿ ಉಸಿರಾಡಿದ
ಬಳಿಕ ಗೆಳತೀ
ಅವನು ಜಡೆಗಳ ಹಿಡಿದು
ನನ್ನ ತುಟಿಗಳ ಇನಿಜೇನ ರಸವನ್ನೆಲ್ಲ
ಹೀರಿಕೊಂಡುಬಿಟ್ಟ.

***

ರಸಗವಳದ ಕೆಂಪು ರಸ
ಅಲ್ಲಲ್ಲಿ ಬಿದ್ದಿದೆ ಚಿಕ್ಕೆ ಚಿಕ್ಕೆ
ಗಂಧದೆಣ್ಣೆಯ ಕಪ್ಪು ಗೆರೆ
ಕರ್ಪೂರದ ಲೇಪದ ಗುರುತು
ಕಾಲಲ್ಲಿದ್ದ ಮದರಂಗಿಯ ಕರೆಯ
ವಿನ್ಯಾಸಗಳ ಊರುಗುರುತು
ಮಗ್ಗುಲುಹಾಸಿಗೆಯ ಮಡಿಕೆಗಳಲ್ಲಿ
ಹೆರಳಿಂದುದುರಿದ ಹೂಪಕಳೆಗಳು
ಸುಖಿಸುತ್ತ ಆ ಹೆಣ್ಣು ತಳೆದಿದ್ದ
ಎಲ್ಲ ಭಂಗಿಗಳ ಕತೆಯನ್ನು
ಈ ಮಗ್ಗುಲುಹಾಸಿಕೆಯು
ಬಿಡಿಸಿ ಹೇಳುತ್ತಿದೆ.

***

ಅವನು ಮಲಗಿಬಿಟ್ಟ
ಪ್ರಿಯ ಗೆಳತಿ, ಹೋಗು
ನೀನೂ ಮಲಗು
ಹೀಗೆಂದು ಗೆಳತಿಯರು
ನನ್ನ ಬಿಟ್ಟು ಹೋದರು
ಅದೊಂದು ಕೆರಳಿದ ಹಸಿವು
ನನ್ನ ಆಪೋಶನ ತೆಗೆದುಕೊಂಡಿತ್ತು
ನಾನು ಅವನ ಬಾಯಿಗೆ ಬಾಯೊತ್ತಿದೆ
ಬಿಗಿಯಾಗಿ. ಆದರವನು
ಆಗ್ಗೇ ಉದ್ರೇಕಿತನಾಗಿದ್ದ
ನನಗದು ಅರಿವಾಯಿತು
ಅವನು ಕಣ್ಣುಗಳ ಮುಚ್ಚಿಕೊಂಡಿದ್ದು
ನನ್ನ ಏಮಾರಿಸಲು
ಅದೆಷ್ಟು ನಾಚಿಕೆಯಾಯಿತು ನನಗೆ!
ಆದರವನು ನನ್ನ ನಾಚಿಕೆಯನ್ನು
ದೂರ ಹೋಗಿಸಿಬಿಟ್ಟ
ತಡರಾತ್ರಿ ಬಯಸಿದ ಸ್ಪರ್ಶಗಳಿಂದ

***

ಇಬ್ಬರೂ ಹಾಸಿಗೆಯಲ್ಲಿ
ಆಚೆ ತಿರುಗಿ ಮಲಗಿದರು
ಸದ್ದಿಲ್ಲದೆ ಅನುಭವಿಸುತ್ತ
ಗುಟ್ಟಾಗಿ ಹೊಂದಾಣಿಕೆಯ
ನಿರೀಕ್ಷಿಸುತ್ತ, ಅದೇ ವೇಳೆ
ಅಪಮಾನವ ನಿರೀಕ್ಷಿಸಿ ಅಂಜುತ್ತ
ಯಾವುದೋ ಒಂದು ಕ್ಷಣ
ಅವರ ಕಳ್ಳನೋಟಗಳು ಬೆರೆತವು
ಅನುದ್ದೇಶಿತ ಗೊಳ್ಳನೆಯ ನಗು ನಕ್ಕರು
ಮುನಿಸು ಮುರಿಯಿತು
ಒಂದೇ ಅಪ್ಪುಗೆಗೆ

***

ಇಂಗ್ಲೀಷಿಗೆ: ಆಂಡ್ರೂ ಶೆಲ್ಲಿಂಗ್ (Andrew Schelling)

About The Author

ಆರ್. ವಿಜಯರಾಘವನ್

ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.

2 Comments

  1. ಚಂದ್ರಪ್ರಭ ಕಠಾರಿ

    ಕವನಗಳು ರಸಭರಿತವಾಗಿದೆ. ಮೆಲುಕು ಹಾಕುವಂತಿವೆ.

    Reply
  2. ಉದಯಕುಮಾರ ಹಬ್ಬು

    ಸಂಭೋಗ ಶೃಂಗಾರದ ವಿವಿಧ ಸಂದರ್ಭಗಳನ್ನು ‌ಅತ್ಯಂತ ರೊಮ್ಯಾಂಟಿಕ್ ಆದ ಸಾಲುಗಳಲ್ಲಿ ಹಿದಿಡಲಾಗಿದೆ.‌ಕಚಗುಳಿ ಇಡುವ ಸಂಭೋಗವು ಸೂಚ್ಯವಾಗಿ ಧ್ವನಿತವಾಗಿದೆ

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ