Advertisement
ಶ್ರುತಿ ಬಿ ಆರ್ ಬರೆದ ಕವಿತೆ: ಕೇವಲ ಒಂದೇ ಒಂದು ಭಾನುವಾರ

ಶ್ರುತಿ ಬಿ ಆರ್ ಬರೆದ ಕವಿತೆ: ಕೇವಲ ಒಂದೇ ಒಂದು ಭಾನುವಾರ

ಕೇವಲ ಒಂದೇ ಒಂದು ಭಾನುವಾರ

ನನ್ನ ಭಾನುವಾರವ ನನಗೆ ಬಿಟ್ಟುಬಿಡಿ
ಇಡೀ ವಾರದ ಧಾವಂತಕ್ಕೆ ಬ್ರೇಕು ಹಾಕಿ,
ಒಂದಷ್ಟು ನಿಧಾನ ದಿನ ಕಳೆಯುತ್ತೇನೆ…

ದಿನ ಪತ್ರಿಕೆಯಲ್ಲಿ ಪದಬಂಧ ತುಂಬುತ್ತಾ
ಬೆಳ್ಳಂಬೆಳಗ್ಗೆ ಬಿಸಿ ಕಾಫಿಯ ಗುಟುಕರಿಸಿ,
ಸೋಮಾರಿತನವನ್ನಷ್ಟು ಆಸ್ವಾದಿಸುತ್ತೇನೆ…

ಚಲ್ಲಾಪಿಲ್ಲಿ ಹರಡಿದ ವಸ್ತುಗಳ ಆಯ್ದು
ಸ್ವಸ್ಥಾನ ಸೇರಿಸಿ ಒಪ್ಪ ಓರಣಗೊಳಿಸಿ,
ಸಮಾಧಾನವಾಗಿ ಸಂಭ್ರಮಿಸುತ್ತೇನೆ…

ಅಂಕೆ ಮೀರಿ ಬೆಳೆದ ಉಗುರ ಕತ್ತರಿಸಿ
ದಣಿದ ಮುಖಕೆ ಹರ್ಬಲ್ ಪ್ಯಾಕ್ ಹಾಕಿ,
ಹಾಡುಗಳ ಕೇಳುತ್ತಾ ವಿರಮಿಸುತ್ತೇನೆ…

ಮಾತಾಡಿ, ಮಾತಾಡಿ ದಣಿದ ಮನಕೆ
ಮುಂದಿನ ವಾರಕ್ಕೆ ಚೈತನ್ಯ ತುಂಬಲು,
ಶುದ್ಧ ಏಕಾಂತದ ಮೌನ ನೀಡುತ್ತೇನೆ…

ಹಸಿದಾಗ ಬಯಸಿದ ಅಡುಗೆಯ ಮಾಡಿ
ಹೊಟ್ಟೆ ತುಂಬಾ ಆರಾಮವಾಗಿ ಉಂಡು,
ಮಧ್ಯಾಹ್ನದ ಜೊಂಪು ನಿದ್ದೆಗೆ ಮಣಿಯುತ್ತೇನೆ…

ಸಂಜೆ ವೇಳೆಗೆ ಟೆರೇಸಿನಲ್ಲಿ ಅಡ್ಡಾಡುತ್ತಾ
ಕಛೇರಿಯೊಳಗೆ ಕರಗುತ್ತಿದ್ದ ಸೂರ್ಯಾಸ್ತವ,
ಕಣ್ತುಂಬಿಕೊಳ್ಳುತ್ತಾ ಕಳೆದುಹೋಗುತ್ತೇನೆ…


ಶ್ರುತಿ ಬಿ ಆರ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಪಿ.ಎಚ್‌.ಡಿ ಪದವಿ ಪಡೆದಿದ್ದಾರೆ

ಪ್ರಸ್ತುತ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜೀರೋ ಬ್ಯಾಲೆನ್ಸ್‌ ಇವರ ಚೊಕ್ಕಲ ಕವನ ಸಂಕಲನ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ಎಂ.ಜವರಾಜ್

    ಸರಳ ಸಾಲುಗಳಲಿ ಕಂಡ ಭಾನುವಾರ
    Fine poem

    Reply
  2. Asha

    ಕವನ ಎಲ್ಲಿದೆ ?

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ