Advertisement

ಕೃಷ್ಣಮೂರ್ತಿ ಹನೂರು

ದಾರಿಯೂ ಬೆಳಕೂ ಆಗುವ ಕಾವ್ಯಧ್ಯಾನ

ಹೊರಗಿನ ಮಾತುಗಳಿಗಿಂತ ಒಳಗಿನ ಅರಳುವಿಕೆ ಕವಿಗೆ ಮಹತ್ವದದ್ದೆನಿಸಿದೆ. ಆತ್ಮದ ಅರಳುವಿಕೆಯಲ್ಲಿ ಹಿಗ್ಗುತ್ತಿರುವ ವಿಕಾಸ ಭಾವವೊಂದು ಹೊರಲೋಕದ ಸುಳ್ಳುಸುಳ್ಳೇ ಚಹರೆಗಳನ್ನು ನೋಡಿ ವಿಹ್ವಲಗೊಳ್ಳುತ್ತದೆ. ಇಂದು ಜೊಳ್ಳುಗಳೇ ವಿಜೃಂಭಿಸುತ್ತಿರುವ ಕಾಲ. ವಿಚಾರ, ದರ್ಶನ, ಭಾವ ಬದುಕು ಎಲ್ಲವೂ ಜೊಳ್ಳು ಮಾದರಿಗಳ ಹಿಂದೆಬಿದ್ದಿದೆ. ಸ್ವರೂಪ ಮರೆಯಾಗಿ ನಾಮಫಲಕಗಳೇ ವಿಜೃಂಭಿಸುವುದು ನಮ್ಮ ಬದುಕಿನ ಅಂತಃಸತ್ವವೇ ತೀರಿಹೋಗಿರುವ ವ್ಯಂಗ್ಯವನ್ನು ಸೂಚಿಸುತ್ತದೆ. ಇಂಥ ಚಿತ್ರಗಳ ಮೂಲಕ ತಮ್ಮ ಹುಡುಕಾಟದ ನೆಲೆ ಏನೆಂಬುದನ್ನು ಅವರ ಕಾವ್ಯವು ನಮಗೆ ಕಾಣಿಸುತ್ತಿದೆ.
ಅಶೋಕ ಹೊಸಮನಿ ಕವನ ಸಂಕಲನ “ಹರವಿದಷ್ಟು ರೆಕ್ಕೆಗಳು” ಕೃತಿಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

Read More

ನಿಂತ ಶಹನಾಯಿಯ ನಾದ: ಕಣವಿಯವರ ಕವಿತೆಯೊಂದರ ಕುರಿತು

ಸೃಷ್ಟಿಯ ನಿಗೂಢತೆಯ ಬಗ್ಗೆ ಸದಾ ವಿಸ್ಮಯವನ್ನು, ಕುತೂಹಲವನ್ನೂ ಹೊಂದಿದ್ದ, ಆ ವಿಸ್ಮಯವನ್ನು ಕಾವ್ಯಸಾಲುಗಳಲ್ಲಿ ಪ್ರತಿಬಿಂಬಿಸುತ್ತಿದ್ದ, ಹಿರಿಯ ಕವಿ ಚೆನ್ನವೀರಣ ಕಣವಿ ತೀರಿಕೊಂಡಿದ್ದಾರೆ. ಚೆಂಬೆಳಕಿನ ಕವಿ, ಸುನೀತಗಳ ಸಾಮ್ರಾಟ, ನಾಡೋಜ ಮುಂತಾದ ಅನೇಕ ಬಿರುದುಗಳು ಅವರಿಗೆ ಸಂದಿದ್ದರೂ ಅವರು, ಕನ್ನಡ ಭಾವಗೀತೆ ಪರಂಪರೆಯ ಶ್ರೇಷ್ಟ ಕವಿಗಳಲ್ಲಿ ಒಬ್ಬರು. ಅವರ ಕಾವ್ಯದಲ್ಲಿ ಭಾವತೀವ್ರತೆಗೇ ಆದ್ಯತೆ.
‘ಪೃಥ್ವಿ ತೂಗಿದೆ ಸೂರ್ಯಚಂದ್ರರಿಗೂ ಜೋಕಾಲಿ’ ಎಂದು ಬರೆದ ಕವಿ ಅವರು. ಅವರು ಬರೆದ  ‘ಬಿಸ್ಮಿಲ್ಲಾರ ಶಹನಾಯಿ ವಾದನ ಕೇಳಿ’ ಕವಿತೆಯ ಕುರಿತು ಲೇಖಕಿ…

Read More

ಡಾ. ಗೀತಾ ವಸಂತ ಬರೆದ ಕವಿತೆ: ತೊಟ್ಟು ಕಳಚಿದ ಹೂವು

“ಕೆರೆಯಂಚಿನ ಹಾದಿಯಲಿ ಅಪ್ಪನ ಅರಲುಮೆತ್ತಿದ ಹೆಜ್ಜೆ
ಕಾಲದಾಚೆಗೆ ನಡೆದುಹೋದಂತಿದೆ
ನೀರಿಗೆ ಗಾಳಿಸೋಕಿ ಅಲೆಯ ಉಂಗುರವೆದ್ದು
ಅಂತಪಾರವಿಲ್ಲದೆ ವಿಸ್ತರಿಸಿದೆ”- ಡಾ. ಗೀತಾ ವಸಂತ ಬರೆದ ಕವಿತೆ

Read More

‘ಕಂಡವರಿಗಷ್ಟೇ’ ಪುಸ್ತಕಕ್ಕೆ ಡಾ. ಗೀತಾ ವಸಂತ ಬರೆದ ಸಂಪಾದಕೀಯ ನುಡಿ

“ಮನುಷ್ಯನ ತರ್ಕದಾಚೆಗೆ ಸೃಷ್ಟಿಯ ಮಿಡಿತವಿರುತ್ತದೆ. “ಅನುಭವವು ಜಗತ್ತಿನ ಕಾರಣಗಳನ್ನು ಹುಡುಕುತ್ತಿದೆ. ಅನುಭಾವವು ಜಗತ್ತಿನ ಕರ್ತೃವನ್ನೇ ಹುಡುಕುತ್ತಿದೆ. ಅನುಭವಕ್ಕೆ ತಿಳಿಯಾದ, ಹದವಾದ, ಸ್ಥಿರವಾದ ಎಚ್ಚರವೇ ಬೇಕು; ಅದಷ್ಟೇ ಸಾಕು. ಅನುಭಾವಕ್ಕೆ ಇದೇ ಜಾತಿಯ ಎಚ್ಚರವೇ ಬೇಕು. ಆದರೆ ಅದು ಕನಸಿನಾಚೆಯ ನಿದ್ದೆಯಲ್ಲ. ನಿದ್ದೆಯಾಚೆಗಿನೆಚ್ಚರ. ನಿದ್ದೆಯಾಚೆಗೊಂದು ಎಚ್ಚರದ ಹಿಮಾಲಯವಿದೆ. ಅದರ ಎತ್ತರದಿಂದ ಬಹಳ ವಿಸ್ತಾರವಾದ ದೃಶ್ಯವು ಗೋಚರವಾಗುವುದು. ಈ ಎತ್ತರದ ಮೇಲಿನ ಎಚ್ಚರಕ್ಕೆ ‘ಸಮಾಧಿ’ ಎಂದು ಹೇಳುವರು.”

Read More

ಮರ್ತ್ಯದ ಋಣತೀರಿಸಿ ಅಮರರಾದ ಆಮೂರರು: ಡಾ. ಗೀತಾ ವಸಂತ ಲೇಖನ

“ಆಮೂರರು ಮೊದಲ ಬರವಣಿಗೆ ಗುರುತಿಸಲ್ಪಟ್ಟದ್ದು ಇಂಗ್ಲೀಷ್ ನಿಬಂಧದ ಮೂಲಕವೇ. ಕುವೆಂಪು ಆದಿಯಾಗಿ ಆ ಕಾಲದ ಸೃಜನಶೀಲರಿಗೆ ಈ ವಸಾಹತುಶಾಹಿ ಭಾಷೆಯ ಆಕರ್ಷಣೆ ಉಂಟಾಗಲು ಹಲವು ಕಾರಣಗಳಿವೆ. ಆದರೆ ಆಮೂರರ ಸಾಹಿತ್ಯ ಸಂವೇದನೆ ಬೆಳೆದದ್ದು ಚಿಕ್ಕಂದಿನಲ್ಲಿ ಸಂಸ್ಕೃತದ ಶಾಸ್ತ್ರೀಯ ಕಾವ್ಯಗಳನ್ನು ಓದುವ ಮೂಲಕ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ