Advertisement
ರಂಜಾನ್ ದರ್ಗಾ

ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.

ಹಾರಿಹೋದ ಹಿಂದೂಸ್ತಾನದ ಹಕ್ಕಿ

ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.

Read More

ಕೆ.ಎಸ್.ಅಶ್ವಥ್ ಕುರಿತು ಅಮೆರಿಕಾದಲ್ಲಿರುವ ಗೆಳೆಯ

ಅಶ್ವಥ್ ಅವರ ಪರಿಚಯವೂ ನನಗೆ ನಾಟಕದ ಮೂಲಕವೇ ಆದದ್ದು. ಆ ಕಾಲದಲ್ಲಿ ಮೈಸೂರಲ್ಲಿ ನಮಗಿದ್ದ ನಾಟಕ ಮಾಧ್ಯಮಗಳು ಎರಡೇ- ಹವ್ಯಾಸೀ ನಾಟಕ ರಂಗ (ಮುಖ್ಯವಾಗಿ ಕಾಲೇಜು ನಾಟಕ ರಂಗ), ಮತ್ತು ರೇಡಿಯೋ ನಾಟಕ ರಂಗ.

Read More

ಗೋಳುಹೊಯ್ದುಕೊಳ್ಳಲು ಬೇಕೊಬ್ಬಳು ತಂಗಿ: ಎಚ್ ವೈ ರಾಜಗೋಪಾಲ್ ಬರಹ

ಆದರೆ ನಾನಿರುವುದು ಅವಳಿಂದ ಹತ್ತು ಸಾವಿರ ಮೈಲು ದೂರದಲ್ಲಿ. ನಿಜ, ಮಾನಸಿಕ ಹತ್ತಿರ ಭೌಗೋಳಿಕ ಹತ್ತಿರಕ್ಕಿಂತ ಹೆಚ್ಚು ಮುಖ್ಯ. ಆದರೂ ದಿನನಿತ್ಯಕ್ಕೆ ಒಬ್ಬ ತಂಗಿ ಬೇಕು ಎನ್ನಿಸಿದೆ ನನಗೆ. ಗೋಳುಹೊಯ್ದುಕ್ಕೊಳ್ಳುವುದಕ್ಕಲ್ಲ, ಪ್ರೀತಿಸುವುದಕ್ಕೆ. ನನ್ನ ಅದೃಷ್ಟವೋ ಏನೋ, ನನಗೆ ಅಂಥ ಹಲವಾರು ತಂಗಿಯರು ಈ ದೂರದೇಶದಲ್ಲಿ ಸಿಕ್ಕಿದ್ದಾರೆ.

Read More

ಎಚ್ ವೈ ರಾಜಗೋಪಾಲ್ ಹೇಳಿದ ‘ಬಗ್ದಾದಿಗೆ ಬಂದ ಮೃತ್ಯು ದೂತ’ ಎಂಬ ಸೂಫಿ ಕಥೆ

ಈ ಸತ್ಕಾರ್ಯಗಳನ್ನೆಲ್ಲ ಅವನು ಮಾಡುತ್ತಿದ್ದುದು ಅವನ ಮನಸ್ಸಿನಲ್ಲಿ ಅದರ ಬಗ್ಗೆ ಎಚ್ಚರವಿದ್ದಾಗ ಮಾತ್ರ. ಆದರೆ ಆಗಾಗ ಅವನಿಗೆ ಆ ಎಚ್ಚರ ತಪ್ಪುತ್ತಿತ್ತು. ಅದೊಂದು ಲೋಪ ಅವನಲ್ಲಿ.

Read More

ಎಚ್ ವೈ ರಾಜಗೋಪಾಲ್ ಹೇಳಿದ ‘ನೀರು ಮತ್ತು ಮರಳು’ ಎಂಬ ಸೂಫಿ ಕಥೆ

ನದಿ ಆಗ ತನ್ನನ್ನು ಆವಿಯಾಗಿ ಮಾರ್ಪಡಿಸಿಕೊಂಡು ತನ್ನನ್ನು ಅಕ್ಕರೆಯಿಂದ ಬರಮಾಡಿಕೊಳ್ಳಲು ಕೈಚಾಚಿ ಸಿದ್ಧವಾಗಿದ್ದ ಗಾಳಿಯ ತೋಳತೆಕ್ಕೆಗೆ ಸೇರಿತು. ಗಾಳಿ ಅದನ್ನು ಮೃದುವಾಗಿ ಎತ್ತಿಕೊಂಡು ಆಕಾಶದಲ್ಲಿ ಮೇಲಿನಮೇಲೆ ಏರಿ ನೂರಾರು ಮೈಲು ದೂರ ಸಾಗಿತು.

Read More
  • 1
  • 2

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ