Advertisement

ಕೆಂಡಸಂಪಿಗೆ

ಹೂ ಅರಳುವ ಸಮಯ…

ʻನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರʼ.
ಚೈತ್ರ ಶಿವಯೋಗಿಮಠ ಕವನ ಸಂಕಲನ “ಪೆಟ್ರಿಕೋರ್‌”ಗೆ ತಾರಿಣಿ ಶುಭದಾಯಿನಿ ಬರೆದ ಮಾತುಗಳು

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕತೆ

ಸಾತಪ್ಪಗ ಇಕಾಡಿದಿಕಾಡಿ ಕುಡಿಯೂ ಚಟಾ ಬಿದ್ದಂಗಿತ್ತು. ಮೊದ ಮೊದಲ ಅಪರೂಪಕ್ಕೊಮ್ಮ ಹೊಲದೊಳಗ ರಾಶಿ ಇದ್ದಾಗ… ಯಾರದರೇ ಕಣಕ್ಕ ಹೋದರ, ಇಲ್ಲಾಂದ್ರ ಭಜನಾಕ ಹೋದರ ಅಷ್ಟೇ ಕುಡೀತಿದ್ದ. ಈಗೀಗ ಎರಡು ದಿನಕ್ಕೊಮ್ಮ ಕುಡಿಯಾಕ ಸುರು ಮಾಡಿದ್ದ. ರೊಕ್ಕ ಈಡಾಗಲಿಲ್ಲಂದ್ರ ಅಲ್ಲಿ ಇಲ್ಲಿ ಸಾಲಾ ತಗೊಂತಿದ್ದ. ವಿಜಯಪುರದೊಳಗ ಒಂದಿಬ್ಬರು ಅಡತ ಅಂಗಡಿಯವರಿದ್ದರು. ಸಾತಪ್ಪನ ಅಪ್ಪ ಬೋಜಪ್ಪ ಇದ್ದಾಗಿನಿಂದಲೂ ಅಲ್ಲೇ ವ್ಯವಹಾರ ಮಾಡಕೊಂಡು ಬಂದವರು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕಥೆ “ಕೇಡುಗಾಲದ ಕುದುರೆ”

Read More

ಜಯರಾಮಚಾರಿ ಬರೆದ ಈ ದಿನದ ಕವಿತೆ

“ನೀನಿರಬೇಕಿತ್ತು,
ನಾ ಬರುವ ದಿಕ್ಕ ಕಾದು ನಡುರಾತ್ತಿಯಲ್ಲೂ ಗಕ್ಕನೆ ಕದ ತೆರೆಯಲು,
“ಏನು ತಿಂದೆ?” ಎಂಬ ಕೊನೆಯೇ ಕಾಣದ ಪ್ರಶ್ನೆ ಕೇಳಲು,
ನಾ ನಿನಗೆ ಸೀರೆ ತಂದ ದಿನ ಕಣ್ತುಂಬಿ
ಅಪ್ಪನ ನೆನಸಿ ಕೆನ್ನೆಗೆ ಮುತ್ತಿಡುವಾಗ ಬಿಸಿ ಕಣ್ಣ ಹನಿಯಾಗಲು”- ಜಯರಾಮಾಚಾರಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ