Advertisement

ಕೀರ್ತಿ ಬೈಂದೂರ್

ಭಿನ್ನ ನೋಟದ ಪ್ರವಾಸ ಕಥನ: ಡಾ. ಪ್ರೇಮಲತ ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

ನಮ್ಮ ಲೇಖಕರಲ್ಲಿ ವಿ.ಕೃ. ಗೋಕಾಕರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಫಸ್ಟ್ ರ್ಯಾಂಕ್ ಗಳಿಸಿದರಷ್ಟೆ. ಯು.ಆರ್. ಅನಂತಮೂರ್ತಿಯವರೂ ಕವಿ ರಾಮಚಂದ್ರ ಶರ್ಮರೂ ಕೆಲವು ವರ್ಷ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುಂಟು. ತರುಣ ಲೇಖಕರಲ್ಲಿ ಮುಖ್ಯವಾಗಿ ವಿವೇಕ ಶಾನಭಾಗರು ಉದ್ಯೋಗನಿಮಿತ್ತ ನಾಲ್ಕಾರು ವರ್ಷ ಲಂಡನ್ನಿನಲ್ಲಿದ್ದರು. ಇವರು ಯಾರೂ ಅಪ್ಪಿತಪ್ಪಿ ಕೂಡ ಯುನೈಟೆಡ್ ಕಿಂಗ್ಡಮ್ಮನ್ನು ಭಾರತದೊಡನೆ ತುಲನೆ ಮಾಡಲಿಲ್ಲವೆನ್ನುವುದು ಗಮನಾರ್ಹ. ಆದರೂ ಹಾಗೆ ತುಲನೆ ಮಾಡಿ ಬರೆಯುವುದರಿಂದ ಕೆಲವರು ಓದುಗರಾದರೂ ನಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬಹುದು. ಅವರಲ್ಲಿ ಇದಕ್ಕೇನು ಪರಿಹಾರವಿದ್ದೀತು ಎಂಬೊಂದು ಜಿಜ್ಞಾಸೆಯೇ ಉಂಟಾಗಬಹುದು. ಒಟ್ಟಿನಲ್ಲಿ ಅದೊಂದು ಒಳ್ಳೆಯ ಆಶಯವೇ.
ಡಾ. ಪ್ರೇಮಲತ ಬಿ. ಬರೆದ “ವಿದೇಶ ಪ್ರಯಾಣ… ಕೈತುಂಬ ಕಾಂಚಾಣ” ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

Read More

ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

“ಅರೆ ಏನಿದು? ನೊಡಿದೆ ಕನ್ನಡಕ ಸರಿಪಡಿಸಿ!
ಹರಿದಾಡುತ್ತಿದ್ದವು ಒಂದಿಷ್ಟು ಇರುವೆಗಳು
ಅರಿವಿನ ಅಕ್ಷರಗಳೇ ಮೈಪಡೆದು ಚಲಿಸಿದಂತೆ!

ಕಿಲಕಿಲನೆ ನಕ್ಕಳು ನಕ್ಷತ್ರ ಹೊಳೆದಂತೆ
ಬೆನ್ನ ಹಿಂದೆ ನಿಂತ ಪುಟ್ಟ ಮೊಮ್ಮಗಳು
ಸಕ್ಕರೆ ಹಿಡಿದ ಅಕ್ಕರೆಯ ಚಿಕ್ಕ ಕೈಗಳಿಂದ
ಪಟಪಟನೆ ಚಪ್ಪಾಳೆ ತಟ್ಟುತ್ತ!” -ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

Read More

ಸುಮುಖ ಭಾರದ್ವಾಜ ಜಿ.ವಿ. ಬರೆದ ಈ ದಿನದ ಕವಿತೆ

“ಗಾಢ ನಿದ್ರೆಯ ಕನಸಲಿ ಸಿಕ್ಕ ಪಾತ್ರದಂತೆ,
ಆಪ್ತನೆನಿಸಿದರೂ ಅಪರಿಚಿತ —
ನೆನೆದಷ್ಟು ಮಬ್ಬು ಮಬ್ಬು.

ಮನೆಯವರನ್ನು ಕೇಳಿದರೆ
“ನೀನೇ” ಎಂದು ನಗುತ್ತಾರೆ,
“ಎಷ್ಟು ಚೆಂದ ಇದೆ ಇದು” ಎಂದು ಹೊಗಳುತ್ತಾರೆ.” -ಸುಮುಖ ಭಾರದ್ವಾಜ ಜಿ.ವಿ. ಬರೆದ ಈ ದಿನದ ಕವಿತೆ

Read More

“ಬಿಗಿ ಹಿಡಿದ ಮುಷ್ಟಿಯಲಿ ನವಿರು ಪ್ರೇಮದ ಘಮಲು”: ಎಂ. ತರುಣ್‌ ಕೃತಿಗೆ ಮೋದೂರು ತೇಜ ಮುನ್ನುಡಿ

ನಿಜವಾದ ಕವಿಗೆ ಒಳಗಣ್ಣು ತೆರೆದಿದ್ದಾಗ ಮಾತ್ರ ತನ್ನ ಸುತ್ತಲಿನ ವಸ್ತುಗಳಾಗಲಿ, ವ್ಯಕ್ತಿಗಳಾಗಲಿ ವಿಶೇಷವಾಗಿ ಕಾಣಿಸುತ್ತಾರೆ. ಅಂತಹ ಕಾಣುವ ಕಾಣ್ಕೆ ಈ ಯುವ ಕವಿ ದಕ್ಕಿಸಿಕೊಂಡಿದ್ದಾರೆ. ಆದರೆ ಅವಸರದ ಬೆನ್ನೇರಿ ಕುಳಿತಿರುವ ನಮಗೆ ಯಾವುದನ್ನೂ ಸಾವಧಾನವಾಗಿ ನೋಡುವ, ಕಾಣುವ ತಾಳ್ಮೆ, ತುಡಿತ ಇಲ್ಲದಂತಾಗಿದೆ. ಮೊಬೈಲ್‌ ಎಂಬ ಮಾಯಾಲೋಕ ಅಂಗೈಗೆ ಬಂದ ಮೇಲೆ ಎಲ್ಲವನ್ನೂ ಮೈಮರೆಯುವಂತೆ ಮಾಡುತ್ತಿರುವಾಗ, ಅದರಲ್ಲೂ ತಾನು ಬರೆದಿದ್ದೆಲ್ಲವೂ ಪ್ರಕಟಿಸಲು ಸಾಮಾಜಿಕ ಜಾಲತಾಣಗಳ ವೇದಿಕೆಗಳಿರುವಾಗ ಕಾಯುವ ಗುಣ ಯಾರಿಗೂ ಇಲ್ಲಂತಾಗಿದೆ. ಹಾಗಂತ ಎಲ್ಲರೂ ಸಂತೆಗೆ ಮೂರು ಮೊಳ ಕಂಬಳಿ ನೇಯುವಂತೆ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆಂದು ಹೇಳಿದರೆ ತಪ್ಪಾಗುತ್ತದೆ.
ಎಂ. ತರುಣ್‌ ಕವನ ಸಂಕಲನ “ಬಿಗಿ ಹಿಡಿದ ಮುಷ್ಟಿಯಲಿ”ಕ್ಕೆ ಮೋದೂರು ತೇಜ ಬರೆದ ಮುನ್ನುಡಿ

Read More

ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

“ಮಣ್ಣಲ್ಲಿ ಈವರೆಗೆ ಹುಟ್ಟಿದ ಎಲ್ಲಾ ಹೆಣ್ಣುಗಳು 
ಮುಖಕ್ಕೆ ಬಣ್ಣ ಬಳಿದುಕೊಂಡು 
ಮುಡಿಗೆ ಮಲ್ಲಿಗೆ ಮುಡಿದುಕೊಂಡು
ವಯ್ಯಾರ ಮಾಡಿಕೊಂಡು 
ದಾರಿಯ ತುಂಬುತ್ತಾ 
ಪ್ರಚಂಡ ಮಹಾಭೋಗಕ್ಕೆ ಆಹ್ವಾನಿಸುವುದನ್ನು ಕಂಡು  
ದಿಗ್ಭ್ರಮೆಗೊಂಡು ಉದ್ರೇಕಗೊಂಡು
ಎಣಿಸಲಾರದಷ್ಟು ತುಟಿಗಳು ಮೊಲೆಗಳು 
ಗುಪ್ತಾಂಗದಿಂದ ಧುಮ್ಮಿಕ್ಕಿ ಬಂದ 
ಅಗಾಧ ನೀರಿನೊಳಗೆ 
ಮುಳುಗಿ, ಮೇಲೆದ್ದು, ಮತ್ತೆ ಮುಳುಗಿ
ಸತ್ತ 
ಉಬ್ಬಿ 
ದಡಕ್ಕೆ ಬಿದ್ದ”- ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ