Advertisement

ಬಸವನಗೌಡ ಹೆಬ್ಬಳಗೆರೆ

“ಎನಫ್ ಕಣೋ ಅವನ ನಗು ಮುಖ ನೋಡಿದ್ಯಲ್ಲ. ಸಾಕು ಇಷ್ಟೆ”

ಹಾಗೆ ಮುಂದೆ ಸಾಗುತ್ತಾ ಬಲಬದಿಯ ರಸ್ತೆ ಯೊಂದನ್ನು ತೋರಿಸಿ “ಇಲ್ಲೊಂದು ಮಜಾ ಇತ್ತು ಕಣಯ್ಯಾ. ಹೀಗೆ ಇಲ್ಲಿ ಒಮ್ಮೆ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದೆ. ಆಗೆಲ್ಲ ಅಂಬಾಸಿಡರ್ ಮಾತ್ರ ಇದ್ವು. ಸಾರ್ ಈ ದಾರಿ ಚಿಕ್ಕಮಗಳೂರಿಗೆ ಹೋಗುತ್ತೆ ಷಾರ್ಟ್ ಕಟ್ ಅಂದ. ಸರಿ ನೋಡೇ ಬಿಡೋಣ ಎಂದು ಹೊರಟೆವು. ಹೋಗ್ತೀವಿ ಬರಿ ಅಪ್ಪು ಕಣೋ. ಕಾರ್ ಬೇರೆ ಹತ್ತಂಗಿಲ್ಲ ಸಾಕಾಗಿ ಹೋಯ್ತು. ನಾನು ಕಾರ್ ಇಳಿದು ವಾಪಾಸ್ ಬಾರದಿರಲು ಚಪ್ಪಡಿ ಕಲ್ಲು ಹಿಡಿದುಕೊಂಡು ಹಿಂದೆ ಕಲ್ ಇಡೋದು, ಡ್ರೈವರ್ ಹತ್ಸದು, ಸಾಕಾಗಿ ಹೋಯ್ತು ಕಣಯ್ಯ.”
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಕುಪ್ಪಳ್ಳಿಯಲ್ಲಿ ಕೆಟಿಎಸ್ ಜೊತೆ…

ಪೂರ್ಣಚಂದ್ರರ ಆತ್ಮೀಯರಲ್ಲೊಬ್ಬರಾದ ಕೆ.ಟಿ. ಅವರ ಖಾಸಾ ಗೆಳೆಯ ಕೂಡ. ವಿಪರ್ಯಾಸ ಎಂದರೆ ಇದೇ ನೋಡಿ, ಕುವೆಂಪು ತೀರಿಕೊಂಡಾಗ ಇದೇ ತೇಜಸ್ವಿ ಜತೆಗೂಡಿ ಕವಿಶೈಲದ ಕುವೆಂಪು ಸ್ಮಾರಕ ಕಲ್ಪನೆಯನ್ನು ಸಾಕಾರಗೊಳಿಸಿದ್ದವರು ಕೆ.ಟಿ. ಮುಂದೆ ತೇಜಸ್ವಿಯ ಸ್ಮಾರಕವನ್ನೂ ಸ್ವತಃ ಕೆ.ಟಿ. ನಿರ್ಮಾಣ ಮಾಡುತ್ತಾರೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ದುರಾದೃಷ್ಠವಶಾತ್ ತೇಜಸ್ವಿ ಸಾವು ಅವರ ಸ್ಮಾರಕ ಕಲ್ಪನೆಯನ್ನೂ ಕೆ.ಟಿ.ಯೇ ಮಾಡುವಂತಾಗಿದ್ದು ವಿಪರ್ಯಾಸ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಭದ್ರಾ ದಂಡೆಯಲ್ಲಿ ತೇಜಸ್ವಿಯೊಂದಿಗೆ ಮೀನು ಹಿಡಿದಿದ್ದು…

ಹೀಗೆ ತೇಜಸ್ವಿ ಮನೆ ಕಟ್ಟುವಾಗ ಪ್ರೊಫೆಸರ್ ಬಂದಿದ್ದರು. ತೇಜಸ್ವಿ ಹಕ್ಕಿಗಳನ್ನು ವೀಕ್ಷಿಸಲು ಬೈನಾಕುಲರ್ ಇಟ್ಟುಕೊಂಡಿದ್ದರು. ಹೀಗೆ ಒಂದು ದಿನ ಕಾರಿನಲ್ಲಿ ಎಲ್ಲರೂ ಹೋಗುತ್ತಿದ್ದೆವು. ಪ್ರೊಫೆಸರ್ ಬೈನಾಕ್ಯೂಲರನ್ನು ತೇಜಸ್ವಿಯಿಂದ ಪಡೆದುಕೊಂಡು ಪಕ್ಷಿ ನೋಡುತ್ತೇನೆ ಎಂದು ಪಡೆದುಕೊಂಡರು. ಸಾಕಷ್ಟು ಏನೇನೋ ಮಾಡಿದರೂ ಹಕ್ಕಿಗಳು ಪ್ರೊಫೆಸರ್‌ಗೆ ಹತ್ತಿರದಿಂದ ಕಾಣಿಸಲಿಲ್ಲ. ಇದರಿಂದ ಬೇಸತ್ತ ಪ್ರೊಫೆಸರ್. ‘ಇದ್ರಲ್ಲಿ ಏನೂ ಕಾಣೋದೆ ಇಲ್ವಲ್ರಿ’ ಎಂದು ತೇಜಸ್ವಿ ಕೈಗೆ ಕೊಟ್ಟರು. ತೇಜಸ್ವಿ ತೆಗೆದುಕೊಂಡು ಒಮ್ಮ ಕಾರಿನಿಂದ ಆಚೆ ವೀಕ್ಷಿಸಿ ‘ರೀ ಪ್ರೊಫೆಸರ್ ನಿಮ್ಗೆ ತಿ.. ಕಡಿಯುತ್ತಾ..ʼ ಎಂದರು. ನನಗೋ ನಗು ತಡೆದುಕೊಳ್ಳಲಾಗಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಮನೆ ಕಟ್ಟುವಾಗ ‘ಸೆಂಟರ್ ಲೈನ್’

ಮನೆ ಕಟ್ಟುವ ಕಾರ್ಯಕ್ರಮ ಪ್ರಾರಂಭವಾಯಿತು. ಒಂದು ದಿನ ಮೇಸ್ತ್ರಿ ಬಂದವನೇ, ‘ಸೆಂಟರ್ ಲೈನ್’ ಕೊಡಿ ಎಂದ.
ನನಗೋ ಹಾಗಂದರೆ ಏನು ಎಂದು ಗೊತ್ತಿಲ್ಲ. ತೇಜಸ್ವಿಯವರನ್ನು ಕೇಳಿದೆ. ‘ನನಗೂ ಗೊತ್ತಿಲ್ಲ ಶಿವ’ ಎಂದರು. ಬೇರೆಯವರನ್ನು ಕೇಳಿದರೆ ಎಲ್ಲಿ ಏನಂದುಕೊಳ್ಳುತ್ತಾರೋ ಎಂಬ ನಾಚಿಕೆ. ಮೇಸ್ತ್ರಿಯನ್ನು ಕರೆದು ಕೂರಿಸಿಕೊಂಡು ಒಂದು ವಾರ ತಡೆಯಿರಿ ಎಂದೆ. ಸಾಕಷ್ಟು ಪುಸ್ತಕ ರೆಫರ್ ಮಾಡಿಕೊಂಡೆ. ನಾನು ಕೂಡ ಎಂಜಿನಿಯರ್ ಓದಿದ್ದರಿಂದ ಬೇಗ ಕಂಡು ಹಿಡಿದುಕೊಂಡೆ. ಅವರ ಕಲ್ಪನೆಯಂತೆ ಮನೆ ಶುರು ಮಾಡಿ ಬೇಗವೇ ಮುಗಿಸಿದೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ