Advertisement

ಕೀರ್ತಿ ಬೈಂದೂರ್

‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್‌ ರಶೀದ್‌ ಕವನ ಸಂಕಲನಕ್ಕೆ ಎಸ್‌. ಮಂಜುನಾಥ್‌ ಮುನ್ನುಡಿ

ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.
ಅಬ್ದುಲ್‌ ರಶೀದ್‌ ಕವನ ಸಂಕಲನ “ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ”ಗೆ ಎಸ್‌. ಮಂಜುನಾಥ್‌ ಬರೆದ ಮುನ್ನುಡಿ

Read More

ಗುರುರಾಜ ಹೇರ್ಳೆ ಬರೆದ ಈ ದಿನದ ಕವಿತೆ

“ಪುಟ್ಟ ಕೆಂಪನೆ ಬಿಂದಿ ಹಣೆಯ ಸಿಂಗರಿಸಿರಲು
ಮೂಗಿನಲಿ ನತ್ತೊಂದು ಹೊಳೆಯುತಿಹುದು,
ಕಿವಿಗಳಲಿ ಮಿನುಗುತಿದೆ ಜೋಲಾಡುವ ಜುಮುಕಿ
ಕೊರಳಲ್ಲಿ ತಾಳಿ ಸರ ಬೆಳಗುತಿಹುದು…”- ಗುರುರಾಜ ಹೇರ್ಳೆ ಬರೆದ ಈ ದಿನದ ಕವಿತೆ

Read More

ಒರಿಸ್ಸಾ ವಾಸ್ತುಕಲೆ: ಡಾ. ಜೆ. ಬಾಲಕೃಷ್ಣ ಬರಹ…..

ಒರಿಸ್ಸಾದ ವಾಸ್ತು ಶಿಲ್ಪಿಗಳು ದೇಗುಲಗಳನ್ನು ದೇವರ ಅಥವಾ ಮಾನವನ ದೇಹಕ್ಕೆ ಹೋಲಿಸಿದ್ದರು. ಆದುದರಿಂದಲೇ ದೇಗುಲದ ವಿವಿಧ ಭಾಗಗಳಿಗೆ ದೇಹದ ಅಂಗಗಳ ಹೆಸರುಗಳನ್ನೇ ನೀಡಿದ್ದಾರೆ: ಪಾಭಗ (ಪಾದ), ಜಂಘ (ಮೊಣಕಾಲು), ಗಂಡಿ, ಮಸ್ತಕ ಮುಂತಾದವು. ಮುಖ್ಯ ಶಿಖರವುಳ್ಳ ದೇಗುಲವನ್ನು ಗಂಡು ಅಥವಾ ಮದುಮಗನೆಂದೂ ಹಾಗೂ ಜಗಮೋಹನ ದೇಗುಲವನ್ನು ಹೆಣ್ಣು ಅಥವಾ ಮದುಮಗಳೆಂದೂ ಭಾವಿಸಲಾಗುತ್ತಿತ್ತು. ಒರಿಸ್ಸಾದ ದೇಗುಲಗಳಲ್ಲಿ ವಾಸ್ತು ಕಲೆ ಹಾಗೂ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವೇ ಇಲ್ಲ. ಆದುದರಿಂದಲೇ ಕಲಾ ಸಂಶೋಧಕಿ ಡಾ.ಸ್ಟೆಲ್ಲಾ ಕ್ರಮರೀಷ್ `ಒರಿಸ್ಸಾದ ವಾಸ್ತುಕಲೆ ದೈತ್ಯಾಕಾರದ ಶಿಲ್ಪಕಲೆ’ ಎಂದಿದ್ದಾರೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ

Read More

ಶೋಭಾ ಹಿರೇಕೈ ಕಂಡ್ರಾಜಿ ಬರೆದ ಈ ದಿನದ ಕವಿತೆ

“ಬಣ್ಣ ಮಾರುವವರೇ..
ನಿಮ್ಮ ರಂಗು ರಂಗಿನ
ಶಾಲು ರುಮಾಲುಗಳನ್ನೆಲ್ಲಾ
ಇಲ್ಲಿ ಮಾರದೆ
ನಿಮ್ಮ ಸೊಂಟಕ್ಕೇ… ಸುತ್ತಿಕೊಳ್ಳಿ
ನಾನಿಲ್ಲಿ..
ಸಮವಸ್ತ್ರವನ್ನು ಹಂಚುತ್ತಿದ್ದೇನೆ.”- ಶೋಭಾ ಹಿರೇಕೈ ಕಂಡ್ರಾಜಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ