Advertisement
ರವಿ ಮಡೋಡಿ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‌‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು.  ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ  ‘ಮಲೆನಾಡಿನ ಯಕ್ಷಚೇತನಗಳು’  ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪಾತ್ರೆಗಳ ರಾಶಿ, ಕಾಡುನಡುಗಿಸುವ ಹುಲಿಗರ್ಜನೆ

ಒಳಗೇನೋ ಕೆಲಸದಲ್ಲಿ ನಿರತರಾಗಿದ್ದ ಹಲೀಮಾರು ಪೆರ್ನುವನ್ನು ನೋಡಿ ಹೊರಗೆ ಬಂದರು. ಇದಿನಬ್ಬ ತನ್ನಕ್ಕನ ಮನೆಯಲ್ಲಿ ಇಲ್ಲ ಎಂಬ ವಿಷಯ ಕೇಳಿದ ಕೂಡಲೇ ಹಲೀಮಾ ಕುಸಿದು ಕುಳಿತರು. ಮಗನ ಮುಖ ಒಮ್ಮೆಯಾದರೂ ನೋಡಬೇಕು ಎಂಬ ಆಸೆಯಿಂದ ಅವರ ಮಾತೃಹೃದಯ ನೋಯತೊಡಗಿತು.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ಮೂರನೆಯ ಕಂತು.

Read More

ಡರ್ಬನ್ ಇದಿನಬ್ಬ: ಬಸಳೆ ಮಾರುವವನ ಕೂಗು

ಇದಿನಬ್ಬ ನಚ್ಚಬೆಟ್ಟು ಬಳಿಯ ಊರಿಗೆ ಹೊರಡುವ ಮೂತಾಪನ ದೋಣಿಗೆ ಮೂತಮ್ಮನ ಸಹಾಯದಿಂದ ಏರಿದ. ದೋಣಿ ಫಾತಿಮಾರ ಗಂಡ ಇಸ್ಮಾಯಿಲರದ್ದೇ, ಅಂದರೆ ಶಾಮಣ್ಣ ಗೌಡರ ದೋಣಿಗೆ ಅವರೇ ಅಂಬಿಗ. ಸದ್ಯ ಮುಂಗೋಪಿ ತಂದೆಯ ಕೈಯಿಂದ ಮಗನನ್ನು ರಕ್ಷಿಸಿದೆನಲ್ಲ ಎಂಬ ಖುಷಿ ಹಲೀಮಾರಿಗೆ. ಆದರೆ ಖುಷಿ ಬಹಳ ದಿನ ಉಳಿಯಲಿಲ್ಲ.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಾದಂಬರಿಯ ಎರಡನೆಯ ಕಂತು

Read More

ಮುನವ್ವರ್ ಬರೆಯುವ ʼಡರ್ಬನ್ ಇದಿನಬ್ಬʼ ಕಾದಂಬರಿ ಇಂದಿನಿಂದ…

ನೇತ್ರಾವತಿ ದಂಡೆಯ ಅಜಿಲಮೊಗರು ಎಂಬ ಊರಿನ ಇದಿನಬ್ಬನಿಗೆ, ಆಫ್ರಿಕಾದ ಡರ್ಬನ್ ನಂಟು ಅಂಟಿದ ಕತೆಯಿದು. ನದಿಯ ಹರಿವಿನಂತೆ ಸಾಗುವ ಈ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಓದಿನ ಕುತೂಹಲವನ್ನು ಹೆಚ್ಚಿಸುತ್ತವೆ. ಕಥೆ ಹೇಳುತ್ತ ಗುಲಾಮ ಪದ್ಧತಿಯಲ್ಲಿರುವ ಕ್ರೌರ್ಯದ ಅನಾವರಣ ಮಾಡಿರುವ ಕಾದಂಬರಿಕಾರ ಮುನವ್ವರ್ ಜೋಗಿಬೆಟ್ಟು, ಬರವಣಿಗೆಯನ್ನು ಬಹಳ ಪ್ರೀತಿಸುತ್ತಾರೆ.”

Read More

ಬಿದಿರುಮೆಳೆಯಲ್ಲಿ ಹೂತ ಹೆಣ: ಮುನವ್ವರ್ ಜೋಗಿಬೆಟ್ಟು ಅಂಕಣ

“ಹೊಸ ಛತ್ರಿಯನ್ನು ತಲೆ ಕೆಳಗಾಗಿಸಿ ಅದರೊಳಗೆ ಕಲಕು ನೀರು ಹರಿಯಲು ಬಿಟ್ಟು ಪುಡಿ ಮೀನುಗಳನ್ನು ಹಿಡಿಯುತ್ತಿದ್ದ ಮಹಾ ಪೋಕಿರಿಗಳು ನಾವು. ‘ಮೀನು ಹಿಡಿಯಲಿಕ್ಕಾಗಿಯೇ ಶಾಲೆಗೆ ರಜಾ ಮಾಡುವ ನನ್ನಂತಹ ಮಕ್ಕಳ ಕಾಲವೆಲ್ಲಾ ಎಲ್ಲಿ ಹೋಯಿತು?’ ಅನಿಸತೊಡಗುವಾಗ ಸಮವಸ್ತ್ರ ಮತ್ತು ಬೂಟು ಹಾಕಿ ಬೆಳಗಿನ ಜಾವವೇ ಸ್ಕೂಲ್ ಬಸ್ಸು ಹತ್ತುವ ಮಕ್ಕಳ ಮುಖವೊಮ್ಮೆ ತೇಲಿ ಬಂತು…”

Read More

ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”

“ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ