Advertisement

ಕೆಂಡಸಂಪಿಗೆ

ಸರಳ ವಡ್ಡಾರಧನೆ ಎಂಬೊಂದು ಕೈದೀವಿಗೆ

ವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟುಗಳು ಇವೆಲ್ಲಾ ಆ ಕಾಲದ ಒಂದು ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತವೆ. ಇವುಗಳನ್ನೆಲ್ಲಾ ಅನುವಾದಿಸಿರುವಲ್ಲಿ ಮೂಲದ ಶಬ್ಧದ ಮಿತಿಯನ್ನು ದಾಟದಿರುವದನ್ನು ಕಾಣಬಹುದಾಗಿದೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಇಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಮನೋಜ್ಞವಾಗಿದೆ ಎನ್ನುತ್ತ ಸರಳ ವಡ್ಡಾರಧನೆ ಕುರಿತ ಅನಿಸಿಕೆಯನ್ನು ನಾರಾಯಣ ಯಾಜಿ ಅವರು ಇಲ್ಲಿ ಪ್ರಸ್ತುತಪಡಿಸಿದ್ದಾರೆ.

Read More

ಚತುರೋಕ್ತಿಯಿಂದ ಸಹೃದಯತೆಯ ಒಡಲನ್ನು ತೆರೆದಿಟ್ಟ ವ್ಯಕ್ತಿಚಿತ್ರಣ

ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ಈ ಪುಸ್ತಕದಲ್ಲಿ ರಾಜಶೇಖರ ಹೆಗಡೆಯವರು ಗುರುತಿಸುತ್ತಾರೆ. ಜೀವನದಲ್ಲಿಯೂ ಹಾಗೇ ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ. ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ.
ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ – ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ಯಕ್ಷಗಾನ ಪಠ್ಯ: ಕಲೆಗೆ ತೊಡಕುಂಟು ಮಾಡುವ ಪ್ರಮಾದಗಳು

ಕರ್ನಾಟಕದ ಕರಾವಳಿಯುದ್ಧಕ್ಕೂ ಸೊಂಪಾಗಿ ವಿಕಾಸಗೊಂಡಿರುವ ಯಕ್ಷಗಾನ ಕಲೆಯು ಅಪಾರ ವೈವಿಧ್ಯವನ್ನು ಹೊಂದಿದೆ. ಈ ವೈವಿಧ್ಯತೆಯ ಕಾರಣದಿಂದಲೇ, ಅದರ ವ್ಯಾಖ್ಯಾನವನ್ನು ಸರಳವಾಗಿ ಮಾಡುವುದು ಕಷ್ಟವಾಗಿಬಿಟ್ಟಿದೆ. ಆಯಾ ಪ್ರದೇಶಗಳ ಪ್ರಭಾವದೊಂದಿಗೆ ವಿಕಾಸ ಹೊಂದಿರುವ ಈ ಕಲೆಯನ್ನು ಏಕರೂಪವಾಗಿ ನೋಡುವುದು ಸಾಧ್ಯವಾಗುತ್ತಿಲ್ಲ. ಇದೀಗ ಯಕ್ಷಗಾನ ಕಲೆಗೊಂದು ಪಠ್ಯಪುಸ್ತಕ ರಚನೆಯಾಗಿದೆ. ಹಾಗಿದ್ದರೆ ಪಠ್ಯಪುಸ್ತಕವು  ಈ ಬೃಹತ್ ಕಲಾಪ್ರಕಾರವನ್ನು ಸಾಂದ್ರವಾಗಿ ಗ್ರಹಿಸಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. 

Read More

ಬದುಕಿನ ಪಥದಲ್ಲಿ ಮೂಡಿದ ನೆನಪಿನ ಪ್ರಬಂಧ

ಆ ಕಾಲದ ಓದುವ ವರ್ಣನೆ ಚನ್ನಾಗಿ ಮೂಡಿಬಂದಿದೆ. ಶಾಲೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಲೇ ಶರಾವತಿ ದಾಟುವ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡರೂ ಸಂಗೀತವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಕಲಿತದ್ದು ನೋಡಿದರೆ ಸಂಗೀತದ ಮೇಲೆ ಇವರಿಗಿದ್ದ ಆಸಕ್ತಿಯ ಅರಿವಾಗುತ್ತದೆ. ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಖ್ಯಾತ ಕವಿ ವೀಸಿ, ತಮ್ಮ ಶಿಕ್ಷಕರುಗಳು, ಆ ಕಾಲದ ಕಾಲೇಜಿನ ಬದುಕು ಎಲ್ಲವೂ ಒಂದು ನೆನಪಿನ ಸುರುಳಿಯಂತೆ ಪ್ರಬಂಧದೋಪಾದಿಯಲ್ಲಿ ಹರಿದು ಬಂದಿದೆ. ಅದರಲ್ಲಿಯೂ ಇವರ ಮದುವೆಯ ಸ್ವಾರಸ್ಯ ತಪ್ಪದೇ ಓದಬೇಕು.
ಜಿ. ಎಸ್. ಹೆಗಡೆ ಜೀವನಾಧಾರಿತ “ಜೀವನ ಪಥ ನೆನಪಿನ ರಥ” ಪುಸ್ತಕದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ

Read More

ಸಜ್ಜನ ಸವ್ಯಸಾಚಿ ಯಕ್ಷಗುರು ಕೃಷ್ಣ ಭಂಡಾರಿಯ ನೆನಪುಗಳು

ಸಂಗೀತದ ತಿಳುವಳಿಕೆ ಇರುವರೆಲ್ಲಾ ಉತ್ತಮ ಭಾಗವತರಾಗಬಹುದು, ಆದರೆ ಅವರು ರಂಗದಲ್ಲಿ ಯಶಸ್ವೀ ಭಾಗವತರಾಗುವುದಿಲ್ಲ. ಯಕ್ಷಗುರು ಕೃಷ್ಣ  ಭಂಡಾರಿಯವರಿಗೆ ಸ್ವತಃ ವೇಷದ ನಡೆಯ ಅನುಭವವಿರುವ ಕಾರಣ ಮುಮ್ಮೇಳದ ಕಲಾವಿದನಿಗೆ ಯಾವ ಯಾವ ಭಾಗದಲ್ಲಿ ಪದ್ಯದ ಮೂಲಕ ಕುಣಿಸಬೇಕೆನ್ನುವದು ಚೆನ್ನಾಗಿ ಗೊತ್ತಿತ್ತು. ಭಾಗವತಿಕೆಯಲ್ಲಿ ಯಾವ ಕಸರತ್ತುಗಳನ್ನು ಮಾಡದೇ ಕಲಾವಿದನನ್ನು ಹುರಿದುಂಬಿಸುತ್ತಿದ್ದರು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ