Advertisement

ಕೆಂಡಸಂಪಿಗೆ

ಕಾದಂಬರಿಗಳಲ್ಲಿ ತಿರುಮಲೇಶರ ಅನನ್ಯತೆ

ಕಾದಂಬರಿಯ ನಿಜ ಸತ್ವ ಅಡಗಿರುವುದು ಕಾದಂಬರಿಯ ಮೂವತ್ತಮೂರನೆ ಅಧ್ಯಾಯದಲ್ಲಿಯೇ. ಕಾದಂಬರಿಯ ಆರಂಭಕ್ಕೆ ಬಂದ ಕಮಲ ಕಡೆಗೂ ಬರುತ್ತಾಳೆ. ಬೀಡಿ ಹೊಸೆದೂ ಹೊಸೆದೂ ಕುಟುಂಬ ನಿಭಾಯಿಸಿದಷ್ಟೂ ತನ್ನ ಖುಷಿಗಳನ್ನು ಹೊಸಕಿ ಹಾಕುತ್ತಿರುತ್ತಾಳೆ. ಕೈಯಲ್ಲಿ ಕೆಲವೇ ರುಪಾಯಿಗಳನ್ನು ಹಿಡಿದು ಪೇಟೆಗೆ ಹೋಗುವ ಆಕೆ ರಿಸ್ಟ್ ವಾಚನ್ನು ನೋಡುತ್ತಾಳೆ. ತೆಗೆದುಕೊಳ್ಳುವುದಿಲ್ಲ. ಬಣ್ಣ ಬಣ್ಣದ ಸೀರೆಯನ್ನು ನೋಡುತ್ತಾಳೆ ಅದಕ್ಕೆ ಹೊಂದಿಕೆಯಾಗುವ ರವಿಕೆಯನ್ನೂ ನೋಡುತ್ತಾಳೆ. ಇನ್ನೊಮ್ಮೆ ಇನ್ನೊಮ್ಮೆ ಎಂದು ತನ್ನ ಬಯಕೆಗಳನ್ನು ಮುಂದೆ ಹಾಕುತ್ತಲೇ ಅಂಗಡಿಯವನು ಬೇರೆ ಗಿರಾಕಿಗಳ ಕಡೆ ಗಮನ ಕೊಟ್ಟಾಗ ತಾನು ಸದ್ದಿಲ್ಲದೆ ಅಂಗಡಿಯಿಂದ ಹೊರಬರುತ್ತಾಳೆ.
ಕೆ.ವಿ. ತಿರುಮಲೇಶರ “ಆರೋಪ” ಕಾದಂಬರಿಯ ಕುರಿತು ಸುಮಾವೀಣಾ ಬರಹ

Read More

ಫ್ಲೈಟ್ ತಪ್ಪಿಸಿದ ಮೆಹೆಂದಿ ಮತ್ತು ನಾನು

ಯುವತಿಯೊಬ್ಬಳ ಭಾರೀ ಕನ್ನಡಕದಿಂದ ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು. ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು… ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ ಸಿಟ್ಟು ಬರುತ್ತಿತ್ತು. ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು.
ಸುಮಾವೀಣಾ ಬರೆದ ಅನುಭವ ಕಥನ ನಿಮ್ಮ ಓದಿಗೆ

Read More

ಮಕ್ಕಳಾಟವನ್ನು ಭಗವಂತ ಕೂಡ ಆಡಲಾರನು

ಬೆಕ್ಕಿನ ಮರಿ, ಗುಬ್ಬಿಯ ಧ್ವನಿ, ಮ್ಯಾಚಿಂಗ್ ರಿಬ್ಬನ್ ಎಂಬೆಲ್ಲಾ ಬಣ್ಣದ ಲೋಕದೊಂದಿಗೆ ಬದುಕಿನ ಸತ್ಯವನ್ನು ಪರಿಚಯಿಸುವ ಸರಳ ಕವಿತೆಗಳನ್ನು ಬರೆದಿರುವ ಕೆ.ವಿ. ತಿರುಮಲೇಶ್ ಅವರು ಮಕ್ಕಳ ಮನೋಲೋಕದೊಳಗೆ ಸದ್ದಿಲ್ಲದೆ ಹೆಜ್ಜೆಯಿರಿಸಿದ್ದಾರೆ.
“ಚಿಕ್ಕಣಿ ರಾಜ” ಎಂಬ ಬಣ್ಣದ ಚಿತ್ರಗಳಿರುವ ಸುಂದರ ಕವಿತಾ ಸಂಕಲನದ ಅನನ್ಯತೆಯ ಕುರಿತು ಸುಮವೀಣಾ ಅವರು ಬರೆದ ಟಿಪ್ಪಣಿ ಇಲ್ಲಿದೆ.

Read More

ಪ್ರಗತಿಶೀಲತೆಯ ಪ್ರಬಲ ಧ್ವನಿ ‘ಕಾರಾವಾನ್’

ರೈಲಿನಲ್ಲಿ ಪ್ರಯಾಣಿಸುವಾಗ ನಿರೂಪಕನ ಕಣ್ಣಿಗೆ ಬಿದ್ದ ಸಂಸಾರವನ್ನು ‘ಕಣ್ಣೀರ ಸಂಸಾರ’ ಎಂದೇ ಬಿಂಬಿಸುವುದರ ಮೂಲಕ ಅಂದಿನ ವಾಸ್ತವ ಪ್ರಪಂಚವನ್ನು ಓದುಗರಿಗೆ ಅರ್ಥೈಸಲು ಈ ಕೃತಿಯು ಪ್ರಯತ್ನಿಸುತ್ತದೆ. ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷರಿಂದ ಶಿಕ್ಷೆಗೊಳಗಾಗಿ, ಆರು ತಿಂಗಳುಗಳನ್ನು ಹಿಂಡಲಗ ಸೆರೆಮನೆಯಲ್ಲಿ ಕಳೆದು, ಅಲ್ಲಿಂದ ತಿರುಗಿ ರೈಲಿನಲ್ಲಿ ತಮ್ಮೂರಿಗೆ ಬರುವ ಹಾದಿಯನ್ನೇ ಲೇಖಕರು ‘ಕಾರವಾನ್’ ಕಥನದ ಅನಾವರಣಕ್ಕೆ ಬಳಸಿಕೊಂಡಿದ್ದಾರೆ. ಬಸವರಾಜ ಕಟ್ಟೀಮನಿಯವರ ಕಾರವಾನ್ ಕತೆಯ ಕುರಿತು ಸುಮಾವೀಣಾ ಅವರ ಬರಹ ಇಲ್ಲಿದೆ.

Read More

ಔದಾರ್ಯದ ಉರುಳಲ್ಲಿ ಚಿಕ್ಕೋಳೂ ಹಿರಿದಿಮ್ಮಿ

ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬುದು ನಿಜವಾದರೂ, ಔದಾರ್ಯವು, ನೀಡುವವನ ಬದುಕನ್ನೆ ಕಸಿದುಕೊಳ್ಳುವಷ್ಟು ಅತಿಯಾಗಿ ಇರಬಾರದೇನೋ. ಜನಪದ ಕಥನ ಕಾವ್ಯವಾದ ‘ಚಿಕ್ಕೋಳು ಹಿರಿದಿಮ್ಮಿ’ಯಲ್ಲಿ ಮನುಷ್ಯರ ಔದಾರ್ಯ, ಪ್ರಾಣಿಗಳ ಪ್ರಾಮಾಣಿಕತೆಯ ಉತ್ತುಂಗದ ಪರಿಚಯವಾದಂತೆಯೇ, ಮನುಷ್ಯರು ಮೃಗಕ್ಕಿಂತಲೂ ಕೀಳಾಗಿ ವರ್ತಿಸುವ ಮತ್ತೊಂದು ಪಾತ್ರದ ಪರಿಚಯವೂ ಆಗುತ್ತದೆ. ಈ ಖಂಡ ಕಾವ್ಯದ ಕತೆಯನ್ನು ಹೇಳಿದ್ದಾರೆ ಲೇಖಕಿ ಸುಮಾವೀಣಾ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ