Advertisement

Category: ಅಂಕಣ

ದಾನಗಳಲ್ಲಿ ಮಹಾದಾನ…

“ಆಸ್ಪತ್ರೆಯಿಂದ ಅವರ ದೇಹವನ್ನು ಮನೆಗೆ ತಂದು, ಸಂಪ್ರದಾಯದ ಪ್ರಕಾರ ಎಲ್ಲಾ ಪದ್ಧತಿಗಳನ್ನು ಮತ್ತು ಕಾರ್ಯವನ್ನು ಮುಗಿಸಿ, ದೇಹವನ್ನು ಮಣ್ಣಿಗೆ ಇಡುವ ಬದಲು ಸಂಶೋಧನೆಗೆ ನೀಡಿದರು. ಮನಸ್ಸಿಗೆ ನೆಮ್ಮದಿ ಆಗುವ ಹಾಗೆ ಸಂಪ್ರದಾಯವೂ ಆಯಿತು, ಅವರ ದೇಹವನ್ನು ಸಂಶೋಧಿಸಿ ನೂರಾರು ವಿದ್ಯಾರ್ಥಿಗಳು ಮುಂದೆ ಸಾವಿರಾರು ಜೀವಗಳನ್ನು ಉಳಿಸಲು ಶಕ್ತರಾಗಲು ಸಹಾಯವೂ ಆಯ್ತು. ಒಂದು ದೇಹದ ಸಂಶೋಧನೆಯಿಂದ ಸಾವಿರಾರು ಜೀವಗಳನ್ನು…”

Read More

ಈ ಕಾಲದ ಒಂದಷ್ಟು ಯೋಚನೆಗಳು

ಈ ಸಾಂಕ್ರಾಮಿಕದ ಮೊದಲ ಅಲೆ ವ್ಯಾಪಕವಾಗಿರುವಾಗ ನಡೆದ ಬ್ರಿಟನ್ನಿನ ಸಂಶೋಧನೆಗಳಿಂದ ತಿಳಿದು ಬಂದ ಅಂಶವೇನೆಂದರೆ ಸೋಂಕಿತರಲ್ಲಿ ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದಿರುವ ಜನರಲ್ಲಿ, ಈ ರೋಗ ಹೆಚ್ಚು ತೀವ್ರವಾಗಿರುತ್ತದೆ ಎನ್ನುವುದು ಮತ್ತು ಹೆಚ್ಚು ಪ್ರಾಣಹಾನಿಯನ್ನು ಮಾಡುತ್ತದೆ ಎನ್ನುವುದು. ಅಷ್ಟೇ ಅಲ್ಲ, ಭಾರತ ಉಪಖಂಡ ಮತ್ತು ಆಫ್ರಿಕಾ ಖಂಡಗಳಿಂದ ಬಂದ ಜನ ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ…”
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

Read More

ಕೃತಿ ಆರ್ ಪುರಪ್ಪೇಮನೆ ಅಂಕಣ “ಯಕ್ಷಾರ್ಥ ಚಿಂತಾಮಣಿ” ಇಂದಿನಿಂದ…

‘ಮಧ್ಯಮವರ್ಗದ ವಿದ್ಯಾವಂತ ಮತ್ತು ನಗರಕ್ಕೆ ಮುಖ ಮಾಡಿ ನಿಂತ ಸಮುದಾಯ ಯಕ್ಷಗಾನಕ್ಕೆ ತೊಡಗಿಸಿಕೊಂಡಂತೆಲ್ಲಾ ಯಕ್ಷಗಾನದ ರಂಜನೆಯ ಸ್ವರೂಪ ಬೇರೆಯಾಗುತ್ತಾ ಬಂದಿದೆ. ಆಟವು ಕಲೆಯಾಗಿದ್ದು ಹೀಗೆಯೇ. ಅತಿಯಾದ ಹಾಸ್ಯವನ್ನು ಇಷ್ಟಪಡದ, ಪುರಾಣಕತೆಯಿಂದ ಒಂದೂ ಚೂರೂ ಆಚೆ ಈಚೆ ಹೋಗದಂತೆ ‘ಹಿತಮಿತ’ವಾದ ಮಾತು, ಪಾತ್ರದ ‘ಔಚಿತ್ಯ ಮೀರದ’ ಕುಣಿತ.’ ಮತ್ತು ಪಾತ್ರಗಳ ‘ಸರಿಯಾದ ಭಾವ’ವನ್ನು ಹೊರತರುವಂತಹ ಭಾಗವತಿಕೆ..

Read More

‘ನಂದು ಹ್ಯೂಮನಿಸಂ… ನಾನು ಎಲ್ರಿಗೂ ಕಾಫಿ ಕೊಡ್ಸಿ, ಕುಡೀರಿ ಅಂತೀನಿ…’

“ಒಮ್ಮೆ ಹೀಗೇ ಧುತ್ತನೆ ಎದುರಾದಿರಿ. ನಿಮ್ಮ ಕಣ್ಣುಗಳಲ್ಲಿ ಒಂದಿಷ್ಟು ಮುಜುಗರ ಇರುತ್ತದೆ ಎಂದು ನಿಮ್ಮ ಕಣ್ಣುಗಳನ್ನೇ ನೋಡಿದ್ದೆ. ನಿಮ್ಮನ್ನ ಕಾಣುವಾಗ ನಾನು ಕೊಂಚ ಅಳುಕಿದ್ದೆ ಅಷ್ಟೇ. ನೀವು ಆರಾಮಾಗೇ ಇದ್ದಿರಿ. ನನ್ನನ್ನ ಕಂಡಿದ್ದೇ ‘ಹೋ ಮಹೇಶ್ ಅವ್ರು.. ಬನ್ನಿ ಕಾಫಿ ಕುಡಿಯೋಣ..’ ಅಂತ ಕರೆದುಕೊಂಡು ಕಲಾಕ್ಷೇತ್ರದ ಹಿಂಬದಿಯ ಕ್ಯಾಂಟಿನ್ ಗೆ ನಡೆದಿರಿ. ನಗುನಗುತ್ತ ಮಾತಾಡಿದಿರಿ. ನನ್ನ ವಿಮರ್ಶೆ ಮಲಗಿತ್ತು ಎನ್ನುವುದು ನನಗೆ ಅವತ್ತೇ ಗೊತ್ತಾಗಿದ್ದು.
ಎನ್.ಸಿ. ಮಹೇಶ್‌ ಬರೆದ ‘ರಂಗ ವಠಾರ’ ಅಂಕಣ

Read More

ಆಧುನಿಕ ಜಗತ್ತಿನ ‘ಮಹಾತಿಪ್ಪೆ’ಯಲ್ಲಿ ಬಿದ್ದ ಮನುಷ್ಯ

“ಆಧುನಿಕ ಜೀವನಶೈಲಿ ಮನುಷ್ಯ ಅಸ್ತಿತ್ವವನ್ನು ಕುಬ್ಜಗೊಳಿಸುವುದರ ಜೊತೆಗೆ ಅವನ ತೀವ್ರ ಭಾವವಲಯಗಳನ್ನು, ಸೃಜನಶೀಲ ಆದರ್ಶಗಳ ಹಂಬಲಗಳನ್ನು ಗೇಲಿಮಾಡಿ ಅಪಹಾಸ್ಯಕ್ಕೀಡು ಮಾಡುವುದನ್ನು ಗುರುತಿಸಿರುವುದು ಸಂಕಲನದ ಹೆಚ್ಚುಗಾರಿಕೆಯಾಗಿದೆ. ಎಲ್ಲ ಕಡೆ ಮಾರುಕಟ್ಟೆಯ ಕಸ ತುಂಬಿರುವ, ವಸ್ತುಗುಡ್ಡಗಳು ಜನರನ್ನು ತಿಂದುತೇಗುವ, ಪ್ರತಿಬಿಂಬಗಳ ಮೆರವಣಿಗೆ ಸಾಗಿರುವ ದಟ್ಟವಾಸನೆಗಳ ನಗರದಲ್ಲಿ ಇದೇ ನಿರೂಪಕನ ಒಣನಾಲಿಗೆ ಜಡತ್ವ ಮೀರಿ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ