Advertisement

Category: ಅಂಕಣ

ಜೀವನದ ʼರಂಗ ನೇಪಥ್ಯʼದಿಂದ ಮರೆಯಾದ ಗುಡಿಹಳ್ಳಿ

ಹಿಂದೊಮ್ಮೆ ಗುಡಿಹಳ್ಳಿ ಸರ್ ಅವರ ಬಳಿ ಮಾತಾಡುವಾಗ ತಮಗೆ ಹುಷಾರಿಲ್ಲ ಅಂತ ಅವರು ಹೇಳಿದದ್ದು ನೆನಪಿಗೆ ಬಂತು. ಆದರೆ ಅದು ಸಾವಿನ ರೂಪದಲ್ಲಿ ಕೂತಿದೆ ಎನ್ನುವ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನೊಂದಿಗೆ ಮಾತಾಡುವಾಗಲೇ ಅವರ ಧ್ವನಿ ಕ್ಷೀಣಿಸಿದಂತೆ ಅನಿಸುತ್ತಿತ್ತು. ಹೀಗೇ ಏನೋ ವಯೋಮಾನ ಸಹಜವಾಗಿ ಖಾಯಿಲೆ ಅಡರಿ ಕೊಂಡಿರುತ್ತದೆ… ಕಾಲಕ್ರಮದಲ್ಲಿ ಸುಧಾರಿಸುತ್ತದೆ ಅಂದುಕೊಂಡಿದ್ದೆ. ಆದರೆ ಇದು ಅವರ ಚಿತ್ರವನ್ನು ಸಂಪೂರ್ಣ ಕಲಕಿ ಬಿಡಬಹುದು ಎಂಬ ಅಂದಾಜೂ ಇರಲಿಲ್ಲ. ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ

Read More

ಕವಿಶೈಲದ ಹುಲಿಯೂ ದೂರದ ಕುದುರೆಮುಖವೂ

ಭಯವನ್ನು ಅನಾಮತ್ತಾಗಿ ಎತ್ತಿ ಬೆನ್ನ ಹಿಂದಕ್ಕೆ ಬಿಸಾಡಿ, ಕವಿಶೈಲದ ಕಲ್ಲುಬೆಂಚುಗಳ ಬಳಿ ನಿಂತು ಕಣಿವೆಯ ಕಡೆಗೆ ಕಣ್ಣು ಹಾಯಿಸಿದರೆ, ಅಸ್ಪಷ್ಟ ಬೆಳಕುಗಳಲ್ಲಿ ಕಂಡೂ ಕಾಣದಂತಿದ್ದ ದಟ್ಟ ಕಾಡು. ಬೆಳಗ್ಗೆ ಕಂಡಿದ್ದ ನೋಟದ ಅಂದಾಜಿನ ಮೇರೆಗೆ ಮೆಲ್ಲಗೆ ಗೆರೆಗಳನ್ನು ಒಂದೊಂದಾಗಿ ಜೋಡಿಸಿಕೊಳ್ಳುತ್ತ ಹೋದಂತೆ ರೋಮಾಂಚನ. ಅಷ್ಟೊಂದು ಅಗಾಧ ಕಾಡನ್ನು ಕತ್ತಲಲ್ಲಿ ಕಣ್ತುಂಬಿಕೊಳ್ಳುವುದೊಂದು ಅದ್ಭುತ ಪುಳಕ. ನಿಮ್ಮ ಕಂಗಳು ಬರೀ ಕಂಗಳಾಗಿಯಷ್ಟೇ ಉಳಿಯದಂಥ ಜಾದೂ ಅದು.
ಸಹ್ಯಾದ್ರಿ ನಾಗರಾಜ್‌ ಬರೆಯುವ ‘ಸೊಗದೆ’ ಅಂಕಣ

Read More

ಕನಸಿಗಿದೆ ಘನತೆ ಎನ್ನುತ ಕಾಡುವ ವಸಂತ

ಬೇರೆಬೇರೆ ದೇಶಗಳಿಂದ ತಂದಿಟ್ಟು ಬೆಳೆದ ಸಸ್ಯಸಂಪತ್ತಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಸ್ವಾಭಾವಿಕ, ದೇಶೀಯ ಹೂಗಳು ಇಲ್ಲಿ ಹೆಚ್ಚಾಗಿ ಜನಜನಿತವಾಗಿಲ್ಲ. ಕಾರಣ ನಿಮಗೆ ಹೊಳೆದಿರಬಹುದು. ಸಮಾಜವು ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಎಲ್ಲವನ್ನೂ ಇಲ್ಲವಾಗಿಸುವ ಮನೋಭಾವವನ್ನಿಟ್ಟುಕೊಂಡು ದೇಶೀಯ ಹೂಹಣ್ಣುಗಳನ್ನು ಮೂಲೆಗೊತ್ತಿತ್ತು. ಕಳೆದೆರಡು ದಶಕಗಳಲ್ಲಿ ಬದಲಾವಣೆ ಗಾಳಿಗೆ ಶಕ್ತಿಬಂದಿದೆ. ಈಗ ಸರಕಾರಗಳು ಮತ್ತು ತೋಟಗಾರಿಕೆ ಸಮುದಾಯಗಳು ದೇಶೀಯ…”

Read More

ಸರಿ ತಪ್ಪುಗಳ ನಡುವೆ ರೇಖೆ ಎಳೆಯುವ ಮೊದಲು

ಒಬ್ಬರಿಗೆ ಸರಿ ಎನ್ನಿಸಿದ್ದು ಇನ್ನೊಬ್ಬರಿಗೆ ತಪ್ಪಾಗುವ ಈ ಚಮತ್ಕಾರವನ್ನು ಲೇಖಕರು ಆನೆ ಮತ್ತು ಮಾವುತನ ಉಪಮೆ ಬಳಸಿ ವಿಶ್ಲೇಷಿಸುತ್ತಾರೆ. ಅಷ್ಟು ದೊಡ್ಡ ಆನೆಯ ಮುಂದೆ ಮಾವುತ ಕಾಣುವುದೇ ಇಲ್ಲ. ಆದರೆ ಕೈಯಲ್ಲಿರುವ ಪುಟ್ಟದಾದ ಅಂಕುಶವನ್ನು ಉಪಯೋಗಿಸಿಕೊಂಡು ಅಂಥ ಬೃಹತ್ ಆಸೆಯನ್ನು ಅವನು ಪಳಗಿಸಬಲ್ಲ. ಹಾಗೆಯೇ ನಮ್ಮ ಯೋಚನೆಗಳನ್ನು ಕೂಡ ನಮ್ಮ ಅಂತರ್ದೃಷ್ಟಿಯೇ ಪಳಗಿಸುತ್ತದೆ, ಅದು ಕಣ್ಣಿಗೆ ಕಾಣಿಸದಿದ್ದರೂ ಬಹಳ ಪ್ರಭಾವಶಾಲಿಯಾದುದು ಎನ್ನುತ್ತಾರೆ.

Read More

ಪಯಣಪ್ರಿಯರ ನಾಡಿನ ಕೆಲವು ಮಾತುಗಳು

ನಾನು ಚಿಕ್ಕವನಿದ್ದಾಗ, ‘ಕುಟುಂಬ ಸಮೇತ ಹಾಲಿಡೆʼಗಳೇನಿದ್ದರೂ ತೀರ್ಥಯಾತ್ರೆಗಳೇ! ನಮ್ಮ ನಮ್ಮ ಮನೆಯ ದೇವರುಗಳ ಮತ್ತು ನಂಬಿಕೆಗಳ ಪ್ರಕಾರ ನಮ್ಮ ಹಾಲಿಡೆಯ ಗಮ್ಯಸ್ಥಾನಗಳು ನಿಗದಿಯಾಗಿರುತ್ತಿದ್ದವು. ತುಳಸಿಗೇರಿ, ಯಲಗೂರ, ಬಸವನ ಬಾಗೇವಾಡಿಗಳೇ ಕುಟುಂಬ ಸಮೇತ ಪ್ರಯಾಣದ ‘ಡೇಟ್ರಿಪ್ʼ ಜಾಗಗಳು. ಅವನ್ನು ಬಿಟ್ಟರೆ, ಮಂತ್ರಾಲಯ, ತಿರುಪತಿ, ಧರ್ಮಸ್ಥಳ ಅಥವಾ ಶೃಂಗೇರಿಗಳಿಗೆ ಬಸ್ಸಿನಲ್ಲಿ ಪಯಣಿಸಿ, ಅಲ್ಲಿಯ ಧರ್ಮಛತ್ರಗಳಲ್ಲೇ ತಂಗಿದ್ದು ದೇವರ ದರ್ಶನ ಮಾಡಿ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ