Advertisement

Category: ದಿನದ ಅಗ್ರ ಬರಹ

ವಿಶಿಷ್ಟ ದೃಶ್ಯಕಾವ್ಯ ʻನಾನು ಕುಸುಮಾʼ ಪನೋರಮಕ್ಕೆ

ಹೀಗೆ ಎಲ್ಲವೂ ಆಗಿದ್ದ ತಂದೆಯನ್ನು ಕಳೆದುಕೊಂಡ ಮೇಲೆ ಒಂಟಿ ತರುಣಿ ಕುಸುಮ ಮುಂದೆ ಏನಾದಳು ಎಂಬುದನು ಸ್ಮರಿಸಿಕೊಂಡರೆ ಕೈ ಕಾಲುಗಳು ನಡುಗುತ್ತವೆ. ಎಷ್ಟೊಂದು ಸುಂದರವಾಗಿ ಕಾಣುವ ಈ ಜಗತ್ತು ಮತ್ತು ವ್ಯವಸ್ಥೆಯ ಕರಾಳ ಮುಖವನ್ನು ಕಂಡು ಎಂಥವರಲ್ಲೂ ಆಕ್ರೋಶ ಪುಟಿದೇಳುತ್ತದೆ. ಕುಸುಮಳ ಆ ಸ್ಥಿತಿಗೆ ಕಾರಣವಾದವರನ್ನು ಸುಟ್ಟುಹಾಕಬೇಕೆನ್ನುವಷ್ಟು ಸಿಟ್ಟು ಎಲ್ಲ ಸಾತ್ವಿಕ ಮತ್ತು ಸತ್ಯ ಪರವಾದ ಮನಸ್ಸುಗಳಲ್ಲಿ ಉಕ್ಕುತ್ತದೆ! ಆದರೂ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೆ ಎಂಬುದೇ ವಿಷಾದದ ಪ್ರಶ್ನೆ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ʻನಾನು ಕುಸುಮಾʼ ಚಿತ್ರದ ಕುರಿತು ಕುಮಾರ ಬೇಂದ್ರೆ ಬರಹ

Read More

ಪ್ರಜಾಪ್ರಭುತ್ವದ ಆಶಯಕ್ಕೆ ಆಸರೆಯಂತಹ ಬರಹ..

ರವೀಂದ್ರ ಭಟ್ಟರು ನಿರೂಪಿಸಿದ ಪ್ರಸಂಗ ಮತ್ತು ಅಂತಿಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯವಿದೆ. ಮಹಾಭಾರತದ ರಾಜಪ್ರಭುತ್ವವು ಜನಪರವಾಗಿರ ಬೇಕೆಂದು ಅಂದಿನ ಶ್ರೀಕೃಷ್ಣ ಬಯಸಿದಂತೆ, ಪ್ರಜಾಪ್ರಭುತ್ವದ ಇಂದಿನ ಜನರು ಆಗ್ರಹಿಸುತ್ತಾರೆ. ಅಂದಿನ ಶ್ರೀಕೃಷ್ಣನ ಅಭಿಮತ ಮತ್ತು ಇಂದಿನ ಜನರ ಆಗ್ರಹವು, ಪ್ರಭುತ್ವವು ಮೌಢ್ಯಾಚರಣೆಗಳನ್ನು ಮೀರಿದ ಜನಹಿತ ಕೆಲಸಗಳಲ್ಲಿ ಪುಣ್ಯವನ್ನು ಗಳಿಸ ಬೇಕೆಂಬ ನೀತಿಪಾಠವನ್ನು ಒಳಗೊಂಡಿದೆ. ಅಂದಿನ ಪ್ರಸಂಗದಲ್ಲಿರುವ ‘ಶ್ರೀಕೃಷ್ಣ’ ಒಂದು ‘ರೂಪಕ’ವಾಗಿ ಇಂದಿನ ಆಶಯವನ್ನೂ ಅಭಿವ್ಯಕ್ತಿಸುವುದು ಗಮನೀಯ.
ರವೀಂದ್ರ ಭಟ್ಟ ಐನಕೈ ಅವರ “ರಾಜಕಾರಣದಲ್ಲಿ ನಿಂಬೆ – ಹಾಗಲ” ಅಂಕಣ ಬರಹಗಳ ಸಂಕಲನಕ್ಕೆ ಬರಗೂರು ರಾಮಚಂದ್ರಪ್ಪ ಬರೆದ ಮುನ್ನುಡಿ

Read More

ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ

ಒಳಭಾಗಕ್ಕೆ ತೆರೆದುಕೊಂಡಿದ್ದ ಬಾಗಿಲಿಗೊರಗಿ ನಿಂತುಕೊಂಡ ಪ್ರಿಯಾ ಆಗಸದ ಶೂನ್ಯದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ಅರೆಮುಚ್ಚಿದ ಕಣ್ಣುಗಳಿಂದ ನೋಡುತ್ತಾ ಅಂದಳು “ನಾನು ಕೆಟ್ಟ ಅದೃಷ್ಟದ ಸಂಕೇತ ದಿನೂ. ನೀವು ಹೆಣ್ಣು ನೋಡಲು ಬಂದಾಗ ನಾನು ಏನೇನೋ ಕನಸು ಕಟ್ಟಿದೆ. ಆದ್ರೆ ಅಂದುಕೊಂಡದ್ದೇನೂ ನಿಜವಾಗ್ಲಿಲ್ಲ. ಈಗ ನೋಡು, ಇದೇ ನನ್ನ ಬದುಕು. ಇದೇ ನನ್ನ ಭಾಗ್ಯ” ಎನ್ನುತ್ತಾ ಮುಖವನ್ನು ಅತ್ತ ಹೊರಳಿಸಿ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು.
ಡಾ. ಸುಭಾಷ್‌ ಪಟ್ಟಾಜೆ ಬರೆದ ಈ ಭಾನುವಾರದ ಕತೆ “ಹುಟ್ಟು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

‘ಸುದರ್ಶನ’: ಧ್ಯೇಯ ಆದರ್ಶಗಳ ದರ್ಶನ

ಸುದರ್ಶನನು ದೀನಾನಂದನಾಗಿ ಗಳಿಸಿದ ಜನಪ್ರಿಯತೆ, ಯಶಸ್ಸು, ನಿರ್ಲಿಪ್ತತೆ ಮತ್ತು ನೈತಿಕ ಕಟ್ಟುಪಾಡುಗಳಿಗೆ ಒಗ್ಗಿದ ಬದುಕಿನ ಕಡೆಗೆ ಕಾದಂಬರಿಯು ಗಮನವನ್ನು ಹರಿಸಿದ್ದರೂ ಇದನ್ನು ಕೇವಲ ಸುದರ್ಶನನ್ನು ಕುರಿತ ಕಾದಂಬರಿಯನ್ನಾಗಿ ಓದಲಾಗದು. ಆತನು ಕಾದಂಬರಿಯ ಪ್ರಧಾನ ಪಾತ್ರವಾದರೂ ಇವನೊಂದಿಗೆ ವೈದೃಶ್ಯದಲ್ಲಿ ನಿಲ್ಲಬಲ್ಲ ಹಲವು ಪಾತ್ರಗಳು ಇವೆ. ಆ ಪಾತ್ರಗಳು ಸೂಚಿಸುವ ಬಹುಮುಖೀ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಕಾದಂಬರಿಯನ್ನು ಗ್ರಹಿಸಬೇಕಾಗುತ್ತದೆ. ಆನಂದಕಂದರ ‘ಸುದರ್ಶನ’ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ನಿಮ್ಮ ಓದಿಗೆ

Read More

ಎರಡು ತೀರಗಳ ಸೇರಿಸಿದ ಹಿರಿಯಜ್ಜ

ಮೂರು ದಶಕಗಳ ರಾಜಕೀಯ ಜೀವನದಲ್ಲಿ ದಾದಾಬಾಯಿ ನವರೋಜಿ ಏಳು ಬಾರಿ ಬ್ರಿಟನ್‌ಗೆ ಭೇಟಿ ನೀಡಿದರು, ಐದು ಬಾರಿ ಲಂಡನ್ ನ ಬೇರೆ ಬೇರೆ ವಿಳಾಸಗಳಲ್ಲಿ ಉಳಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನ್ನಿನ ಬೇರೆ ಬೇರೆ ಭಾಗಗಳಿಗೆ ತನ್ನ ಯೋಚನೆಗಳನ್ನು ತಿಳಿಸಲು ತಿರುಗಾಡಿದರು. 1906, ಎಂಭತ್ತರ ವಯಸ್ಸಿನಲ್ಲಿ ಮತ್ತೆ ಸಂಸತ್ತಿಗೆ ಮರಳುವ ಯತ್ನ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಲಂಡನ್‌ನ ಲಾಂಬೆತ್ ಪ್ರದೇಶದಲ್ಲಿ, ಒಂದು ಕಾಲಕ್ಕೆ ತಾವು ಸಮರ್ಥಿಸುತ್ತಿದ್ದ ಲಿಬರಲ್ ಪಕ್ಷದ ಅಭ್ಯರ್ಥಿಯ ಎದುರು ಅವರು ನಿಂತಿದ್ದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಾದಾಬಾಯಿ ನವರೋಜಿ ಅವರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ