Advertisement

Category: ದಿನದ ಅಗ್ರ ಬರಹ

ಎರಡು ತೀರಗಳ ಸೇರಿಸಿದ ಹಿರಿಯಜ್ಜ

ಮೂರು ದಶಕಗಳ ರಾಜಕೀಯ ಜೀವನದಲ್ಲಿ ದಾದಾಬಾಯಿ ನವರೋಜಿ ಏಳು ಬಾರಿ ಬ್ರಿಟನ್‌ಗೆ ಭೇಟಿ ನೀಡಿದರು, ಐದು ಬಾರಿ ಲಂಡನ್ ನ ಬೇರೆ ಬೇರೆ ವಿಳಾಸಗಳಲ್ಲಿ ಉಳಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನ್ನಿನ ಬೇರೆ ಬೇರೆ ಭಾಗಗಳಿಗೆ ತನ್ನ ಯೋಚನೆಗಳನ್ನು ತಿಳಿಸಲು ತಿರುಗಾಡಿದರು. 1906, ಎಂಭತ್ತರ ವಯಸ್ಸಿನಲ್ಲಿ ಮತ್ತೆ ಸಂಸತ್ತಿಗೆ ಮರಳುವ ಯತ್ನ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಲಂಡನ್‌ನ ಲಾಂಬೆತ್ ಪ್ರದೇಶದಲ್ಲಿ, ಒಂದು ಕಾಲಕ್ಕೆ ತಾವು ಸಮರ್ಥಿಸುತ್ತಿದ್ದ ಲಿಬರಲ್ ಪಕ್ಷದ ಅಭ್ಯರ್ಥಿಯ ಎದುರು ಅವರು ನಿಂತಿದ್ದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಾದಾಬಾಯಿ ನವರೋಜಿ ಅವರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಪ್ರತಿಭೆಯ ತಿಜೋರಿಯಿಂದ ಜಗತ್ತನ್ನು ಶ್ರೀಮಂತಗೊಳಿಸಿದವನು

ಬರಹಗಾರನಾಗಲು ಲಂಡನ್ ಗೆ ಬಂದಿಳಿದ ಷಾ ಸರಿಯಾದ ಉದ್ಯೋಗ ಇಲ್ಲದೆ ತಾಯಿಯಿಂದ ಮತ್ತು ಆಕೆಯ ಹೊಸ ಗಂಡನಿಂದ ವಾರಕ್ಕೆ ಸಿಗುವ ಒಂದು ಪೌಂಡ್ ಹಣದ ಮೇಲೆ ಅವಲಂಬಿತನಾಗಿದ್ದ. ಮಧ್ಯಾಹ್ನಗಳನ್ನು ಬ್ರಿಟಿಷ್ ಮ್ಯೂಸಿಯಮ್‌ನ ಓದುವ ಕೋಣೆಯಲ್ಲಿ ಕಳೆಯುತ್ತಿದ್ದ. ಶಾಲೆಯಲ್ಲಿ ಯಾವುದನ್ನು ಪಡೆಯಲಾಗಲಿಲ್ಲವೋ ಲೈಬ್ರರಿಯ ಓದಿನಲ್ಲಿ ಅವನ್ನು ಓದಿ ಗಳಿಸುವ ಪ್ರಯತ್ನ ಮಾಡುತ್ತಿದ್ದ. ಕಾದಂಬರಿ ಬರೆಯಲು ಶುರು ಮಾಡಿದ. ಇನ್ನು ಸಂಜೆಯ ಹೊತ್ತಿಗೆ ಉಪನ್ಯಾಸಗಳು ಚರ್ಚೆಗಳು ನಡೆಯುವ ಲಂಡನ್ ನ ತಾಣಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ನಾಟಕಕಾರ ಬರ್ನಾರ್ಡ್‌ ಷಾ ಬಗ್ಗೆ ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಮನುಷ್ಯ ಮೃಗ ಸತ್ತೇ ಇಲ್ಲ

ಪ್ರಾಯದಲ್ಲಿ ಸ್ಪರ್ಶವೇ ಸ್ವರ್ಗಸುಖ. ಮುಪ್ಪಾದಾಗ ಕೈಗೆಟುಕದೆ ಕಳೆದು ಹೋದದ್ದರ ನೆನಪೇ ನರಕ. ಅಶ್ವಥ್ ಅವರ ಮುಂದೆ ತಣ್ಣಗೆ ಹೊಂಗೆ ಮರದ ಕೆಳಗೆ ಮಧ್ಯೆ ಮಧ್ಯೆ ಚಹಾ ಕುಡಿಯುತ್ತ ಸಾಕಷ್ಟು ಹೊತ್ತು ಮಾತಾಡಿದ್ದೆ. ಪೋಲಂಕಿ ಅವರು ಹೇಳಿದ್ದನ್ನೆಲ್ಲ ನನಗೆ ಬೇಕಾದಂತೆ ಮರು ಸೃಷ್ಟಿ ಮಾಡಿಕೊಂಡಿದ್ದೆ. `ವುಮೆನ್ ಇನ್ ಲವ್’ ಹಾಗೂ `ಲೇಡಿ ಚಾಟೆರ್‍ಲೀಸ್ ಲವರ್’ ಹೆಸರಿನ ಲಾರೆನ್ಸ್‌ ಕಾದಂಬರಿಗಳ ತಿರುವಿ ಹಾಕಿದ್ದೆ. ಯಾರಾದರು ಬಲ್ಲವರು ಒಂದು ಅಪರೂಪದ ಸಂಗತಿಯ ಹೇಳಿದ ಕೂಡಲೆ ಅದನ್ನು ಅರೆದು ಕುಡಿದು ನನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುತ್ತಿದ್ದೆ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂವತ್ತನೆಯ ಕಂತು

Read More

ಬ್ರಿಟಿಷ್ ಹ್ಯಾಟ್ ಮತ್ತು ಗಾಂಧಿಟೋಪಿ

ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು. ನನ್ನ ಜೀವನದಲ್ಲಿ ನಾನು ನೋಡಿದ ಮೊದಲ ದೊಡ್ಡವ್ಯಕ್ತಿ ಅವರಾಗಿದ್ದರು. ನಾನು ಒಂದನೆಯ ಇಯತ್ತೆಯ ವಿದ್ಯಾರ್ಥಿಯಾಗಿದ್ದಾಗಲೇ ಮನುಷ್ಯರು ಹೇಗೆ ಇರಬೇಕು ಎಂಬುದರ ಪಾಠವನ್ನು ಅವರನ್ನು ನೋಡುವುದರ ಮೂಲಕ ಕಲಿತೆ. ಇಂದಿಗೂ ಆ ಪಾಠವೇ ನನ್ನ ಬದುಕನ್ನು ರೂಪಿಸುತ್ತಿದೆ. ಹೀಗಾಗಿ ಅವರ ನೆನಪು ನನ್ನಲ್ಲಿ ಸದಾ ಹಸಿರಾಗಿದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 38ನೆಯ ಕಂತು ಇಲ್ಲಿದೆ.

Read More

ತಿಂಡಿ ಪೋತರ ಸ್ವರ್ಗದಲ್ಲಿ ವೆಜ್ ವೈವಿಧ್ಯ

ರೈಲು ಅಥವಾ ಬಸ್ಸು ಹತ್ತಿ ದಿನದ ಪ್ರಯಾಣ ಪ್ರಾರಂಭಿಸಿ ನಗರ ಪ್ರದೇಶವನ್ನು ದಾಟಿದರೆ ಕಣ್ಣು ಹಾಯಿಸುವಷ್ಟು ದೂರಕ್ಕೂ ಕಿತ್ತಳೆ ಅಥವಾ ನಿಂಬೆಯ ತೋಟಗಳು! ಕಾಪುವಿನ ಲೈಟ್ ಹೌಸ್ ಹತ್ತಿ ಸಮುದ್ರದ ವಿರುದ್ಧದ ದಿಕ್ಕಿಗೆ ನೋಡಿದರೆ ತೆಂಗಿನ ತೋಟ ಹೇಗೆ ಕಾಣುತ್ತದೆಯೋ ಹಾಗೆ! ಇದು ಹೊಸದಾಗಿ ಕಂಡಿದ್ದರಿಂದ ನಮಗೆ ಆಶ್ಚರ್ಯ. ಇವರು ಇಷ್ಟು ನಿಂಬೆ ಬೆಳೆದು ಏನು ಮಾಡುತ್ತಾರೆ? ಕಿತ್ತಳೆಯನ್ನು ಲೋಡುಗಟ್ಟಲೆ ಗೂಡ್ಸ್ ರೈಲಿನಲ್ಲಿ ತುಂಬಿ ಕಳಿಸಿದರೂ ಉಳಿಯುವಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ.
‘ದೂರದ ಹಸಿರು’ ಅಂಕಣದಲ್ಲಿ ಸಿಸಿಲಿಯನ್‌ ಓಡಾಟದಲ್ಲಿ ಸವಿದ ಹಲವು ಖಾದ್ಯಗಳ ಜೊತೆಗೆ ಅಲ್ಲಿನ ವಿಶೇಷ ಹಣ್ಣುಗಳ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ