Advertisement

Category: ದಿನದ ಅಗ್ರ ಬರಹ

ತಿಂಡಿ ಪೋತರ ಸ್ವರ್ಗದಲ್ಲಿ ವೆಜ್ ವೈವಿಧ್ಯ

ರೈಲು ಅಥವಾ ಬಸ್ಸು ಹತ್ತಿ ದಿನದ ಪ್ರಯಾಣ ಪ್ರಾರಂಭಿಸಿ ನಗರ ಪ್ರದೇಶವನ್ನು ದಾಟಿದರೆ ಕಣ್ಣು ಹಾಯಿಸುವಷ್ಟು ದೂರಕ್ಕೂ ಕಿತ್ತಳೆ ಅಥವಾ ನಿಂಬೆಯ ತೋಟಗಳು! ಕಾಪುವಿನ ಲೈಟ್ ಹೌಸ್ ಹತ್ತಿ ಸಮುದ್ರದ ವಿರುದ್ಧದ ದಿಕ್ಕಿಗೆ ನೋಡಿದರೆ ತೆಂಗಿನ ತೋಟ ಹೇಗೆ ಕಾಣುತ್ತದೆಯೋ ಹಾಗೆ! ಇದು ಹೊಸದಾಗಿ ಕಂಡಿದ್ದರಿಂದ ನಮಗೆ ಆಶ್ಚರ್ಯ. ಇವರು ಇಷ್ಟು ನಿಂಬೆ ಬೆಳೆದು ಏನು ಮಾಡುತ್ತಾರೆ? ಕಿತ್ತಳೆಯನ್ನು ಲೋಡುಗಟ್ಟಲೆ ಗೂಡ್ಸ್ ರೈಲಿನಲ್ಲಿ ತುಂಬಿ ಕಳಿಸಿದರೂ ಉಳಿಯುವಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ.
‘ದೂರದ ಹಸಿರು’ ಅಂಕಣದಲ್ಲಿ ಸಿಸಿಲಿಯನ್‌ ಓಡಾಟದಲ್ಲಿ ಸವಿದ ಹಲವು ಖಾದ್ಯಗಳ ಜೊತೆಗೆ ಅಲ್ಲಿನ ವಿಶೇಷ ಹಣ್ಣುಗಳ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

Read More

ಮೌಂಟ್‌ಅಬುವಿನ ಒಳಹೊರಗೆಲ್ಲ ಸುತ್ತುತ್ತಾ…

ಬೆಟ್ಟದ ದಾರಿ. ಸಂಜೆಯಾಗುವ ಮೊದಲೇ ಮೇಲೇರಬೇಕು ಎನ್ನುವ ಧಾವಂತದಲ್ಲೇ ಹೊರಟೆ. ಇಕ್ಕೆಲಗಳಲ್ಲೂ ಅರಾವಳಿ ಪರ್ವತಶ್ರೇಣಿಯ ಸ್ನಿಗ್ಧ ಸೌಂದರ್ಯಾಸ್ವಾದನೆ. ಸ್ವಪ್ನಲೋಕದ ದಾರಿಯಲ್ಲಿ ಪಯಣಿಸಿ ಸೂರ್ಯಾಸ್ತದ ವೇಳೆಗೆ ತಲುಪಿದ್ದು ಸಮುದ್ರಮಟ್ಟದಿಂದ 1200 ಮೀಟರುಗಳಷ್ಟು ಮೇಲಿರುವ, ಬೇಸಿಗೆ ಅರಮನೆಗಳ ನಗರ ಮೌಂಟಬುವನ್ನು. ಥಾರ್ ಮರುಭೂಮಿಯ ಈ ನಾಡಿಗೆ ಉಣ್ಣೆ ಬಟ್ಟೆಯನ್ನು ಹೊತ್ತಿ ಹೋಗುವ ಕಲ್ಪನೆಯೂ ನನಗಿರಲ್ಲಿಲ್ಲ. ಆದರೆ ಕಾಲಿಟ್ಟೊಡನೆ ಮೈನಡುಗಿಸಿತ್ತು ಅಲ್ಲಿನ ಹವೆ.
‘ಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಹಣತೆ ಹಿಡಿದ ವನಿತೆ

ಎಳವೆಯಿಂದಲೇ ನೈಟಿಂಗೇಲ್ ಗಣಿತವನ್ನು ಅಭ್ಯಾಸ ಮಾಡಿದ್ದಳು. ಹನ್ನೆರಡನೆಯ ವಯಸ್ಸಿನಲ್ಲಿ ಔಪಚಾರಿಕ ಶಿಕ್ಷಣ ಪಡೆಯುವ ಮೊದಲೇ ಅವಳು ಮಾಹಿತಿ ಸಂಗ್ರಹಿಸುವ, ಸಂಯೋಜಿಸುವ ಮತ್ತು ಪ್ರಸ್ತುತ ಪಡಿಸುವ ಬಗ್ಗೆ ಆಸಕ್ತಿ ವಹಿಸಿದ್ದಳು. ಗಣಿತಶಾಸ್ತ್ರ ಹಾಗು ಸಂಖ್ಯಾಶಾಸ್ತ್ರದ ಕುರಿತಾದ ಆಸಕ್ತಿ ಅವಳ ಜೀವನದುದ್ದಕ್ಕೂ ಜೊತೆಯಲ್ಲಿತ್ತು. ಮಾಹಿತಿಗಳನ್ನು ಸಂಗ್ರಹಿಸಿ ಅವಳು ಬಳಸಿಕೊಳ್ಳುತ್ತಿದ್ದ ರೀತಿ ನರ್ಸಿಂಗ್ ಹಾಗು ವೈದ್ಯಕೀಯ ಸುಧಾರಣೆಗಳ ಮೇಲೆ ಪ್ರಭಾವ ಬೀರಿತು. ಕ್ರಿಮಿಯಾ ಯುದ್ಧದ ಸಮಯದಲ್ಲಿ ಅವಳು ಸಂಗ್ರಹಿಸಿದ ಮಾಹಿತಿ ಒಳಹೊಳಹುಗಳನ್ನು ನೀಡಿತ್ತು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಫ್ಲೋರೆನ್ಸ್ ನೈಟಿಂಗೇಲ್ ಕುರಿತ ಬರಹ ನಿಮ್ಮ ಓದಿಗೆ

Read More

ಅಮ್ಮ , ಆಸ್ಪತ್ರೆ ಮತ್ತು ಮೇಟ್ರಾನ್

ಆಸ್ಪತ್ರೆಗೆ ಬಂದ ಕೆಲವು ರೋಗಿಗಳ ಸಂಬಂಧಿಕರು ಮಾತ್ರ ಇಲ್ಲಿ ನಿಂತು ತಮ್ಮ ಕಡೆಯವರು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದರಾದರೂ ಶಿವ ಮಾತ್ರ ಕಿವುಡನಂತೆ ನಿಮೀಲನೇತ್ರನಾಗಿ ನಿಂತಿರುತ್ತಿದ್ದ. ಶಿವನನ್ನು ಸುತ್ತುವರಿದು ಬೆಳೆದಿದ್ದ ಹಸಿರ ಬಳ್ಳಿಗಳು ಆಗ ಶಿವನ ಹಿನ್ನಲೆಯ ಸೊಬಗನ್ನು ಇಮ್ಮಡಿಸಿದ್ದವು. ಈಗ ಅಲ್ಲಿ ಬಳ್ಳಿಯ ಬದಲು ಗೋಡೆಯ ದೇವಸ್ಥಾನ ತಲೆಯೆತ್ತಿದೆ. ಆಗಿನ ಹಸಿರ ವೈಭವವಿಲ್ಲದ ಶಿವ ಮತ್ತು ಅವನ ತಲೆಯ ಮೇಲಿನ ಗಂಗೆಯರು ಬಳಲಿದವರಂತೆ ಕಾಣುತ್ತಾರೆ. ಯಾರೋ ಕಲಾವಿದ ಶಿವನಿಗೆ ಪೊಲೀಸ್ ಮೀಸೆ ಮಾಡಿದ್ದು ಮಾತ್ರ ಆಗಿನಂತೆ ಈಗಲೂ ತಮಾಷೆಯಾಗಿ ಕಾಣುತ್ತದೆ.
ಡಾ. ಎಚ್.ಎಸ್. ಸತ್ಯನಾರಾಯಣ ಅವರ ಹೊಸ ಪ್ರಬಂಧ ಸಂಕಲನ “ಪನ್ನೇರಳೆ” ಯಿಂದ ಒಂದು ಬರಹ ನಿಮ್ಮ ಓದಿಗೆ

Read More

ನೇಯ್ಗೆಯೆಂಬ ಸುದೀರ್ಘ ನಡಿಗೆ

ದಕ್ಷಿಣ ಕನ್ನಡ ಮತ್ತು ಉಡುಪಿ ಪ್ರದೇಶದ ನೇಕಾರರು ನೇಯುವ ಈ ಸೀರೆಯ ವಿನ್ಯಾಸ ಅಪರೂಪವಾದುದು. ತಿಳಿ ಬಣ್ಣದ ಮೈ ಮತ್ತು ಗಾಢ ಬಣ್ಣದ ಅಂಚುಸೆರಗಿನ ಸೀರೆಯು ಕರಾವಳಿಯ ಹವಾಮಾನಕ್ಕೆ ಕ್ಷೇಮಭಾವ ಕೊಡುವಂತಹುದು. ಪರಿಸರಕ್ಕೆ ಧಕ್ಕೆ ಮಾಡದ ಸಾವಯವ ಉಡುಪು ಮಮತಾ ರೈ ಅವರಿಗೆ ಇಷ್ಟವಾಗಿರುವುದು ಕೇವಲ ವಿನ್ಯಾಸದ ಕಾರಣದಿಂದಲ್ಲ.ಬದುಕು ಪರಿಸರಕ್ಕೆ ಹತ್ತಿರವಾಗಿರಬೇಕು ಎಂಬಅವರ ಆಶಯವೇ ಅವರ ಈ ಕಾಯಕಕ್ಕೆ ಪ್ರೇರಣೆ. ಸೀರೆಯ ಪಯಣವೊಂದರ ಕುರಿತು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ