Advertisement

Category: ದಿನದ ಪುಸ್ತಕ

ಒಲವಿನ ದೀಪ ಎಲ್ಲಿ ಹಚ್ಚಲಿ?: ಮಧು ಬಿರಾದಾರ ಕೃತಿಯ ಕುರಿತು ಶೋಭಾ ನಾಯಕ ಬರಹ

‘ವಿಶಿಷ್ಟ ಪದ ರಚನೆಯೇ ರೀತಿ’ ಎಂದು ವಾಮನ ಅಭಿಮತ ಪಡುವುದನ್ನು ಇಲ್ಲಿ ಉಲ್ಲೇಖಿಸುತ್ತಲೇ ಮಧು ಬಿರಾದಾರ ಅವರ ‘ದೊರೆ ನೆತ್ತಿ ಗರುಡ’ ಕವನ ಸಂಕಲನದಲ್ಲಿನ ವಿಶಿಷ್ಟ ಪದ ರಚನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಉತ್ತರ ಕರ್ನಾಟಕದ ಬಿರುಸಾದ ಭಾಷೆ, ಉಕ್ತಿ ಹಾಗೂ ಶೈಲಿ ಅವರ ಕವನಗಳಲ್ಲಿ ವಿಶಿಷ್ಟವಾಗಿ ಕಾಣುತ್ತೇವೆ. ಪೂರ್ಣ ಪ್ರಮಾಣದಲ್ಲಿ ಅದೇ ಭಾಷೆಯನ್ನು ಬಳಸಿದರೆ ರಾಜ್ಯದ ಉಳಿದ ಭಾಗಗಳಲ್ಲಿ ಅರ್ಥವಾಗದೇ ಹೋಗುವ ಸಾಧ್ಯತೆಗಳ ಎಚ್ಚರಿಕೆಯಲ್ಲಿಯೇ ಮಧು ಹಿತವಾಗಿ-ಮಿತವಾಗಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಮಾತ್ರ ಬಳಸಿ ಕವಿತೆಗಳಿಗೆ ಒಂದು ಹದ ತಂದಿರುವುದನ್ನು ಕಾಣಬಹುದು. ‘ದರಿಯಾಗ್ ಯಾನ್ ನಡ್ಡಾದ್’ ಕವಿತೆಯಂತೂ ಪೂರ್ಣವಾಗಿ ಭಾಷಾ ಪ್ರಯೋಗಕ್ಕೆ ಒಳಗೊಂಡಿರುವುದನ್ನು ನೋಡಬಹುದು.
ಮಧು ಬಿರಾದಾರ ಕವನ ಸಂಕಲನ “ದೊರೆ ನೆತ್ತಿ ಗರುಡ” ಕುರಿತು ಶೋಭಾ ನಾಯಕ ಬರಹ

Read More

ಸಿವಿ ಕವಿತೆಗಳು- ಅಪೂರ್ಣ ಹಾಡಿನ ಆತ್ಮವಿಳಾಸ: ಸಿವಿ ರಾಘವೇಂದ್ರ ಕೃತಿಗೆ ವಿಕಾಸ್ ನೇಗಿಲೋಣಿ ಮುನ್ನುಡಿ

ಸದಾ ಕವಿತೆಯ ಗುಂಗಲ್ಲೇ ಇರುವಂತೆ ಕಾಣುವ ಸ್ನೇಹಿತ ಸಿವಿ ರಾಘವೇಂದ್ರ, ಸಂಕಲನ ತರುತ್ತಿರುವುದು ತಡವಾದರೂ ಈಗಾಗಲೇ ಬಿಡಿಬಿಡಿಯಾಗಿ ಬಹಳ ವರ್ಷಗಳಿಂದ ಕವಿತೆಯನ್ನಷ್ಟೇ ನಿರಂತರವಾಗಿ ಬರೆಯುತ್ತಿರುವ ಬರಹಗಾರ. ಆ ಮಟ್ಟಿಗೆ ಅವರು ಏಕಪ್ರಕಾರ ವ್ರತಸ್ಥ. ಕಿರುತೆರೆಯಲ್ಲಿ ಕೆಲ ವರ್ಷಗಳ ಕಾಲ ದುಡಿಮೆ ಮಾಡಿದರೂ ಸಿನಿಮಾ ಹಾಡುಗಳ ಬಗ್ಗೆ ಮೋಹ, ಸದಾ ಏನನ್ನೋ ಧ್ಯಾನಿಸುತ್ತಿದ್ದಾರೇನೋ ಅನ್ನುವ ಗಾಢ ಮೌನ, ಕಡುವಿಷಾದ- ಇವೆಲ್ಲವೂ ರಾಘವೇಂದ್ರ ಅವರ ಅಂತರಂಗದ ಬಯೋಡಾಟಾ. ತಮ್ಮ ಕವಿತೆಗಳಲ್ಲಿ ಆ ಕ್ಷಣವನ್ನು ಹಿಡಿಯುವುದರಲ್ಲಿ ಅವರು ನಿಸ್ಸೀಮ.
ರಾಘವೇಂದ್ರ ಸಿ.ವಿ. ಕವನ ಸಂಕಲನ “ದೇವರ ಬಿಕ್ಕಳಿಕೆಗಳು” ವಿಕಾಸ್ ನೇಗಿಲೋಣಿ ಮುನ್ನುಡಿ

Read More

ಪ್ರಕೃತಿ ದೇವಿಗೆ ಮೊದಲ ನಮನ: ದೇವಿಕಾ ನಾಗೇಶ್‌ ಬರಹ

ಪ್ರಕೃತಿಯ ಪುನರುತ್ಪತ್ತಿ ಕ್ರಿಯೆಯನ್ನು ಬಲ್ಲ ಹಿರಿಯರಿಗೆ ಪ್ರಕೃತಿಯ ಅಗಾಧತೆಯ ಅರಿವು ಇರುತ್ತದೆ. ಆದ್ದರಿಂದಲೇ ಅವರಲ್ಲಿ ವಿನೀತ ಭಾವ ಕಾಣಿಸಿಕೊಳ್ಳುತ್ತದೆ… ಇದು ದೈವೀಕತೆಯಲ್ಲದೆ ಮತ್ತೇನಲ್ಲ. ಕೃಷಿ ಚಟುವಟಿಕೆಗಳಲ್ಲಿ ಒಂದು ಧ್ಯಾನಸ್ಥ ಸ್ಥಿತಿಯಿದೆ. ಅದು ಯಾವ ಬಿರುದು ಬಾವಲಿಯನ್ನು ಬಯಸುವುದಿಲ್ಲ. ತಲ್ಲೀನತೆ ಹಂಚಿಕೊಂಡು ಬಾಳುವುದು ಕೃಷಿ ಬದುಕಿನ ಜೀವನ ಮೌಲ್ಯಗಳು. ರೈತರು ಹಿಂದೆ ಊರಿನಿಂದ ಊರಿಗೆ ಹೋಗುವಾಗ ಬೀಜಗಳನ್ನು ಬಿತ್ತಿ ಸಾಲುಮರಗಳನ್ನು ಬೆಳೆಸುತ್ತಿದ್ದರು. ನೆತ್ತಿಗೆ ನೆರಳು ನೀಡುವ ಈ ಮರಗಳ ಮೌಲ್ಯ ಅರಿತಿದ್ದ ಅವರು ಪ್ರತಿ ಊರಿನಲ್ಲೂ ಗುಂಡು ತೋಪುಗಳನ್ನು ಮಾಡುತ್ತಿದ್ದರು.
ಅ. ನಾ. ಯಲ್ಲಪ್ಪ ರೆಡ್ಡಿಯವರ “ಅರಣ್ಯೆ ನಿನಗೆ ಶರಣು” ಕೃತಿಯ ಕುರಿತು ದೇವಿಕಾ ನಾಗೇಶ್‌ ಬರಹ

Read More

ದೊಡ್ಡ ದೇಶದ  ಸಂಗತಿಗಳು  ಚಿಕ್ಕ ಚಿಕ್ಕ  ಟಿಪ್ಪಣಿಗಳಲ್ಲಿ: ಶಶಿಧರ ಹಾಲಾಡಿಯವರ ಕೃತಿಯ ಕುರಿತು ನಾರಾಯಣ ಯಾಜಿ ಬರಹ

ಅಮೆರಿಕದಂತಹ ವಿಶಾಲ ದೇಶವನ್ನು ಸಾವಿರಾರು ಪ್ರವಾಸಿಗರು ನೋಡಿರಬಹುದು. ಆದರೆ ಎಲ್ಲರೂ ಅದನ್ನು ಓದುಗರ ಕಣ್ಮುಂದೆ ಜೀವಂತಗೊಳಿಸಲು ಸಾಧ್ಯವಿಲ್ಲ. ಒಂದು ಸ್ಥಳದ ಸೌಂದರ್ಯವನ್ನು ವರ್ಣಿಸುವುದು ಸುಲಭ; ಆದರೆ ಆ ಸ್ಥಳದ ಇತಿಹಾಸ, ಸಾಮಾಜಿಕ ಹಿನ್ನೆಲೆ, ವೈಜ್ಞಾನಿಕ ಅಂಶಗಳು, ಅಲ್ಲಿನ ಜನಜೀವನ ಮತ್ತು ಮಾನವ ನಾಗರಿಕತೆಯ ಪಯಣವನ್ನು ಒಂದೇ ಬರಹದಲ್ಲಿ ಬೆರೆಸಿ ಹೇಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಲಾಡಿಯವರು ಅದನ್ನು ಸಾಧಿಸಿದ್ದಾರೆ. ಈ ಕೃತಿಯ ಅತ್ಯಂತ ದೊಡ್ಡ ಶಕ್ತಿ ಅವರ ‘ಸೂಕ್ಷ್ಮ ಅವಲೋಕನ’. ಸಾಮಾನ್ಯ ಪ್ರವಾಸಿಗನ ಕಣ್ಣಿಗೆ ಕಾಣದ ಸಂಗತಿಗಳನ್ನೂ ಲೇಖಕರು ಹಿಡಿದುಕೊಡುತ್ತಾರೆ.
ಶಶಿಧರ ಹಾಲಾಡಿ ಬರೆದ ಪ್ರವಾಸ ಕಥನ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಹಾಡೊಂದು ವಾಪಸ್ಸು ಕೈ ಬೀಸಿ ಕರೆದಿತ್ತು…: ವಿನಾಯಕ ಅರಳಸುರಳಿ ಕೃತಿಯ ಆಯ್ದ ಭಾಗ

ಡಾ. ಪುರುಷೋತ್ತಮ್ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡೆ. ಮೊಬೈಲನ್ನು ಆನ್ ಮಾಡಿ ಅಪ್ಪನ ಇಷ್ಟದ ಹಾಡುಗಳನ್ನು ಹಾಕಿ ಇಯರ್ ಫೋನನ್ನು ಅಪ್ಪನ ಕಿವಿಗೆ ತೊಡಿಸಿದೆ. ಒಂದಿಡೀ ಬದುಕಿನುದ್ದಕ್ಕೂ ಅವನ ಬೆಳಗು, ಮಧ್ಯಾಹ್ನ, ಸಂಜೆಗಳನ್ನು ಸಲಹಿದ, ‘ಇದೀಗ ಚಿತ್ರಗೀತೆಗಳು’ ಎಂಬ ಘೋಷಣೆಯ ಮೂಲಕ ಅವನ ಹೃದಯದಲ್ಲಿ ದೀಪ ಹಚ್ಚಿದ, ಅವನ ಬಾಲ್ಯ, ಪ್ರೀತಿ, ನೆನಪುಗಳ ಸರ್ವಸ್ವವೂ ಆದ ಹಾಡುಗಳನ್ನು ಒಂದೊಂದಾಗಿ ನೇರ ಅವನ ಹೃದಯಕ್ಕೇ ಕೇಳುವಂತೆ ಹಾಕಿದೆ…
ವಿನಾಯಕ ಅರಳಸುರಳಿ ಬರೆದ “ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ” ಹೊಸ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ