Advertisement

Category: ದಿನದ ಪುಸ್ತಕ

ಕನ್ನಡದ ಕಣ್ಣಲ್ಲಿ ಅಮೆರಿಕನ್ ‘ಶೈಶವ’

ಅನುವಾದವೆಂದರೆ ಪದಗಳ ಅದಲಿ ಬದಲಿಯಲ್ಲ;  ಪದಶಃ  ಬದಲಾವಣೆಯಲ್ಲ ಕವಿತೆಯ ಬಾವವನ್ನು ಮುಕ್ಕಾಗಿಸದೆ ಅತ್ಯಂತ ಸೂಕ್ಷ್ಮವಾಗಿ  ಅಂದುಕೊಂಡ ಭಾಷೆಯಲ್ಲಿ ಹೇಳುವ ರೀತಿಯಾಗಿದೆ.   ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದಿಸುವುದು ನಿಜಕ್ಕೂ ಸವಾಲಿನ ಕೆಲಸ.  ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಅನೇಕ ಕೃತಿಗಳು ಪ್ರವೇಶ ಪಡೆದಿವೆ.  ಇತ್ತೀಚೆಗೆ  ಅಮೆರಿಕನ್ ಕವಯತ್ರಿ ಎಮಿಲಿ ರಾಲ್ಫ್ ಗ್ರೋಶೆಲ್ಸ್ ಅವರ  ‘ಚೈಲ್ಡ್ ಹುಡ್’  ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮೈ. ಶ್ರೀ. ನಟರಾಜ್.  ‘ಶೈಶವ’ ಎನ್ನುವ  ಶೀರ್ಷಿಕೆಯ ಈ  ಕವನಸಂಕಲನದ ವಿಭಿನ್ನತೆಯನ್ನು ಗುರುತಿಸಿದ್ದಾರೆ ಲೇಖಕಿ ಸುಮಾವೀಣಾ.  ಮಕ್ಕಳ ಬಾಲ್ಯವನ್ನೇ ವಸ್ತುವಾಗಿಸಿಕೊಂಡು ಒಡಮೂಡಿದ ಕೃತಿಯ ಕುರಿತು ಅವರು ಬರೆದ ಪುಟ್ಟ ಬರಹವೊಂದು ಇಲ್ಲಿದೆ.

Read More

ಸುಖ ಸಂಸಾರಕ್ಕೆ ಸಾವಿರ ಸೂತ್ರ ಮತ್ತಷ್ಟು ಖಾಲಿ ಹಾಳೆಗಳು

ನೀ ಬಿಡು, ಅತ್ತೂ ಕರೆದೋ, ಪೆಚ್ಚು ಮೋರೆ ಹಾಕಿ ಕುಳಿತುಕೊಂಡೋ, ಸಲ್ಲದ ವರ ಬಂದಾಗ ಅಪ್ಪನ ಮುಂದೆ ಸೊಲ್ಲೆತ್ತದೆ, ಅವ್ವನ ಕಿವಿಯೂದಿ ನಿನ್ನಿಚ್ಛೆಯ ಹುಡುಗ ಸಿಕ್ಕಾಗ ಗ್ರೀನ್ ಸಿಗ್ನಲ್ ತೋರಿದವಳು. ಇದು ಬಲ್ಲಿದರ ಕಾರು ದಾರಿಯ ರಸ್ತೆಯಲ್ಲ, ಬಡವರ ಬಂಡೀ ರಸ್ತೆ ಎಂದರಿತರೂ ಬಂಡೀ ನಡೆಸುವವನ ಯೋಗ್ಯತೆ ಅರಿತು ಹತ್ತಿ ಕುಳಿತವಳು. ಹಾಗಾಗಿ ಉರುಳುವ ಬಂಡಿಯ ಗಾಲಿಗೆ ಕೀಲದ ಕಡೆಗೇ ನಿನ್ನ ಗಮನವಿತ್ತು. ಎಂಥ ತಗ್ಗು ದಿಣ್ಣೆಗಳು ಬಂದರೂ, ಏರು ಇಳುವುಗಳು ಬಂದರೂ ನಿನ್ನವನ ತೋಳಿನ ಶಕ್ತಿಯಾಗಿ ಸಾಗಿದೆ.
ಡಾ. ನಿಂಗು ಸೊಲಗಿ ಬರೆದ “ನನ್ನಿನ್ನ ನಗಿ ನೋಡಿ” ಪುಸ್ತಕದ ಒಂದು ಪತ್ರ ನಿಮ್ಮ ಓದಿಗೆ

Read More

ಕಾಡುವ ನಿನ್ನೆಗಳು ಕಾಣದ ನಾಳೆಗಳ ನಡುವೆ…!

ಕನಸಿನಲ್ಲಿ ಬುದ್ಧನ ಬದುಕಿನಲ್ಲಿ ನಡೆದ ಘಟನೆ ತೆರೆದುಕೊಂಡಿತು. ಸಿದ್ಧಾರ್ಥನು ಶಾಕ್ಯರ ಸಂಘದಲ್ಲಿ ಎಂಟು ವರ್ಷಗಳ ಕಾಲ ನಿಷ್ಠಾವಂತ ಸದಸ್ಯನಾಗಿದ್ದನು. ತನ್ನ ವೈಯಕ್ತಿಕ ವಿಷಯಗಳಿಗೆ ತೋರಿಸುತ್ತಿದ್ದಷ್ಟೆ ಆಸಕ್ತಿಯನ್ನು ಅವನು ಸಂಘದ ವಿಷಯಗಳಲ್ಲೂ ತೋರಿಸುತ್ತಿದ್ದ. ಸಂಘದ ಸದಸ್ಯನಾಗಿ ಅವನ ನಡೆವಳಿಕೆಗಳು ಉಳಿದ ಸದಸ್ಯರಿಗೆ ಮಾದರಿಯಾಗಿ, ಸಂಘದ ಎಲ್ಲಾ ಸದಸ್ಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದನು. ಅವನು ಸದಸ್ಯತ್ವ ಪಡೆದ ಎಂಟನೆಯ ವರ್ಷದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಯೊಂದು ಶುದ್ಧೋಧನನ ಕುಟುಂಬದ ಪಾಲಿಗೆ ದುರಂತವಾಗಿ ಪರಿಣಮಿಸಿತು.
ಪ್ರೊ.ಎಚ್.ಟಿ. ಪೋತೆಯವರ ಹೊಸ ಕಾದಂಬರಿ “ಮಹಾಬಿಂದು” ಇಂದ ಕೆಲವು ಪುಟಗಳು

Read More

ಒಂದೊಂದು ತಲೆಗೂ ಒಂದೊಂದು ಬೆಲೆ

ಈವರೆಗೂ ಅವರು ಇಂಟರ್‍ವ್ಯೂ ಪ್ಯಾನಲ್‍ಗಳಲ್ಲಿ ಕುಳಿತು ಸಂದರ್ಶನ ತೆಗೆದು ಕೊಂಡವರೇ ಹೊರತು ಸಂದರ್ಶನ ಕೊಟ್ಟವರಲ್ಲ. ಅದೂ, ಹೆಚ್ಚಾಗಿ ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಕೊನೆಯ ಹಂತದ ಇಂಟರ್‍ವ್ಯೂಗಳಿಗೆ ಎಚ್ ಆರ್ ಪ್ರತಿನಿಧಿಸುವ ಪ್ಯಾನಲ್‍ನ ಸದಸ್ಯರಾಗಿ. ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಸೀನಿಯರ್ ಮ್ಯಾನೇಜರ್‍ಗಳು ತಮ್ಮ ಸುದೀರ್ಘ ಪ್ರಶ್ನೋತ್ತರಗಳನ್ನು ಮುಗಿಸಿದ ಮೇಲೆ ತಮ್ಮ ಸರದಿಬಂದಾಗ ಒಂದೆರಡು ಎಚ್‍ಆರ್ ಪ್ರಶ್ನೆಗಳನ್ನು ಕೇಳಿ, “ದ ಕ್ಯಾಂಡಿಡೇಟ್ ಹ್ಯಾಸ್ ರೀಸನಬಲ್ ಕಮ್ಯುನಿಕೇಶನ್ ಸ್ಕಿಲ್ಸ್”
ಎಂ.ಆರ್. ದತ್ತಾತ್ರಿ ಅವರ “ಒಂದೊಂದು ತಲೆಗೂ ಒಂದೊಂದು ಬೆಲೆ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಡುಂಡಿರಾಜ್ ಪುಸ್ತಕದ ಹನಿಗಳ ಕಂಪು

‘ಹನಿಗವನ ಅಂದರೇನು? ಹಿಡಿಯಲ್ಲಿ ಇಡಿ
ಅದರ ದೇಹ ಚಿಕ್ಕದು, ಆತ್ಮ ಕಿಡಿನುಡಿ’ ಎಂಬ ಸಾಲುಗಳಂತೆ  ಸಾಮಾನ್ಯವಾಗಿ ಹನಿಗವನಗಳು ಹೆಚ್ಚಾಗಿ ಏಳು ಅಥವಾ ಎಂಟು ಸಾಲುಗಳನ್ನು ಮೀರುವುದಿಲ್ಲ. ಅದಕ್ಕಿಂತ ಉದ್ದವಾದ ಕವನಗಳನ್ನು ಹನಿಗವನ ಗಳೆಂದು ಕರೆದರೆ ತಪ್ಪಾಗುತ್ತದೆ. ಏಕೆಂದರೆ ಹನಿಗವನಗಳ ಪ್ರಧಾನ ಲಕ್ಷಣವೆ ಸಂಕ್ಷಿಪ್ತತೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಿಂದ ಇಂಗ್ಲಿಷ್‍ಗೆ ಬಂದ ಕಿರುಗವನದ ಒಂದು ಶೈಲಿ ಎಪಿಗ್ರಾಂ. ಇದು ಕನ್ನಡದ ಹನಿಗವನವನ್ನು ಹೋಲುತ್ತದೆ.  ಏನೇ ಆಗಲಿ, ಆಕಾರ ಸಾಧ್ಯವಾದಷ್ಟು ಚಿಕ್ಕದಾಗಿರುವುದು ಮುಖ್ಯ. ಚುಟುಕು ಕವಿ ಡುಂಡಿರಾಜ್‌ ಬರೆದ “ಹನಿಗವನ; ಏನು? ಏಕೆ? ಹೇಗೆ?” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ