Advertisement

Category: ದಿನದ ಪುಸ್ತಕ

ಈ ಮಳೆಗಾಲ ನಮ್ಮದಲ್ಲ…

ಚಲಂ ಕವಿತೆಗಳ ಸಾಂಗತ್ಯ  ಕಡಲ ಮೇಲಿನ ಹಾದಿ. ಅನುಭಾವವನ್ನು ಹುಟ್ಟುಹಾಕುವ ನೀರ ಮೇಲಿನ ಪಯಣ. ಒಮ್ಮೆ ಇದು ಆರಂಭವಾದರೆ ದಿಕ್ಸೂಚಿಯಿಂದ ದಿಕ್ಕನ್ನು ತಿಳಿಯಬೇಕೆ ಹೊರತು ಕಣ್ಣಳತೆಗೆ ನಮಗೆ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸ್ವಭಾವತಃ ವಾಚಾಳಿಯಲ್ಲದ ಚಲಂ ಅಷ್ಟೇನೂ ಔಟ್ಗೋಯಿಂಗ್ ಅಲ್ಲದ ಅಂತರ್ಮುಖಿ‌. ಅಂತೆಯೇ ಅವರ ಕವಿತೆಗಳೂ.ಕಡಲು ದಡಕ್ಕನೆ ತಂದು ಅಪ್ಪಳಿಸಿದ ಕಪ್ಪೆಚಿಪ್ಪುಗಳಲ್ಲ ಇಲ್ಲಿನ ಕವಿತೆಗಳು. ತಣ್ಣಗೆ ಹರಿವ ನದಿಯೊಳಗೆ ನುರಿದು ಅವಾಗೇ ನುಣ್ಣಗಾದ ನಯಸ್ಸು ಕಲ್ಲಿನಂತವು.
ಚಲಂ ಹಾಡ್ಲಹಳ್ಳಿಯವರ “ಈ ಮಳೆಗಾಲ ನಮ್ಮದಲ್ಲ” ಕವನ ಸಂಕಲನದ ಕುರಿತು ದಯಾ ಗಂಗನಘಟ್ಟ ಬರಹ

Read More

ನೋವಿನ ಕತೆಗಳ ವೈಚಾರಿಕ ನಿರೂಪಣೆ

ವೇಶ್ಯಾವಟಿಕೆ ಎಂಬ ನೋವಿನ ಲೋಕದ ಕತೆಗಳನ್ನು ಹೇಳಿದಷ್ಟೂ ಮುಗಿಯದು. ಕಂಡಷ್ಟೂ ಮುಗಿಯದು. ಅಂತಹ ಲೋಕದಲ್ಲಿ ಒಂದಿಷ್ಟು ಸಂಚರಿಸಿ ದೀರ್ಘವಾದ ಕ್ಷೇತ್ರಕಾರ್ಯವನ್ನು ಮಾಡಿದ ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಇತ್ತೀಚೆಗೆ ಪ್ರಕಟಿಸಿದ ಪುಸ್ತಕ ‘ವೇಶ್ಯಾವಟಿಕೆಯ ಕಥೆ-ವ್ಯಥೆ’. ವೇಶ್ಯೆಯರ ಪರಿಸ್ಥಿತಿಗಳಿಗೆ ಕಾರಣವಾಗುವ ಪುರುಷವರ್ಗದೆಡೆಗೆ ಪ್ರಖರವಾದ ಸಿಟ್ಟನ್ನು ಒಡಲಿನಲ್ಲಿಟ್ಟುಕೊಂಡು ಅವರು ಈ ಪುಸ್ತಕವನ್ನು ಸಣ್ಣದೊಂದು ವಿಸ್ಮಯ ಮತ್ತು ತುಂಬಾ ಆತಂಕದೊಂದಿಗೆ ಬರೆದಿದ್ದಾರೆ. ಈ ಪುಸ್ತಕದ ಕುರಿತು ತಮ್ಮ ಅನಿಸಿಕೆಯನ್ನು ಇಲ್ಲಿಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

Read More

ಚತುರೋಕ್ತಿಯಿಂದ ಸಹೃದಯತೆಯ ಒಡಲನ್ನು ತೆರೆದಿಟ್ಟ ವ್ಯಕ್ತಿಚಿತ್ರಣ

ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ಈ ಪುಸ್ತಕದಲ್ಲಿ ರಾಜಶೇಖರ ಹೆಗಡೆಯವರು ಗುರುತಿಸುತ್ತಾರೆ. ಜೀವನದಲ್ಲಿಯೂ ಹಾಗೇ ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ. ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ.
ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ – ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ಹೂ ನೋಡಿ ಗಿಡದ ಪರೀಕ್ಷೆ

ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ.
ಆಶಾ ಜಗದೀಶ್‌ ಹೊಸ ಪುಸ್ತಕ “ಕಾಣೆಯಾದವರು” ಪ್ರಬಂಧಗಳ ಸಂಕಲನಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ

Read More

ಗಾಂಧಿ ಎಂಬ ಕಾಡುವ ನೆನಪು…ಕತೆಗಳಲ್ಲಿ ಮರುಹುಟ್ಟು ಪಡೆದಾಗ…

ಇಲ್ಲಿನ ಇತರ ಕತೆಗಳಲ್ಲೂ ಗಾಂಧಿಯ ಪ್ರತಿರೂಪಗಳು ಬರುತ್ತವೆ. ಇದು ಕುತೂಹಲಕಾರಿ. ಗಾಂಧಿ ಬಯಸಿದ, ಅನ್ವೇಶಿಸಿದ ಆಯಾಮಗಳಲ್ಲೆಲ್ಲಾ ಗಾಂಧಿಯನ್ನೇ ಕಾಣುವ ಒಂದು ತಾಂತ್ರಿಕ ಕೌಶಲ್ಯ ಈ ಕತೆಗಳಲ್ಲಿದೆ. ಇದೇ ಜಾಡಿನಲ್ಲಿರುವ ಗಾಂಧಿಯೊಂದಿಗೆ ಮಾತಾಡುವೆ ಮತ್ತು ಆಲದ ಮರದಲ್ಲಿ ಒಂದು ಹಕ್ಕಿ ಕತೆಗಳು ಕಥಾವಸ್ತುವಿನ ಸ್ವರೂಪ ಮತ್ತು ಶೈಲಿಯಲ್ಲಿ ಕೊಂಚ ಭಿನ್ನ. ಗಾಂಧಿ ಅನುಯಾಯಿಯ ಮಕ್ಕಳು ತಮ್ಮ ತಾಯಿ/ತಂದೆ ಪ್ರಭಾವಕ್ಕೊಳಗಾದ ಶಕ್ತಿಯನ್ನು ಮರುಭೇಟಿಮಾಡುವ, ಆ ಮೂಲಕ ಗಾಂಧಿಯನ್ನು ಮುಖಾಮುಖಿಯಾಗುವ ಪರಿಯನ್ನು ಅನಾವರಣಮಾಡುತ್ತವೆ.
ಕೆ. ನಲ್ಲತಂಬಿ ಅನುವಾದಿಸಿದ ಮಹಾತ್ಮನ ಬದುಕಿನ ಕೆಲವು ಆಯ್ದ ಕತೆಗಳ ಸಂಕಲನ “ಮತ್ತೊಂದು ರಾತ್ರಿ” ಕೃತಿಗೆ ಕೆ.ಪಿ. ಸುರೇಶ ಬರೆದ ಮುನ್ನುಡಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ