Advertisement

Category: ಸಂಪಿಗೆ ಸ್ಪೆಷಲ್

ಆಸ್ಮ ಎಂಬ ಸಂಗಾತಿ: ಕೆ.ವಿ. ತಿರುಮಲೇಶ್ ಬರೆದ ಲೇಖನ

“ಇದೆಲ್ಲದರಿಂದ ರೋಗ ಪರಿಹಾರ ಆಗುತ್ತದೆ ಎನ್ನಲಾಗದು, ಆಸ್ಮ ಪರಿಹಾರವಾಗುವುದು ಎಂದಿಲ್ಲ, ಸ್ವಲ್ಪ ತಹಬಂದಿಗೆ ಬರುತ್ತದೆ ಅಷ್ಟೆ. ಅಷ್ಟಾದರೆ ಅದೇ ದೊಡ್ಡ ವಿಷಯ. ಆರಂಭದಲ್ಲಿ ನನಗೆ ಏರುಪೇರುಗಳಿದ್ದುವು, ತಿಂಗಳಿಗೊಮ್ಮೆಯಾದರೂ ಏದುಸಿರು ಜೋರಾಗುತ್ತಿತ್ತು. ಆಗಲೆಲ್ಲ ನನ್ನ ಪಕ್ಕೆಗಳು ನೋಯುತ್ತಿದ್ದು ಸಹಿಸಲು ಕಷ್ಟವಾಗುತ್ತಿತ್ತು. ಅಮ್ಮ ನನ್ನ ಬೆನ್ನು ಉಜ್ಜುತ್ತಿದ್ದಳು. ಇಂಥದೊಂದು ಮಗುವಿಗೆ ಜನ್ಮವಿತ್ತೆನಲ್ಲ ಎಂದು ಅವಳಿಗೆ ದುಃಖವಾಗಿರಬೇಕು.”

Read More

ತಿರುಮಲೇಶ್ ಅನುವಾದಿಸಿದ ಫ್ರೆಂಚ್ ಕಾದಂಬರಿಕಾರ ಜಾನ್ ದ ಓರ್ಮೆನ್ಸನ್ ಕೃತಿಯ ಕೆಲವು ಪುಟಗಳು

ಅವನ ಅತ್ಯಂತ ಸಂತೋಷದ ಸಂಗತಿಯೆಂದರೆ ಪುರೋಹಿತರ ಮಾತುಗಳನ್ನು ಆಲಿಸುವುದಾಗಿತ್ತು. ಬೇರೆ ಹುಡುಗರ ಜತೆ ಹೋಗಿ ಆಡುವುದು ಬಿಟ್ಟು, ಅವನೆಷ್ಟೇ ಮೃದುವಾಗಿದ್ದರೂ ಆ ಹುಡುಗರಿಗೆ ಅವನ ಬಗ್ಗೆ ಸಂದೇಹ ಇತ್ತು; ಅವನು ಯಾವುದಾದರೊಂದು ಪವಿತ್ರ ಪ್ರದೇಶದಲ್ಲಿ ನೆಲೆಗೊಂಡು, ಚಲಿಸದೆ ಅಥವಾ ಮಾತಾಡದೆ, ದೇವರುಗಳ ಮೂಲ ಮತ್ತು ವಿಶ್ವದ ಸ್ಥಿರತತ್ವ ಮುಂತಾದ ಸಂಗತಿಗಳ ಕುರಿತಾದ…”

Read More

ಪ್ರೊ. ಷ. ಶೆಟ್ಟರ್ ಜೊತೆ ಡಾ. ಗೀತಾ ವಸಂತ ನಡೆಸಿದ್ದ ಮಾತುಕತೆ

“ವ್ಯಾಕರಣ, ಛಂದಸ್ಸುಗಳನ್ನು ಬಾಲ್ಯದಲ್ಲಿ ಉರು ಹೊಡೆಸುತ್ತಿದ್ದರು. ಆಗ ಅದು ತಲೆಗೆ ಹತ್ತಲೇ ಇಲ್ಲ. ಕಂಠಪಾಠವು ಸಂಸ್ಕೃತದ ಕಲಿಕಾವಿಧಾನ. ಆದರೆ, ವ್ಯಾಕರಣ, ಛಂದಸ್ಸುಗಳು ಭಾಷೆಯ ಸಮಗ್ರ ತಿಳುವಳಿಕೆಗೆ ಅಗತ್ಯ. ಆ ಗ್ರಂಥಗಳನ್ನೂ ರಸಾಸ್ಪಾದಕ್ಕಾಗಿ, ರಸಾಸ್ಪಾದದ ಮೂಲಕ ಓದಲು ಸಾಧ್ಯ. ವ್ಯಾಕರಣ ಗ್ರಂಥಗಳ ಲೇಖಕರೂ ತುಂಟರು. ಸಾಕಷ್ಟು ರಸಿಕರು! ಉದಾಹರಣೆಗಳನ್ನು ಕೊಡುವಾಗ ರಸಾಸ್ವಾದದ ಸ್ಥಳಗಳನ್ನು ನಿರ್ಮಿಸುವಲ್ಲಿ ಅವರು ನಿಪುಣರು. ಇಂಥ ಸೂಕ್ಷ್ಮಗಳನ್ನು ಬೋಧಕರು ಗಮನಿಸಬೇಕು. ಕಾವ್ಯವನ್ನು ಸಹ ರಸಾಸ್ಪಾದದ ಮೂಲಕವೇ ತಲುಪಿಸುವುದು ಜಾಣತನ.”

Read More

ಪ್ರೊ. ಶೆಟ್ಟರ್ ಎಂದರೆ ಕನ್ನಡದ ಹೆಮ್ಮೆ, ಅಚ್ಚರಿ: ಎಚ್.ಆರ್.ರಮೇಶ ಬರೆದ ಲೇಖನ

“ಕನ್ನಡದ ಈ ವಿಶಿಷ್ಟಬಗೆಯ ಸ್ಪಂದನೆಯ ಬರಹಗಾರ, ಚಿಂತಕ, ಇತಿಹಾಸಕಾರ ಇಲ್ಲದ ನೋವು ಕನ್ನಡದ ಮನಸುಗಳಿಗೆ ನಿಜಕ್ಕೂ ತಡೆದುಕೊಳ್ಳಲಾರದಂತಹ ದುಃಖ. ಇವರ ಜೊತೆ ಎರಡು ದಿನಗಳನ್ನು ಕೊಡಗಿನ ದೇವರಕಾಡುಗಳಲ್ಲಿ ಕಳೆದ ನೆನಪುಗಳು ನನ್ನ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿದೆ. ಅಭಿನವ ರವಿಕುಮಾರ್ ಅವರು ಒಂದು ದಿನ ಫೋನ್ ಮಾಡಿ ರಮೇಶ್ ಶೆಟ್ಟರ್ ಅವರು ಕೊಡಗಿನ ದೇವರ ಕಾಡುಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಿದ್ದಾರೆ…”

Read More

ಕಣ್ಣು ತೆರೆಸುವ ಹೆಣ್ಣಿನ ನೈಜ ಕಥನಗಳು: ಸುಧಾ ಆಡುಕಳ ಲೇಖನ

“ಹೆಣ್ಣನ್ನು ವ್ಯಾಖ್ಯಾನಿಸುವ ಸೌಂದರ್ಯ, ಸೌಶೀಲ್ಯ, ಪಾತಿವ್ರತ್ಯ ಈ ಎಲ್ಲ ಪದಗಳಿಗೆ ಇಲ್ಲಿಯ ಪಾತ್ರಗಳು ತಮ್ಮ ಅನುಭವಲೋಕದ ಮೂಲಕವೇ ಭಿನ್ನ ವ್ಯಾಖ್ಯಾನವನ್ನು ನೀಡುತ್ತವೆ. ತನ್ನ ಮೂಗನ್ನು ಕಳಕೊಂಡು ಕುರೂಪಿಯಾದ ಶೂರ್ಪನಖಿ ಸುಂದರವಾದ ಬನವನ್ನು ಸೃಷ್ಟಿಸುತ್ತಾಳೆ. ಗಂಡನ ಅಗಲುವಿಕೆಯ ನಂತರವೂ ಮಂಡೋದರಿ ತನ್ನ ಅಲಂಕಾರವನ್ನು ತೆಗೆಯುವುದನ್ನು ವಿರೋಧಿಸುತ್ತಾಳೆ. ತನ್ನನ್ನು ವಿಚಾರಿಸುವ ಹಕ್ಕನ್ನು ತಾನು ಯಾರಿಗೂ ಕೊಡಲಾರೆ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ