Advertisement

Category: ಸರಣಿ

ʻಕೀಸ್ ಟು ದ ಹೌಸ್‌ʼ: ವಿಷಾದದ ಸೋಂಕಿಲ್ಲದೆ ಸಾಗುವ ಭಾವಕಥನ

ತಂದೆಗೆ ಅಪರಾಧಿ ಪ್ರಜ್ಞೆ ಕಾಡುತ್ತಿರುತ್ತದೆ. ಹದಿನೈದು ವರ್ಷ ವಿಕಲಾಂಗನನ್ನು ಸಹಿಸಲಾರೆ ಎಂಬ ಕಾರಣದಿಂದ ದೂರ ಮಾಡಿ ನಿಶ್ಚಿಂತನಾಗಿ ಜೀವಿಸಿದ್ದ ಸಂಗತಿ ಅವನನ್ನು ಕಾಡುತ್ತದೆ. ತಂದೆಯ ಕರ್ತವ್ಯಗಳನ್ನು ನಿರ್ವಹಿಸುವುದಷ್ಟೇ ಅಲ್ಲ ಅದಕ್ಕಿಂತ ತಂದೆಯಾಗಿ ಪ್ರಾಮಾಣಿಕವಾಗಿ ಪರಿಭಾವಿಸುವುದು ಹೆಚ್ಚಾಗಿ ಸದ್ಯದ ಅಗತ್ಯ. ಇದರಿಂದಾಗಿಯೇ ವಿಕಲಾಂಗನ ಜೊತೆ ಆಡುವ ಮಾತುಗಳು ಕಡಿಮೆ ಇದ್ದರೂ ಅವುಗಳ ಭಾವಲಯದಲ್ಲಿ ವಿವರಣೆಗೆ ಮೀರಿದ ಅಂಶ ಇರಬೇಕಾಗುತ್ತದೆ. ಇದಕ್ಕೆ ಅತ್ಯಂತ ಸಹಜವಾಗಿ ಅಪಾರ್ಥಕ್ಕೆ ಅವಕಾಶವಿಲ್ಲದಂತೆ ಒಳಮಾಡಿಕೊಳ್ಳುವ ಮನಸ್ಥಿತಿ ವಿಕಲಾಂಗನಿಗೆ ಇರುವುದೂ ಅಷ್ಟೇ ಅವಶ್ಯ.

Read More

ಎಂಡದ ಗಡಿಗೆ ಹೊತ್ತ ಸರಸಿಯರು

ಪೆಂಟೆಯ ಸರಸಿಯರು ನನ್ನ ತಾಯಿಯ ಬಗ್ಗೆ ವಿಪರೀತ ಕುತೂಹಲ ತೋರುತ್ತಿದ್ದರು. ‘ಒಮ್ಮೆ ಕರೆದುಕೊಂಡು ಬಾ’ ಎನ್ನುತ್ತಿದ್ದರು.  ಆಕೆ ಹೊಸಿಲು ದಾಟಿ ಬರುವಂತಿರಲಿಲ್ಲ. ತಾಯಿಗೆ ಮನೆಯೇ ಸೆರೆಯಾಗಿತ್ತು. ಹಾಗೆ ಹೊರಗೆ ತಾಯಿ ಹೋಗುವಂತಿದ್ದರೆ ಅಪ್ಪ ತಲೆಕಡಿಯುತ್ತಿದ್ದನೇನೊ. ನನಗೆ ಆ ಹೆಂಗಸರ ಬಗ್ಗೆ ಕೆಡುಕಿರಲಿಲ್ಲ. ಹೊಳೆಯಲ್ಲಿ ಅವರು ಈಜಾಡುತ್ತಿದ್ದರು. ಈಜು ಕಲಿಸಲು ನೀರಿಗಿಳಿಸಿ ಕೈಕಾಲು ಬಡಿಸುತ್ತಿದ್ದರು. ಗತಕಾಲದ ನನ್ನ ಹಳೆಯ ಚಡ್ಡಿ ನಿಲ್ಲುತ್ತಿರಲಿಲ್ಲ. ಅದನ್ನತ್ತ ಬಿಚ್ಚಿ ದಂಡೆಗೆ ಎಸೆಯುತ್ತಿದ್ದರು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ, ‘ನನ್ನ ಅನಂತ ನೀಲಿ ಆಕಾಶ’ ಸರಣಿಯ ಹೊಸ ಬರಹ 

Read More

ಒಂದು ನೊಣದ ಕಥೆ….

ಅಂದು ಬೆಳಿಗ್ಗೆ ಕೋರ್ಟಿಗೆ ಹೋದ ನನಗೆ ಕಟ ಕಟೆಯಲ್ಲಿ ಮುಖಾಮುಖಿಯಾಗಿದ್ದು ಆಗ ಬೆಂಗಳೂರಿನಲ್ಲಿ ಇದ್ದಂತಹ ಇಬ್ಬರು ಪ್ರಸಿದ್ಧ, ಘಟಾನುಘಟಿ ಕ್ರಿಮಿನಲ್ ವಕೀಲರುಗಳಲ್ಲಿ ಒಬ್ಬರು. ಶವಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನಾನು ನೀಡುತ್ತ ಹೋದಂತೆ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೆಲವು ದಿವಸಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದಿದ್ದ ನಾನು ಪರೀಕ್ಷೆಗೆಂದು ಬಹಳಷ್ಟು ಓದಿದ್ದೆ. ಆದ್ದರಿಂದ ಪಾಟೀ ಸವಾಲು ಎದುರಿಸುತ್ತ, ಸಾವು ಸಂಭವಿಸಿ ಅಂದಾಜು ಎಷ್ಟು ದಿನಗಳಾಗಿರಬಹುದು ಎಂಬುದನ್ನು ಹೇಳಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಹೊಸ ಬರಹ. 

Read More

‘ಸಮಷ್ಟಿ ನೀತಿ’ ಒಪ್ಪುವ ಔಚಿತ್ಯದ ಚರ್ಚೆ

ಯಕ್ಷಗಾನಕ್ಕೆ ಲಕ್ಷಣಗ್ರಂಥವಿಲ್ಲ, ಪ್ರಪಂಚದ ಹಲವು ಪ್ರದರ್ಶನ ಕಲೆಗಳಿಗೂ ಶಾಸ್ತ್ರ ಹೇಳುವ ‘ಪಠ್ಯ’ಗಳಿಲ್ಲ. ನಾಟ್ಯಶಾಸ್ತ್ರ, 11 ನೇ ಶತಮಾನದಲ್ಲಿ ಕ್ಷೇಮೆಂದ್ರ ಬರೆದ ‘ಔಚಿತ್ಯ ವಿಚಾರ ಚರ್ಚಾ’ ಇತ್ಯಾದಿ ಗ್ರಂಥಗಳಿದ್ದರೂ ಆ ಕಾಲದಲ್ಲೇ ಕಲಾಪ್ರಕಾರಗಳು ಅವುಗಳನ್ನು ಎಷ್ಟು ಅನುಸರಿಸುತ್ತಿದ್ದವೊ ಗೊತ್ತಿಲ್ಲ. ಆದರೆ ಪಠ್ಯಗಳು ಒಂದಕ್ಕೊಂದು ಪ್ರತಿಕ್ರಿಯಿಸುತ್ತಾ, ಒಂದನ್ನೊಂದು ವ್ಯಾಖ್ಯಾನಿಸುತ್ತಾ ತಮ್ಮದನ್ನು ಸೇರಿಸುವ ‘ಅಂತರ್ ಪಠ್ಯೀಯತೆ’ಯು ಪಠ್ಯ ಮತ್ತು ಪ್ರಯೋಗಕ್ಕೂ ಅನ್ವಯಿಸುತ್ತದೆ.  ಕೃತಿ ಆರ್. ಪುರಪ್ಪೇಮನೆ ಬರೆಯುವ ‘ಯಕ್ಷಾರ್ಥ  ಚಿಂತಾಮಣಿ’ ಸರಣಿಯಲ್ಲಿ ಯಕ್ಷಗಾನ ಔಚಿತ್ಯದ ಕುರಿತ ಲೇಖನ. 

Read More

ಗಂಟಿಚೋರ ಸಮುದಾಯದ ತುಡುಗು ನುಡಿ

ಇಂದು ಬುಡಕಟ್ಟುಗಳ ಭಾಷೆಯ ಬಿಕ್ಕಟ್ಟೆಂದರೆ, ಆಯಾ ಭಾಗದ ಬಹುಸಂಖ್ಯಾತರ ಭಾಷೆಯನ್ನು ಬುಡಕಟ್ಟುಗಳು ಅನಿವಾರ್ಯವಾಗಿ ಬಳಸಬೇಕಾಗಿದೆ. ಹಾಗಾಗಿ ತಮ್ಮ ವೃತ್ತಿ ಬದುಕಿಗೆ ಅಂಟಿಕೊಂಡಿದ್ದ ಭಾಷೆಗಳನ್ನು ಬುಡಕಟ್ಟುಗಳ ಹೊಸ ತಲೆಮಾರು ಬಳಸುತ್ತಿಲ್ಲ. ಬಳಸುವ ಅಗತ್ಯವೂ ಕಾಣುತ್ತಿಲ್ಲ. ಆದರೆ ಎಷ್ಟೋ ಬಾರಿ ಈ ಬುಡಕಟ್ಟು ಭಾಷೆ ನುಡಿಗಟ್ಟುಗಳು ಆಯಾ ಸಮುದಾಯದ ಚರಿತ್ರೆಯನ್ನೂ ಹೇಳುತ್ತಿರುತ್ತದೆ. ಹೀಗೆ ಬುಡಕಟ್ಟುಗಳ ಭಾಷೆಯೊಂದು ನಶಿಸಿದರೆ, ಅದರ ಜತೆ ಆ ಸಮುದಾಯದ ಚರಿತ್ರೆಯೂ ನಶಿಸಿದಂತೆ. ಈ ಬಗ್ಗೆ ನೋಮ್ ಚೋಮಸ್ಕಿಯನ್ನು ಒಳಗೊಂಡಂತೆ ಜಗತ್ತಿನ ಭಾಷಾತಜ್ಞರು ಎರಡು ದಶಕಗಳಿಂದ ಇಂತಹ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಒಂಭತ್ತನೇ ಕಂತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ