Advertisement

Category: ಸಾಹಿತ್ಯ

ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಈ ಭಾನುವಾರದ ಕತೆ

ಮಜೀದ್ ಕ್ಯಾಷಲ್‌ನ ಭಾರಕ್ಕಿಂತಲೂ ಭಾರವಾದ ಹೃದವನ್ನಿಟ್ಟುಕೊಂಡು ನಾನು ಬಾಳುತ್ತಿರುವುದನ್ನು ಅವರಿಗೆ ಹೇಳಲು ಆಗುತ್ತಿಲ್ಲ. ಮುಂದೆ ಹೇಳದಲೆ ಹೋಗಬಹುದು. ಅವರು ಅದನ್ನು ನಂಬುತ್ತಾರೋ ಇಲ್ಲವೋ. ನಾನು ಯಾರು ಎಂಬುದನ್ನು ಅಷ್ಟಾಗಿ ವಿಚಾರಿಸಲೂ ಹೋಗಲೇ ಇಲ್ಲ. ಅವರೊಂದಿಗೆ ನಾನು ಇರಲು ಅಷ್ಟು ಸಹಜವಾಗಿ ಒಪ್ಪಿಕೊಂಡುಬಿಟ್ಟರು. ನಾನು ಪ್ರಾಗ್‌ನಿಂದ ಬರುವ ಮುನ್ನ ಅವರೊಂದಿಗೆ ಬಾಂಬೆಯ ನಜ್ಮಾ ಎಂಬ ಚಾಕರಿಯವಳು ಮತ್ತು ಅವಳ ಸಂಸಾರ ಇತ್ತು.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಕತೆ “ಪಾತ್ರ” ನಿಮ್ಮ ಭಾನುವಾರದ ಓದಿಗೆ

Read More

ಎಸ್. ಗಂಗಾಧರಯ್ಯ ಅನುವಾದಿಸಿದ ಹೆಮಿಂಗ್ವೆ ಕಥೆ “ಕನೇರಿ”

ಕನೇರಿ ತನ್ನ ಪುಕ್ಕಗಳನ್ನೊಮ್ಮೆ ಕೊಡವಿತು. ನಂತರ ಅವುಗಳನ್ನು ಕುಕ್ಕತೊಡಗಿತು. `ನಂಗೆ ಯಾವಾಗಲೂ ಹಕ್ಕಿಗಳೆಂದರೆ ಪಂಚ ಪ್ರಾಣ. ನಾನು ಈ ಕನೇರಿ ಹಕ್ಕೀನಾ ನನ್ನ ಪುಟ್ಟ ಮಗಳಿಗಾಗಿ ತಗಂಡು ಹೋಗ್ತಿದೀನಿ. ಹಾ, ಅಲ್ಲಿ ನೋಡಿ. ಅವನು ಈಗ ಹಾಡ್ತಾ ಇದಾನೆ,’ ಅಂದಳು ಅಮೇರಿಕನ್ ಹೆಂಗಸು. ಕನೇರಿ ಚಿಲಿಪಿಲಿಗುಟ್ಟತೊಡಗಿತು. ಅದರ ಗಂಟಲ ಮೇಲಿನ ಪುಕ್ಕಗಳು ನಿಮಿರಿ ನಿಂತವು. ನಂತರ ಅದು ತನ್ನ ಕೊಕ್ಕನ್ನು ಕೆಳಕ್ಕಾಕಿಕೊಂಡು ಪುಕ್ಕಗಳನ್ನು ಹೆಕ್ಕತೊಡಗಿತು.
ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ನೆಸ್ಟ್‌ ಹೆಮಿಂಗ್ವೆಯ ಒಂದಷ್ಟು ಕಥೆಗಳನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದಿದ್ದು, ಈ ಸಂಕಲನದ ಒಂದು ಕಥೆ “ಕನೇರಿ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಜಯಶ್ರೀ ಕಾಸರವಳ್ಳಿ ಬರೆದ ಕತೆ

ಹಾಗೆ ನೋಡಿದರೆ, ಅವನು ಇರುವೆ ತಿಂದಿದ್ದು ಇಂದೇ ಮೊದಲಿರಲಿಕ್ಕಿಲ್ಲ. ಈ ಮೊದಲೇ ಅವನಿಗೆ ಅರಿವಿಲ್ಲದಂತೆ ಅದೆಷ್ಟು ಇರುವೆ ಅವನ ಹೊಟ್ಟೆಯೊಳಗೆ ಹೊಕ್ಕು ಹೊರ ಹೋಗಿದ್ದವೋ ಯಾರಿಗೆ ಗೊತ್ತು? ಅವನೂರಿನ ಆಲೆಮನೆ ಸಂದರ್ಭದಲ್ಲಂತೂ ಇರುವೆ ಜೊತೆ ದೊಡ್ಡ ದೊಡ್ಡ ಗೊದ್ದಗಳೆಲ್ಲಾ ಮನೆ ತುಂಬಾ ಹರಿದಾಡುತ್ತಿದ್ದವು. ಉಪ್ಪರಿಗೆಯಲ್ಲಿ ಜೋಡಿಸಿಟ್ಟ ಬೆಲ್ಲದ ತಗಡಿನ ಡಬ್ಬಗಳಿಗೆ ರಾಶಿ ಇರುವೆಗಳು ಮುತ್ತಿಕೊಳ್ಳುತ್ತಿದ್ದರಿಂದ, ಅವನಪ್ಪ ಇರುವೆಗಳನ್ನು ಓಡಿಸಲು ಡಬ್ಬದ ಸುತ್ತಲೂ ಡಿ.ಡಿ.ಟಿ. ಪುಡಿಯನ್ನು ದುಂಡಗೆ ಚೆಲ್ಲಿರುತ್ತಿದ್ದರು.

Read More

ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ

ಅವಳಮ್ಮ ಅಂದುಕೊಂಡಂತೆ ಅವ ಅವಳಿಗೆ ಬರೀ ಕ್ಲಾಸ್ ಮೇಟ್ ಮಾತ್ರವಾಗಿರಲಿಲ್ಲ. ಅವನೆಂದರೆ ಮಿಠಾಯಿ. ಅವನೆಂದರೆ ಬಲೂನು. ಅವಳು ಮೋಞಿಯವರ ಅಂಗಡಿಗೆ ಮನೆಸಾಮಾನಿಗಂತ ಹೋಗಲಾರಂಭಿಸಿದ್ದು ಎಂಟನೇ ಕ್ಲಾಸಿರಬೇಕಾದರೆ. ಅಬೂಬಕರ್ ಅಂಗಡಿ ಕೌಂಟರಲ್ಲಿದ್ದರೆ ಅವಳಿಗೊಂಥರಾ ಖುಷಿ. ಅವನು ಇರುವ ಹೊತ್ತು ನೋಡಿಯೇ ಅವಳು ಅಂಗಡಿಗೆ ಹೋಗುತ್ತಿದ್ದುದೂ ಇದೆ. ಹಾಗೆ ಹೋದಾಗ ಮನೆ ಸಾಮಾನು ಜತೆ ಅವಳಿಗಿಷ್ಟದ ಮಿಠಾಯಿ ನಾಕು ಬೇಕಂತ ಕೇಳಿದರೆ ಅವನು ಆರು ಹಾಕಿರುತ್ತಿದ್ದ. ಅವಳಿಗೆ ಬುಗ್ಗೆಯೆಂದರೆ ಇಷ್ಟ ಅಂತ ಅವನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೊಂದು ಸಲ ಬಲೂನು ಕೂಡ ಹಾಕಿರುತ್ತಿದ್ದ.
ಶ್ರೀ ಡಿ. ಎನ್. ಬರೆದ ಈ ಭಾನುವಾರದ ಕತೆ “ಬಲೂನು”

Read More

ನವೀನ ಗಣಪತಿ ಬರೆದ ಈ ಭಾನುವಾರದ ಕತೆ

ಮಧ್ಯಾಹ್ನ ಒಂದು ಘಂಟೆಗೇ ತಾನು ಮನೆಯಲ್ಲಿ ಮಾಡಬಹುದಾದ ಎಲ್ಲ ಕೆಲಸಗಳೂ ಮುಗಿದು ಮತ್ತೆಲ್ಲ ಮನಸ್ಸಿಗೆ ಕಿರಿಕಿರಿಯಾಗ ಹತ್ತಿತ್ತು. ನಾಲ್ಕು ದಿನ ದಾವಣಗೆರೆಗೆ ಹೋಗಿ ಮಗಳೊಟ್ಟಿಗೆ ಇದ್ದು ಬರೋಣವೆನಿಸುತ್ತಿತ್ತು. ಆದರೆ ಶಂಭಣ್ಣನನ್ನು ಬಿಟ್ಟು ಎಲ್ಲಿಯೂ ಹೋಗುವಂತಿರಲಿಲ್ಲ. ಮಗಳೂ ವಾರ ವಾರ ಬರುವವಳಲ್ಲ. ಅವಳಿಗೆ ಭಾನುವಾರ ರಜಾದಿನಗಳು ಇದ್ದಾಗಲೇ ಜೋರು ವ್ಯಾಪಾರ. ಇನ್ನು ಆಚೀಚೆ ಎರಡು ಹೆಂಗಸರೊಟ್ಟಿಗೆ ಹರಟೆ – ಮಾತು – ಒಡನಾಟ ಮಾಡೋಣವೆಂದರೆ, ಒಬ್ಬರ ವ್ಯವಹಾರವಾದರೂ ಚೊಕ್ಕಟವಾಗಿದೆಯೇ?
ನವೀನ ಗಣಪತಿ ಬರೆದ ಈ ಭಾನುವಾರದ ಕತೆ “ಧನಲಕ್ಷ್ಮಿ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ