Advertisement

Category: ಸಾಹಿತ್ಯ

ಸಚೇತನ ಭಟ್‌ ಅನುವಾದಿಸಿದ ಯಿ ಯುನ್ ಲಿ ಕತೆ “ಗಾಯ”

ಅವಳ ತಲೆಯಲ್ಲಿ ಯಾವತ್ತೋ ಓದಿದ್ದ “ವುಮನ್ ಇನ್ ಲವ್” ಪುಸ್ತಕದ ಸಾಲುಗಳು ಅಚ್ಚಳಿಯದಂತೆ ಕೂತಿದ್ದವು. ಪುಸ್ತಕದಲ್ಲಿ ಹುಡುಗಿಯೊಬ್ಬಳು ಯುದ್ಧಕ್ಕೆ ಹೊರಟಿರುವ ತನ್ನ ಪ್ರಿಯಕರನ ಜೊತೆಗೆ ಮಲಗುವದನ್ನು ನಿರಾಕರಿಸುತ್ತಾಳೆ. ಮುಂದೆ ಯುದ್ಧದಲ್ಲಿ ಅವನು ಸಾವನ್ನು ಪ್ರತಿ ದಿನ ಎದುರು ನೋಡುತ್ತಿರವಾಗ ಹಳೆಯ ನೆನಪಿನಿಂದಾಗಿ ದೇಹದ ಹಸಿವೆಯನ್ನು ತೀರಿಸಿಕೊಳ್ಳುವದು ಮಾತ್ರ ಅವನ ಗುರಿಯಾಗಿಬಿಟ್ಟರೆ ಎನ್ನುವ ಭಯ ಅವಳನ್ನು ಕಾಡಿತ್ತು.
ಸಚೇತನ ಭಟ್‌ ಅನುವಾದಿಸಿದ ಚೈನಾ ಮೂಲದ ಕಥೆಗಾರ್ತಿ ಯಿ ಯುನ್ ಲಿ ಕತೆ “ಗಾಯ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಎಸ್.‌ ಗೊರವರ ಬರೆದ ಕತೆ

ಪದ್ಮಾಳ ಅತ್ತೆ, ಮಾವನಿಗೂ ಚಿಂತೆ ಮನೆ ಮಾಡಿತು. ತಮ್ಮ ವಂಶ ಬೆಳೆಸುವ ಕುಡಿ ಪಡೆಯಲು ಅದೇನು ಮಾಡಬೇಕೋ ತಿಳಿಯದಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಿದರೆ ಹ್ಯಾಗೆ ಎನ್ನುವ ಆಲೋಚನೆ ಅವರಲ್ಲಿ ಮೊಳೆಯಿತು. ಕೆಲ ಸಂಬಂಧಿಕರು ಮದುವೆ ಮಾಡುವುದೇ ಸರಿಯೆಂದು ಸಲಹೆ ನೀಡಿದರು. ಇದು ಪದ್ಮಾಳ ಕಿವಿ ತಲುಪಿ ವಿಚಿತ್ರ ಸಂಕಟದಲ್ಲಿ ಮುಳುಗಿದಳು. ದಿನಪೂರ್ತಿ ಮಾತಿಲ್ಲದೆ ಚಿಂತೆಯಲ್ಲೇ ಮುಳುಗಿದಳು. ಲೋಕದ ಪರಿವೆಯನ್ನೇ ಮರೆಯತೊಡಗಿದಳು. ಟಿ.ಎಸ್. ಗೊರವರ ಬರೆದ ಕತೆ “ಕತ್ತಲಿನಾಚೆ”

Read More

ವಿಜಯಾ ಮೋಹನ್‌ ಬರೆದ ಈ ಭಾನುವಾರದ ಕತೆ

ಸ್ವಂತ ಅವಳ ಮನೆದೇವ್ರು ಮಲ್ಲಮ್ಮನ ಪೂಜೆಯೊಳಗೆ, ಕಾರ್ತಿಕ್‌ಮಾಸದಲ್ಲಿ ನಡೀತಿದ್ದ ತಿಂಗಳ ಪೂಜೇಲಿ ಸಂಜೆಯೊಳಗೆ ಹಾಡೇಳಲು ಕುಂತುಕೊಳ್ಳುತ್ತಿದ್ದ ಸಂಕಮ್ಮ ಪೂಜೆ ಮುಗಿಯುವ ತನಕವು ಅವಳ ಗೆಳತಿಯರ ಜೊತೆ, ಶೃತಿ ಸೇರಸ್‌ಕೊಂಡು ಹೇಳ್‌ತಿದ್ದವಳನ್ನ, ಅಮ್ಮ ಸಾಕು ನಡೀರ್ರೆ ನಿದ್ದೆ ಬರ್‍ತೈತೆ ಅಂದ್ರು ನಿಲ್ಲಸ್ದಂಗೆ ಹೇಳಿ ಹೇಳಿ ದಣಿದು ಬಂದು ಮಲಗುತ್ತಿದ್ದವಳ ಹಾಡುಗಳನ್ನ ಈಗೀಗ ಅಷ್ಟಾಗಿ ಯಾರೂ ಕೇಳಿಸಿಕೊಳ್ಳದಾದರು…
ವಿಜಯಾ ಮೋಹನ್‌ ಬರೆದ ಹೊಸ ಕತೆ “ಹಾಡು” ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು

ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!

Read More

ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ನಾನು ಯಾವತ್ತೂ ಅವಳು ಈ ರೀತಿಯಾಗಿ ಕನಸಿನಲ್ಲಿ ಮಾತಾಡಿದ್ದು ನೋಡಿದ್ದೇ ಇಲ್ಲ. ಹೆಚ್ಚು ಕಡಿಮೆ ನನಗೆ ಎಪ್ಪತ್ತರ ವಯಸ್ಸು. ಮದುವೆಯಾಗಿ ಐವತ್ತು ಸಂವತ್ಸರಗಳೇ ನಮ್ಮ ನಡುವೆ ಹಾಗೇ ಕಳೆದು ಹೋಗಿತ್ತು. ಅಷ್ಟೂ ವರ್ಷಗಳಲ್ಲಿ ಜಾನಕಿ ಕನಸಿನಲ್ಲಿ ಮಾತಾಡಿದ್ದು, ಉಹೂಂ.. ನಾನಂತು ಒಮ್ಮೆಯೂ ಕೇಳಿಯೂ ಇಲ್ಲ, ನೋಡಿಯೂ ಇಲ್ಲ. ಆದರೂ ಆ ರಾತ್ರಿ ಮೊದಲ ಬಾರಿಗೆ ಜಾನಕಿ ಕನಸಲ್ಲಿ ಮಾತಾಡಿದ್ದಳು!!
ಎ.ಬಿ. ಪಚ್ಚು ಬರೆದ ಕಥೆ “ಪೌರ್ಣಮಿ” ನಿಮ್ಮ ಈ ಭಾನುವಾರದ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ