Advertisement

Category: ಸಾಹಿತ್ಯ

ಶ್ರೀಧರ ಬಳಗಾರ ಕಾದಂಬರಿಯ ಕುರಿತು ಶ್ರೀದೇವಿ ಕೆರೆಮನೆ ಬರಹ

“ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ….”

Read More

“ಮೂರ್ತಣ್ಣ”: ದರ್ಶನ್ ಜೆ. ಬರೆದ ಈ ವಾರದ ಕತೆ

“ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ನ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ…”

Read More

ಎ.ಎನ್. ಪ್ರಸನ್ನ ಅವರ ಕಥಾ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಮಾತುಗಳು

“ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಈ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು…”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕತೆ

“ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು….”

Read More

ಸದಾಶಿವ ಸೊರಟೂರ ಕವನ ಸಂಕಲನಕ್ಕೆ ಆಶಾಜಗದೀಶ್ ಮುನ್ನುಡಿ

“ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ