Advertisement

Category: ಸಾಹಿತ್ಯ

ನದೀಮ ಸನದಿ ಪುಸ್ತಕದ ಕುರಿತು ಆರ್ ವಿಜಯರಾಘವನ್ ಬರಹ

“ಇಂದಿನ ಎಲ್ಲ ಮೌಲ್ಯಗಳು ಪಲ್ಲಟವಾಗುತ್ತಿರುವ ಸಮಾಜೋ-ರಾಜಕೀಯ ಸನ್ನಿವೇಶಗಳಲ್ಲಿ ಗಾಂಧಿಯ ಆದರ್ಶಗಳಲ್ಲಿ ರೂಪುಗೊಳ್ಳಬೇಕಾದ ನಮ್ಮ ವ್ಯಕ್ತಿತ್ವಗಳು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ಒಳಗೊಂಡ ಕೆಟ್ಟ ಚಿತ್ರಗಳಾಗಿ ಎದುರು ಬಂದು ನಿಲ್ಲುತ್ತವೆ. ಗಾಂಧಿ ಸಿಕ್ಕಿದ್ದ ಕವಿತೆಯ ಶೀರ್ಷಿಕೆ ಗಾಂಧಿಯನ್ನು ಕುರಿತ ಅಗೌರವದಿಂದ ಮೂಡಿದ್ದಲ್ಲ. ಇಲ್ಲಿ ಕವಿಗೆ ಎದುರಾದ ಗಾಂಧಿ ಧೋತಿ ಪಂಚೆಯ ನಗುಮೊಗದ ಗಾಂಧಿಯಲ್ಲ.”

Read More

ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಶಿವರಾಮ ಕಾರಂತರು ಬರೆದ ಕತೆ…

“ರಾಧಾಕೃಷ್ಣನು ಬಂದ ಹದಿನೈದು ದಿವಸಗಳಲ್ಲಿ, ತನ್ನ ಗುಡಿಸಲಿನ ಸಲುವಾಗಿ ಸಾಮಗ್ರಿಗಳನ್ನು ದೊರಕಿಸಿಕೊಳ್ಳಲು ಊರಲ್ಲಿ ಅಲೆದಾಡಿದನು. ಒಬ್ಬಿಬ್ಬರ ಪರಿಚಯವೂ ಆಯಿತು. ಆಗ ಅವರಲ್ಲಿ ಹೋಗುವ ಎಂದು ಹೊರಟನು. ಆ ದಿನದ ಗ್ರಾಸಕ್ಕೆ ಬೇರೆ ದಾರಿ ಇದ್ದಿರಲಿಲ್ಲ. ಅದಕ್ಕಾಗಿ ಹೊರಟಿದ್ದ ಅವನು ಹಿಂದೀ ರಣಾಗ್ರದಲ್ಲಿ ಸಿಲುಕಿಕೊಂಡನು. ಕೊನೆಗೆ ಶ್ಯಾಮ, ನೀಲ ಎಂದು ಇಬ್ಬರು ಹಿರಿಯ ಹುಡುಗರನ್ನು ಕರೆದುಕೊಂಡು…”

Read More

ಅಮೃತಾ ಪ್ರೀತಮ್ ಕವಿತೆಗಳ ಕುರಿತು ರೇಣುಕಾ ನಿಡಗುಂದಿ ಮಾತುಗಳು…

“ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ….”

Read More

ಅಗಸ್ತ್ಯ: ಉಮಾರಾವ್ ಬರೆದ ಕತೆ

“ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು…”

Read More

ಅಜಯ್ ವರ್ಮಾ ಅನುವಾದಿಸಿದ ‘ವಿಮುಕ್ತೆ’ ಕೃತಿಗೆ ಬಿ.ಎನ್.ಸುಮಿತ್ರಾಬಾಯಿ ಬರೆದ ಮುನ್ನುಡಿ

“ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ….”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ