Advertisement

Category: ಸಾಹಿತ್ಯ

ಜಿ.ಕೆ.ರವೀಂದ್ರಕುಮಾರ್ ಲಲಿತ ಪ್ರಬಂಧಗಳಿಗೆ ಅಬ್ದುಲ್ ರಶೀದ್ ಬರೆದ ಮುನ್ನುಡಿ

“ನಾವು ಯಾಕೆ ಕವಿಗಳೂ, ಬರಹಗಾರರೂ, ಗದ್ಯದವರೂ, ಪದ್ಯದವರೂ ನಾವಲ್ಲದ ಏನೋ ಒಂದನ್ನು ಮೈಮೇಲೆ ಸುಳ್ಳುಸುಳ್ಳೇ ಆವಾಹಿಸಿಕೊಂಡು ಇರುವ ಒಂದು ಆಯಸ್ಸನ್ನೆಲ್ಲ ಕಳೆದುಬಿಡುತ್ತೇವೆ? ಗಹನವಲ್ಲದ ತುಂಟತನ, ನಿತ್ಯ ಬದುಕಿನ ಪುಟ್ಟಪುಟ್ಟ ವಿವರಗಳನ್ನು ಕಂಡಲ್ಲೇ ಕ್ಯಾಮರಾದಂತೆ ಸೆರೆಹಿಡಿಯುವ ಕಥನಗಾರನ ಗುಣ, ಹಸಿವನ್ನೂ, ನೋವನ್ನೂ, ನಿರಾಶೆಯನ್ನೂ ಸಣ್ಣದೊಂದು ವಾಕ್ಯದಲ್ಲೇ ಸೂಚಿಸಿಬಿಡಬಲ್ಲ ಕ್ಲುಪ್ತತೆ…..”

Read More

ಓಬೀರಾಯನ ಕಾಲದ ಕತೆಗಳು: ಪೇಜಾವರ ಸದಾಶಿವರಾವ್ ಬರೆದ ಕತೆ “ಬಿರುಸು”

“ಇಂದಿನ ಅವನ ವರ್ತನೆಯನ್ನು ನೋಡಿದೊಡನೆಯೇ ನಾಗಣ್ಣನು ಏನೋ ಕಿತಾಪತಿಗೆ ಹೊರಟಿದ್ದಾನೆಂದು ಅವರಿಗೆ ದೃಢವಾಯಿತು. ಅಂತೂ ಗುಪ್ತ ಪೋಲೀಸನೊಬ್ಬನು ದೂರದಿಂದ ಅವನನ್ನು ಅನುಸರಿಸತೊಡಗಿದನು. ಇದನ್ನು ಕಂಡು ನಾಗಣ್ಣನು ಮನಸ್ಸಿನಲ್ಲೇ ನಕ್ಕು ನೆಟ್ಟಗೆ ಪಂಚಮಾಲಿಗೆ ಹೋಗಿ ಅಕ್ಕಿ ಧಾರಣೆ ಕೇಳಿದ; ಸರಾಫಕಟ್ಟೆಗೆ ನಡೆದು ಪವನಿಗೆ ಕ್ರಯ ಮಾಡಿದ”

Read More

ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯದ ತಾಜಾ ಕಸುವು

“ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ.”

Read More

ದಾರಿ ತಪ್ಪಿದ ಕನಸು: ಎಂ.ಜಿ. ಶುಭಮಂಗಳ ಅನುವಾದಿಸಿದ ವೇಂಪಲ್ಲಿ ಷರೀಫ್ ಬರೆದ ತೆಲುಗು ಕತೆ

“ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು.”

Read More

ವಿದ್ಯಾಭೂಷಣರ “ನೆನಪೇ ಸಂಗೀತ”ದ ಕುರಿತು ಡಾ.ಜನಾರ್ದನ ಭಟ್ ಬರಹ

“ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು ದಾಖಲಿಸುವುದರ ಜತೆಗೆ ಅವರು ತಮ್ಮ ನಿರ್ಧಾರ ಮತ್ತು ನಡೆಗಳ ಬಗ್ಗೆ ಸ್ವವಿಮರ್ಶೆ ಮಾಡುತ್ತಾರೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ