Advertisement

Category: ದಿನದ ಅಗ್ರ ಬರಹ

ಮರದ ನೆರಳಿನಲ್ಲಿ…

ಮನೆಯ ಎದುರಿಗೆ ರಸ್ತೆಯ ಪಕ್ಕದಲ್ಲಿ ಜೀರಕನ ಮರ ಹಣ್ಣು ಬಿಟ್ಟಾಗ ನಮಗೆ ಆ ಮರದ ಆಕರ್ಷಣೆ.. ಹೊಂಬಣ್ಣದ ಜೀರ್ಕ ಹಣ್ಣುಗಳನ್ನು ದೋಟಿಗೆ ಎಟುಕಿಸಿ ಉದುರಿಸಿ ಹಿರಿಯರ ಕಣ್ಣು ತಪ್ಪಿಸಿ ಅಡಿಕೆ ಚಪ್ಪರದ ಮೇಲೆ ತೆಗೆದುಕೊಂಡು ಹೋಗಿ ಇಟ್ಟು.. ಅಡಿಗೆ ಮನೆಯಿಂದ ಉಪ್ಪು ಬಾಳೆಲೆ, ಬೆಲ್ಲ ಇನ್ನೊಬ್ಬರು ತರುವುದು. ಜೀರಿಗೆ ಮೆಣಸು ಮತ್ತೊಬ್ಬರು.. ಹಣ್ಣಿನ ತೊಳೆ ಬಿಡಿಸಿ ಬಾಳೆ ಎಲೆ ಮೇಲೆ ಉಪ್ಪು, ಮೆಣಸು ಬೆಲ್ಲ ಹಾಕಿ ಕಲೆಸಿ ಮತ್ತೆ ಚಿಕ್ಕ ಬಾಳೆ ಎಲೆ ತುಂಡಿನ ಮೇಲೆ ಎಲ್ಲರಿಗೂ ಹಂಚಿ ಆ ಕಟುವಾದ ಹುಳಿ, ಸಿಹಿ, ಖಾರದ ರುಚಿಯನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದೆವು..
ಡಾ. ಎಲ್.ಸಿ. ಸುಮಿತ್ರಾ ಬರೆದ ಪ್ರಬಂಧ

Read More

ಕಣ್ಮರೆಯಾಗುತ್ತಿರುವ ದೇಸೀ ಕಥನ, ಕಸುಬು ಹಾಗೂ ಅವುಗಳು ಪೊರೆದ ನುಡಿಸಂಪತ್ತು

ಒಂದು ದಿನ ಸಂಜೆ ಬುಡುಗೊಚ್ಚ ಕೊಪ್ಪಲಿನ ಮೆದೆಯಲ್ಲಿ ಹುಲ್ಲು ಹಿರಿಯುತ್ತಿದ್ದನಂತೆ. ಆಗ ಆಕಾಶದ ಕಡೆಯಿಂದ ಬೆಳ್ಳನೆಯ ಬೆಳಕೊಂದು ಇಳುಕಂಡು ಬಂದು ಅವನೆದುರಿನ ಬೇಲಿಯನ್ನು ಹೊಕ್ಕಿತ್ತಂತೆ. ಕಣ್ಮುಚ್ಚಿ ಬಿಡುವುದರೊಳಗೆ ಆ ಬೆಳಕು ಬೇಲಿಯನ್ನೆಲ್ಲಾ ಆವರಿಸಿಕೊಂಡು ಆ ಇಡೀ ಬೇಲಿಯನ್ನು ಬೆಳಗಿಸತೊಡಗಿತ್ತಂತೆ. ಗಾಬರಿಗೊಂಡ ಬುಡುಗೊಚ್ಚ ಹುಲ್ಲು ಹಿರಿಯುವುದನ್ನು ಬಿಟ್ಟು ಬೇಲಿಯನ್ನೇ ದಿಟ್ಟಿಸತೊಡಗಿದ್ದನಂತೆ.
ಎಸ್. ಗಂಗಾಧರಯ್ಯ ಬರೆದ ‘ಮಣ್ಣಿನ ಮುಚ್ಚಳ’ ಹೊಸ ಕಥಾ ಸಂಕಲನಕ್ಕೆ ಬರೆದುಕೊಂಡಿರುವ ಮಾತುಗಳು

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ

ಚಿಕ್ಕವನಿದ್ದಾಗ ತನ್ನನ್ನು ಎಲ್ಲರೂ ಅದೆಷ್ಟು ಕಾಳಜಿಯಿಂದ ಮಾತನಾಡಿಸುತ್ತಿದ್ದರೆಂದರೆ, ಗೆಳೆಯರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು. ಶಾಲೆಗೆ ಹೋಗಿ ಬರುವಾಗ ‘ಮಾಳಿಗಿ ಶಂಕರಪ್ಪನಂತ ಗಟ್ಟಿ ಕುಳ ತನ್ನ ಕರೆದು ಮಾತಾಡದಂದ್ರ ಹುಡುಗಾಟ್ಕೀನ?’ ಅಂದುಕೊಳ್ಳುತ್ತಿದ್ದ. ಬೇರೆಯವರು ನಕ್ಕೊಂಡೇ ಕೇಳುತ್ತಿದ್ದರು “ಏನ್ಲೇ ಶಿದ್ಲಿಂಗ, ನಿಮ್ಮ ಶಂಕರಪ್ಪ ಏನಂದ?” ತಮ್ಮತಮ್ಮಲ್ಲೇ ಕಣ್ಣು ಮಿಟುಕಿಸುತ್ತಿದ್ದರು. “ನೀ ಹಾಕ್ಕೊಂಡ ಅಂಗಿ ಸರಿಯಾಗೇತೇನ್ಲೆ? ಚೊಣ್ಣ ಬರೋಬರಿ ಆಗೇತಿಲ್ಲ? ನಿಮ್ಮವ್ವ ಮನ್ಯಾಗ ಇದ್ಲೇನು?”
‘ನಾನು ಮೆಚ್ಚಿನ ನನ್ನ ಕತೆ’ಯ ಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ ‘ಪಿರಾಮಿಡ್ಡಿನಿಂದೆದ್ದು ಬಂದವನು’

Read More

ಹೊಸಕಾವ್ಯದ ಗುರು ಗೋಪಾಲಕೃಷ್ಣ ಅಡಿಗ

1955 ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದಲ್ಲಿ ಗುರುಸಮಾನರಾಗಿ ಸ್ವೀಕರಿಸಲ್ಪಟ್ಟರು. ಹೊಸ ಪೀಳಿಗೆಯ ಸಾಹಿತಿಗಳು ಅವರ ಪ್ರಭಾವಕ್ಕೆ ಒಳಗಾದರು. ಅಡಿಗರ ಕಾವ್ಯವನ್ನು ಗಮನಿಸುವಾಗ ಅವರು ನವೋದಯ, ಪ್ರಗತಿಶೀಲ ಮತ್ತು ನವ್ಯ – ಈ ಮೂರೂ ಮಾರ್ಗಗಳಿಗೆ ಸೇರುವ ಕವಿತೆಗಳನ್ನು ಬರೆದು ಬೆಳೆದವರು ಎನ್ನುವುದು ತಿಳಿಯುತ್ತದೆ. ತಮ್ಮ ಹಿಂದಿನ ಕಾವ್ಯಮಾರ್ಗಗಳನ್ನು ಅರೆದು ಕುಡಿದವರಾದ ಕಾರಣ ಅಡಿಗರು ಅವುಗಳ ಮಿತಿಯನ್ನು ಹೇಳಿದಾಗ ಅದಕ್ಕೊಂದು ಅಧಿಕೃತತೆ ಪ್ರಾಪ್ತವಾಯಿತು ಮತ್ತು ಕವಿಗಳು ಅವರನ್ನು ಅನುಸರಿಸಿದರು. ಕರಾವಳಿಯ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ. ಜನಾರ್ದನ ಭಟ್ ಹೊಸಕಾವ್ಯದ ಗುರು ಮೊಗೇರಿ ಗೋಪಾಲಕೃಷ್ಣ ಅಡಿಗರ ಕುರಿತು ಬರೆದಿದ್ದಾರೆ.

Read More

ಜಂತೆಯಲ್ಲಿದ್ದ ಕೈಚೀಲದಲ್ಲಿ ಪೋಲಿ ಪುಸ್ತಕಗಳು

ಪಿಯುಸಿ ಓದಲು ತುಮಕೂರಿಗೆ ಹೊರಟಾಗ ಹಲವು ಬದಲಾವಣೆಗಳಾದವು.  ಹೈಸ್ಕೂಲ್ ಹಾಸ್ಟೆಲ್‌ವರೆಗೆ ಕಡ್ಡಾಯವಾಗಿದ್ದ ‘ಟ್ರಂಕು ತಟ್ಟೆ’ ಜಾಗದಲ್ಲಿ ಈಗ ಸೂಟ್‌ಕೇಸ್ ಬಂತು. ಆ ವರ್ಷದ ಮಾವಿನ ಮರದ ಫಸಲಿನಲ್ಲಿ ಅಪ್ಪ ಮೊದಲ ಬಾರಿಗೆ ಕಾಲೇಜಿಗೆ ಹೋಗುವ ಮಗ ಎಂದು ಎರಡು ಜೊತೆ ಹೊಸ ಬಟ್ಟೆ ಕೊಡಿಸಿತು. ಕಾಲೇಜು ಪ್ರವೇಶ ಮಾಡಿದ್ದಕ್ಕೆ ಪ್ರಮೋಷನ್ ಎಂಬಂತೆ ಮೊದಲ ಬಾರಿಗೆ ಚಿ.ನಾ.ಹಳ್ಳಿಯ ಗೋಪಾಲ ಶೆಟ್ಟಿ ಅಂಗಡಿಗೆ ಕರೆದೊಯ್ದು ಎರಡೆರಡು ಡ್ರಾಯರ್, ಬನಿಯನ್ ಕೊಡಿಸಿತು. ಅವೆಲ್ಲವನ್ನು ಹೊಸ ಸೂಟ್ ಕೇಸ್‌ಗೆ ತುಂಬಿ ಜೋಪಾನ ಎಂದು ಹೇಳಿ ಅಪ್ಪ ಅಮ್ಮ ನನ್ನನ್ನ ಬೀಳ್ಕೊಟ್ಟರು. 
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹದಿಮೂರನೆಯ ಕಂತು.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ