Advertisement

Category: ದಿನದ ಅಗ್ರ ಬರಹ

ಪರದೇಶಿ ಕನ್ನಡಿಗರು, ಸ್ಥಳೀಯ ಕನ್ನಡ ಸಂಘಗಳ ಜುಗಲ್ ಬಂದಿ

ವಾಟ್ಸಾಪಿನ ಗುಂಪಿನಲ್ಲಿ ಒಬ್ಬರು ಬೆಂಗಳೂರಿನ ಅತ್ಯಾಧುನಿಕ ತಿಂಡಿಊಟಗಳ ಕೆಫೆ, ಹೋಟೆಲ್‌ಗಳ ಫೋಟೋಗಳನ್ನು ಹಂಚಿದ್ದರು. ಅವುಗಳಲ್ಲಿದ್ದ ಖಾದ್ಯಗಳ ಚಿತ್ರಗಳನ್ನು ನೋಡಿ ನನಗೆ ‘ಮಾಯಾ ಬಜಾರ್’ ಚಿಲನಚಿತ್ರದ ‘ವಿವಾಹ ಭೋಜನಂ’ ಹಾಡಿನ ನೆನಪು ಬಂತು. ಗುಂಪಿನ ಕೆಲ ಸದಸ್ಯರಿಗೆ ತಮ್ಮ ತವರಿನ ನೆನಪು ನುಗ್ಗಿ ಬಂದು ಅಲ್ಲಿಗೆ ಹೋಗಲಾರದ ಸ್ಥಿತಿಯಲ್ಲಿದ್ದೀವಲ್ಲಾ, ತಮ್ಮವರನ್ನು ನೋಡಿ ಮನೆಯೂಟ ಮಾಡಲಾರದ ಈ ಪರಿಸ್ಥಿತಿ ಯಾಕಾದರೂ ಬಂತೊ ಅಯ್ಯೋ, ಎನ್ನುವ ದುಃಖವಾಯ್ತು.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಕ್ಲಬ್ ಹೌಸ್ ಮಾತುಕಥೆಯಲ್ಲಿ ಕಂಡ ನಟರ ಎರಡು ಬಗೆ…

ಹೊಸತರಲ್ಲಿ ಎಲ್ಲ ಚೆಂದವೇ. ಒಂದು ವಾರ ಕಳೆಯುವಷ್ಟರಲ್ಲಿ ಈ ಕೇಳ್ಮೆ ಕೂಡ ಯಾಕೊ ಮನೊಟನಸ್ ಆಗುತ್ತಿದೆ ಅನಿಸಿತು. ಕೇಳ್ಮೆಯ ಮೂಲಕ ವಿಚಾರ ಕ್ರೋಢೀಕರಣ ಸರಿ. ಓದುವ ತ್ರಾಸಿಗಿಂತ ಕೇಳ್ಮೆ ಸುಲಭ. ಇದೂ ಸರಿ. ಆದರೆ ಕೇಳಿಸಿಕೊಂಡದ್ದನ್ನು ಒಂದು ಕಡೆ ಅಕ್ಷರ ಮತ್ತು ಪದಗಳಲ್ಲಿ ಕ್ರಮಬದ್ಧವಾಗಿ ದಾಖಲಿಸಬೇಕಾಗುವಾಗ ವಾಕ್ಯರಚನೆ ಬಿಗಿಬಂಧದಲ್ಲಿ ರೂಪುತಳೆಯಬೇಕಾದರೆ ಓದಿನ ಸಂಗ ಅಗತ್ಯ ಬೇಕು ಎಂಬ ಅರಿವು ಜಾಗೃತವಾಯಿತು.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಧಾರವಾಡದಲ್ಲಿ ಅನುರಣಿಸಿದ ‘ಮಂದ್ರ ಮಧ್ಯಮ’

ರಹಿಮತ್ ಖಾನರ ಗೆಳೆಯರ ಬಳಗ ದೊಡ್ಡದಿತ್ತು. ಸವಾಯಿ ಗಂಧರ್ವ ಮತ್ತು ಕಿರಾನಾ ಘರಾನಾ ಸ್ಥಾಪಕ ಅಬ್ದುಲ್ ಕರೀಂ ಖಾನ್ ಸಾಹಬ್ ಈ ಸಾಲಿನಲ್ಲಿ ಪ್ರಮುಖರು. ಈ ಮೂವರು ಸೇರಿದ ಜಾಗದಲ್ಲಿ ಸಂಗೀತದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸವಾಯಿ ಗಂಧರ್ವರ ಕುಂದಗೋಳದ ‘ವಾಡ’ದಲ್ಲಿ ಈ ತ್ರಿಮೂರ್ತಿಗಳು ಅಪರೂಪಕ್ಕೊಮ್ಮೆ ಸೇರುತ್ತಿದ್ದರು. ಮದ್ಯಪಾನವೂ ಜೋರಾಗಿಯೇ ಇತ್ತು. ಕುಂದಗೋಳದ ಪಾನಗೋಷ್ಠಿಯಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳು ಆಗಿನ ಕಲಾವಿದರ ಪ್ರತಿಭೆಗೂ ಸಾಕ್ಷಿಯಾಗಿದ್ದವು.. ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ.

Read More

ಅಣಬೆ ಬೆಳೆಗೆ ಕೈ ಹಾಕಿದ ನಮ್ಮೂರ ಹುಡುಗರ ಕಥೆ

ಆತ್ಮಾರಾಮನ ಸಹಾಯದಿಂದ ರಾಮಣ್ಣನ ಮನೆಯ ಹಿಂಭಾಗದ ಕೋಣೆಯನ್ನು ಬಾಡಿಗೆ ಹಿಡಿದು ಅಲ್ಲಿ ಅಣಬೆ ಕೃಷಿಗೆ ಓನಾಮ ಹಾಡಲಾಯಿತು. ಅದು ಬಿಟ್ಟರೆ ಅನ್ಯಮಾರ್ಗವಿಲ್ಲದೆ ಪಕ್ಕದ ಬೀದಿಯ ಆಫೀಸರನ ಮನೆಗೆ ಹೋಗಬೇಕಾಗಿತ್ತು. ಆದರೆ ಅಲ್ಲಿ ಅವನ ಹೆಂಡತಿಯ ಕಾಟ ಎಂಬುದು ಇವರ ದರ್ದು! ಅಂತೂ ಒಂದು ಶುಭದಿನ ಒಣಹುಲ್ಲಿನ ರಾಶಿ ಬಂದು ಬಿದ್ದು ಅಣಬೆ ಬೆಳೆಗೆ ನಾಂದಿಯಾಯಿತು. ಕೋಣೆಯ ಒಳಗೆ ಒಂದಷ್ಟು ಕಬ್ಬಿಣದ ರ‌್ಯಾಕ್‌ಗಳು ಬಂದವು.
ಮಧುರಾಣಿ ಬರೆಯುವ “ಮಠದ ಕೇರಿ” ಕಥಾನಕ

Read More

ವ್ಯಕ್ತಿಗಳ ತಲ್ಲಣಗಳ ಮೂಲಕ ರಾಜಕೀಯ ಸಾಮಾಜಿಕ ಪ್ರಶ್ನೆಗಳನ್ನು ಕೇಳುವ ಇಷಿಗುರೊ: ಎಸ್. ಸಿರಾಜ್ ಅಹಮದ್ ಅಂಕಣ

“ಸ್ಟೀವನ್ಸ್ ತನ್ನ ವೃತ್ತಿಯ ಹುಸಿ ಘನತೆ ಮತ್ತು ಹೊಣೆಗಾರಿಕೆಗಳಲ್ಲಿ ಅವನ ಒಳ ಬದುಕು ಎಷ್ಟು ಮುರುಟಿಹೋಗಿದೆ ಎಂದರೆ ಅವನು ಅಪರೂಪಕ್ಕೆ ಎಂಬಂತೆ ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು ತನ್ನ ವೃತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲೀಷನ್ನು ಸರಿಪಡಿಸಿಕೊಳ್ಳಲು ಮಾತ್ರ! ಸ್ಟೀವನ್ಸ್ ಏನು ಓದುತ್ತಾನೆ, ಅವನ ಕತ್ತಲಗೂಡಿನಂತಹ ಕೋಣೆಯಲ್ಲಿ ಯಾಕೆ ಒಂದು ಹೂಗುಚ್ಛವನ್ನೂ ಇಡಲು ಜಾಗವಿಲ್ಲ ಎಂದೆಲ್ಲ ಯೋಚಿಸುತ್ತ, ಅವನ ಅಂತರಂಗವನ್ನು ತಡವಿ, ಒಳಗನ್ನು ಅರಿತುಕೊಳ್ಳುವ ಆಸೆಯಿಂದ ಹೊರಡುವ ಮಿಸ್ ಕೆಂಟನ್‍ ಗೆ ಅಲ್ಲಿ ಕಾಣುವುದು ಇಂಥ ಒಣ ಶಿಷ್ಟಾಚಾರ, ವೃತ್ತಿಯ ಬಗೆಗಿನ ಕುರುಡು ನಿಷ್ಠೆ. ಮಾತ್ರ.”
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ