Advertisement

Category: ದಿನದ ಅಗ್ರ ಬರಹ

ಹೂವಿನ ಹಡಗಲಿಯ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಗದಗದಿಂದ ಹೊರಟು ಹೂವಿನ ಹಡಗಲಿಯನ್ನು ತಲುಪಿದ ನಮ್ಮನ್ನು ಮಿತ್ರ ಪಂಪಾಪತಿರಾಯರು ದೊಡ್ಡ ಅಂಗಳವಿದ್ದ ಮನೆಯೊಂದಕ್ಕೆ ಕರೆದೊಯ್ದರು. ವಾಸ್ತವವಾಗಿ, ಅದು ವಾಸದ ಮನೆಯಾಗಿರದೆ, ಹೊಯ್ಸಳ ಕಾಲದ ದೇವಶಿಲ್ಪಗಳನ್ನು ಇರಿಸಿದ ಗುಡಿಯೆಂದು ತಿಳಿದಾಗ ಅಚ್ಚರಿಯಾಯಿತು. ಯೋಗಮಾಧವನ ಭವ್ಯವಾದ ಶಿಲ್ಪವೊಂದನ್ನು ಇಲ್ಲಿನ ಕೋಷ್ಠವೊಂದರಲ್ಲಿ ಇರಿಸಿದೆ. ಆರಡಿ ಎತ್ತರದ ಈ ವಿಗ್ರಹವು ಹೊಯ್ಸಳ ಕಾಲದ ಅತಿ ಸುಂದರ ಮೂರ್ತಿಗಳಲ್ಲೊಂದೆಂಬುದರಲ್ಲಿ ಸಂಶಯವಿಲ್ಲ. ಚತುರ್ಭುಜ ವಿಷ್ಣು ಹಿಂದಿನ ಎರಡು ಕೈಗಳಲ್ಲಿ ಶಂಖಚಕ್ರಗಳನ್ನು ಧರಿಸಿದ್ದು ಮುಂದಿನ ಕೈಗಳಲ್ಲಿ ಯೋಗಮುದ್ರೆಯನ್ನು ಪ್ರದರ್ಶಿಸುತ್ತ ಕಣ್ಮುಚ್ಚಿ ಪದ್ಮಾಸನದಲ್ಲಿ ಕುಳಿತಿರುವ ಭಂಗಿ ಅನನ್ಯವಾಗಿದೆ.”
ಟಿ. ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತೈದನೆಯ ಕಂತು

Read More

ಕವಿತೆಯ ಕುರಿತು: ಕೆ. ವಿ. ತಿರುಮಲೇಶ್ ಬರೆದ ಲೇಖನ

“ಕವಿ ರಾಘವಾಂಕನು ಜನ್ನನ ನಿಕಟೋತ್ತರದಲ್ಲಿ ಬಂದವನು – ಹಳೆಗನ್ನಡದಿಂದ ನಡುಗನ್ನಡಕ್ಕೆ ಯುಗ ಬದಲಾದ ಕಾಲ ಅದು, ಅಂತೆಯೇ ಚಂಪೂವಿನಿಂದ ಷಟ್ಪದಿಗೆ. ನಡುಗನ್ನಡದಲ್ಲಿ ಷಟ್ಪದಿಯಲ್ಲಿ ಬರೆದ ಮೊದಲಿಗರಲ್ಲಿ ರಾಘವಾಂಕ ಪ್ರಮುಖನು. ಅವನು ಮೂರು ನಾಲ್ಕು ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಜನಪ್ರಿಯವಾದ್ದು ವಾರ್ಧಕ ಷಟ್ಪದಿಯಲ್ಲಿ…”

Read More

ಆತ್ಮಚರಿತ್ರೆ ಬರೆಯುವ ಅಗತ್ಯವೇನು?: ಡಾ. ಜ್ಯೋತಿ ಬರೆದ ಲೇಖನ

“ಓದುಗರ ದೃಷ್ಟಿಯಿಂದ ನೋಡಿದರೆ, ಸಾಮಾನ್ಯವಾಗಿ, ನಮ್ಮ ವೃತ್ತಿಯಲ್ಲಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಆತ್ಮಚರಿತ್ರೆ ಓದಲು ಆಸಕ್ತಿಯಿರುತ್ತದೆ. ಅವರ ಜೀವನ ವಿಧಾನ, ವಿಶಿಷ್ಟ ಮೈಲಿಗಲ್ಲುಗಳು ಅಥವಾ ಸಂಘರ್ಷಗಳನ್ನು ಆತ್ಮಚರಿತ್ರೆಯಲ್ಲಿ ಹುಡುಕಲು ಪ್ರಯತ್ನಿಸುತ್ತಾ, ಅದರಿಂದ ನಮಗೇನು ಹೊಸ ಅರಿವು, ಮಾರ್ಗದರ್ಶನ, ಅಥವಾ ಪ್ರೇರಣೆ ಸುಳಿವು ಸಿಗಬಹುದೆಂದು ಆಶಿಸುತ್ತೇವೆ.”

Read More

ಕನಕಗಿರಿಯ ಲಕ್ಷ್ಮೀನರಸಿಂಹ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹಂಪೆಯಲ್ಲಿ ಸುತ್ತಾಡಿ ಬಳಲಿದವನಿಗೆ ಕಾಲಿನ ಬೆಲೆ ಸಂಜೆಯ ಹೊತ್ತಿಗಾದರೂ ತಿಳಿದೇ ತಿಳಿಯುತ್ತದೆ. ಇನ್ನು ಕಣ್ಣಿದ್ದು ಕನಕಗಿರಿ ನೋಡಬೇಕಲ್ಲ! ಆ ಸ್ಥಳ ಎಲ್ಲಿದೆ ಎಂದು ವಿಚಾರಿಸುವಾಗ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಎಂಬ ಉತ್ತರ ದೊರಕಿತು. ಕನಕನೆಂಬ ಮುನಿ ದೀರ್ಘತಪಸ್ಸು ಮಾಡಿದ ಸ್ಥಳವಾದುದರಿಂದ ಕನಕಗಿರಿ ಎಂಬ ಹೆಸರು ಬಂದಿತಂತೆ. ಕ್ರಿ.ಶ. ಹತ್ತನೆಯ ಶತಮಾನದ ವೇಳೆಗೇ ಪುಣ್ಯಕ್ಷೇತ್ರವೆಂಬ ಕೀರ್ತಿಗೆ ಪಾತ್ರವಾಗಿದ್ದ ಈ ಪ್ರಾಂತ್ಯದಲ್ಲಿ ಈಗಲೂ ಅನೇಕ ಗುಡಿಗಳೂ ಕೊಳಗಳೂ ಇದ್ದು ಪುರಾತನ ವೈಭವವನ್ನು ನೆನಪಿಸುವಂತಿವೆ. ಇವೆಲ್ಲ ಗುಡಿಗಳಲ್ಲಿ ಲಕ್ಷ್ಮೀನರಸಿಂಹ ದೇವಾಲಯ ಪ್ರಮುಖ ಸ್ಥಾನ ಪಡೆಯುತ್ತದೆ.”
ಟಿ.ಎಸ್.ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹತ್ತೊಂಭತ್ತನೆಯ ಕಂತು

Read More

ಭಾಷಾಂತರ ಪ್ರಕ್ರಿಯೆ ಮತ್ತು ವಿಜಯರಾಘವನ್ ಅನುವಾದ ಕಾವ್ಯ

“ಕಾಶ್ಮೀರಿ ಶೈವಪಂಥದ ಮೊದಲ ಕವಯಿತ್ರಿ ಲಲ್ಲಾದೇವಿಯ ವಾಕ್ ಗಳು ಕೂಡ ಕನ್ನಡದಲ್ಲಿ ಒಂದು ವಿಶಿಷ್ಟ ಬಗೆಯ ಭಾಷಾಂತರ ಪ್ರಯೋಗ. ಲಲ್ಲಾದೇವಿ ಕನ್ನಡಕ್ಕೆ ತುಂಬಾ ತಡವಾಗಿ ಪರಿಚಯವಾಗುತ್ತಿದ್ದಾಳೆ. ಲಲ್ಲಾದೇವಿಯ ವಾಕ್ ಗಳಿಗೂ ಕನ್ನಡದಲ್ಲಿ ರಚನೆಯಾಗಿರುವ ಶರಣರ ವಚನಗಳಿಗೂ ಅನೇಕ ವಿಧದಲ್ಲಿ ಸಾಮ್ಯತೆಗಳಿವೆ.”
ನರಸಿಂಹಮೂರ್ತಿ ಹಳೇಹಟ್ಟಿ ಲೇಖನ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ