Advertisement

Category: ದಿನದ ಪುಸ್ತಕ

ದೊಡ್ಡವರಿಗೆ ಬುದ್ಧಿ ಹೇಳಬಲ್ಲ ಹಾರುವ ಕುದುರೆ

ಮಕ್ಕಳ ಮನೋಭಾವವನ್ನು ಗ್ರಹಿಸಿ ರಚಿಸಿರುವ ಈ ಸಂಕಲನದಲ್ಲಿ  ಸಾಮಾನ್ಯ ಕಥೆಗಳೂ ಇವೆ. ಜೊತೆಗೆ ಅಸಾಮಾನ್ಯ ಫ್ಯಾಂಟಸಿ ಕಥೆಗಳೂ ಇವೆ. ಕಲ್ಪನೆಯನ್ನು ಇಷ್ಟಪಡುವ ಮಕ್ಕಳಿಗೆ ಫ್ಯಾಂಟಸಿ ಇಷ್ಟವಾಗುತ್ತದೆ. ಅವರ  ಇಷ್ಟವನ್ನು ಗ್ರಹಿಸಿ , ಅವರು ಕಥೆಗಳನ್ನು ಪೋಣಿಸಿದ್ದಾರೆ. ಫ್ಯಾಂಟಸಿ ಕಥೆಗಳನ್ನು ಹೇಳಲು ಕಾಲ್ಪನಿಕ ಅಜ್ಜನೊಬ್ಬನನ್ನು ಸೃಷ್ಟಿಸಿಕೊಂಡಿದ್ದಾರೆ.   ನಾಗರಾಜ್ ಎಂ ಹುಡೇದ  ಬರೆದ ‘ಅವತಾರ್ ಮತ್ತು ಹಾರುವ ಕುದುರೆ’ ಕಥಾಸಂಕಲನದ ಕುರಿತು ಪ.ನಾ.ಹಳ್ಳಿ ಹರೀಶ್‍ ಕುಮಾರ್ ಅವರ ಅಭಿಪ್ರಾಯ  ಇಲ್ಲಿದೆ.

Read More

ಚಂದಿರನ ಕುವರಿಯರು ಕತೆಯೋದುವ ಮೊದಲು..

ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಕೃತಿಗಳೂ ಪರಸ್ಪರ ಅನುವಾದಗೊಂಡಿವೆ. ಸ್ವತಂತ್ರಕೃತಿಗಳಿಗೆ ಇರುವಷ್ಟೇ ಮರ್ಯಾದೆ ಅನುವಾದ ಕೃತಿಗಳಿಗೂ ಇದೆ. ವಿಶ್ವಸಂಸ್ಕೃತಿಯ ವಿಕಾಸದಲ್ಲಿ ಭಾಷಾಂತರವೂ ನಿರ್ಮಾತೃಶಕ್ತಿ ಆಗಿರುವುದರಿಂದ ಅದರ ಅಗತ್ಯ ನಮ್ಮೆಲ್ಲ ಭಾಷೆಗಳಿಗೂ ಇದೆ. ಈ ದಿಸೆಯಲ್ಲಿ ಆರ್ ವಿಜಯರಾಘವನ್ ಅವರ ‘ಚಂದಿರನ ಕುವರಿಯರು’ ಕಥಾಸಂಕಲನದ ಕಥೆಗಳು ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ. ಭಾಷೆ ಮತ್ತು ಸಂಸ್ಕೃತಿಗಳು ನಾಗರಿಕತೆಯ ಹೆಸರಿನಲ್ಲಿ ಜಾಗತೀಕರಣಕ್ಕೆ ಒಳಗಾಗಿರುವ ಈ ಸನ್ನಿವೇಶದಲ್ಲಿ ಅನುವಾದಗಳಿಗೆ ಮಡಿ-ಮೈಲಿಗೆಯ ಸೋಂಕು ಹತ್ತಿಸಬೇಕಿಲ್ಲ.
ಆರ್ ವಿಜಯರಾಘವನ್ ಅನುವಾದಿತ ಕತೆಗಳ ಸಂಕಲನ ‘ಚಂದಿರನ ಕುವರಿಯರು’ ಪುಸ್ತಕಕ್ಕೆ ಎನ್. ನರಹರಿ ಬರೆದ ಮುನ್ನುಡಿ

Read More

ಬದುಕೆಂಬ “ಕೆಂಡದ ರೊಟ್ಟಿ”ಯ ಕುರಿತು…

ಇಂಗ್ಲೆಂಡಿನಿಂದ ಬೆಂಗಳೂರಿಗೆ ಮಕ್ಕಳೊಂದಿಗೆ ಬಂದಿಳಿದ ರಮ್ಯಾಳ ಮೂಲಕ ಅನಾವರಣಗೊಳ್ಳುವ ಈ ಕಾದಂಬರಿ ಶೀರ್ಷಿಕೆಯನ್ವಯ ರೊಟ್ಟಿಯನ್ನು ಸುಡುವುದರೊಂದಿಗೆ ಮುಕ್ತಾಯವಾಗುತ್ತದೆ. ಕಾದಂಬರಿಯ ಶೀರ್ಷಿಕೆ ಭಿನ್ನವಾಗಿದೆಯಲ್ಲಾ ಎನ್ನುತ್ತಲೇ ಕೈಗೆತ್ತಿಕೊಂಡಾಗ ಕಾದಂಬರಿಯಲ್ಲಿ ಬೇರೆ ಬೇರೆ ವಸ್ತುಗಳಿರಬಹುದೇ? ಅಥವಾ ರಮ್ಯಾಳೊಬ್ಬಳ ಕಥಾನಕವೇ ಅನ್ನಿಸಿ ಕಾದಂಬರಿ ಓದುತ್ತಾ ಹೋದಂತೆ ಏಕಕಾಲಕ್ಕೆ ರಮ್ಯಾ ಜೊತೆಗೆ ಅವರಮ್ಮ ಸತ್ಯಳ ಕತೆಯಾಗಿರುವುದು ವಿಶೇಷ ಅನ್ನಿಸುತ್ತದೆ.
ಉಷಾ ನರಸಿಂಹನ್‌ ಅವರ ಕೆಂಡದ ರೊಟ್ಟಿ ಕಾದಂಬರಿಯ ಕುರಿತು ಸುಮಾವೀಣಾ ಬರಹ

Read More

ಇಲ್ಲಿಯದ್ದೇ ಸೊಗಡನ್ನು ಮುಡಿಗೇರಿಸಿಕೊಂಡ ಕವಿತೆಗಳು

ಈ ಪುಸ್ತಕದಲ್ಲಿರುವ ‘ಒಂದು ಪ್ರೇತ ಕಥೆ’  ಎಂಬ ಕವಿತೆಯಲ್ಲಿ ಕವಿಗಳು ಓದಬೇಕಾದುದನ್ನು ಸೂಚ್ಯವಾಗಿ, ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇಲ್ಲಿ ಎಲ್ಲ ಕವಿತೆಗಳು ತಮ್ಮ ತಮ್ಮ ವೈವಿಧ್ಯತೆಯಿಂದ ಮನಸೂರೆಗೊಳ್ಳುತ್ತವೆ ಯೋಚಿಸುವಂತೆ ಮಾಡುತ್ತವೆ ಖುಷಿಯನ್ನೂ ಕೊಡುತ್ತವೆ ಹಾಗೆ ಬರೆಯುತ್ತ ಹೋದರೆ ಎಲ್ಲ ಕವಿತೆಗಳ ಬಗೆಗೂ ಬರೆಯಬೇಕಾಗುತ್ತದೆ, ಯಾವುದನ್ನೂ ಬಿಡುವಂತೇಯೇ ಇಲ್ಲ.
ತೇರಳಿ. ಎನ್. ಶೇಖರ್ ಅವರು ಅನುವಾದಿಸಿದ ಮಲಯಾಳಂ ಕವಿ  ಸಚ್ಚಿದಾನಂದನ್ ಅವರ ‘ಮರೆತಿಟ್ಟ ವಸ್ತುಗಳು’ ಕವನ ಸಂಕಲನದ ಕುರಿತು ಎಚ್.ಎಸ್. ಮುಕ್ತಾಯಕ್ಕ ಬರಹ

Read More

ವಿಶಿಷ್ಟ ಅನುಭವಗಳ ಮೊತ್ತ ‘ಅಂಗೈ ಅಗಲದ ಆಕಾಶ’

ಇಂಥ ಸ್ಮೃತಿಚಿತ್ರಗಳಲ್ಲಿ ಸತ್ಯದ ಪರಿಧಿಯಿಂದ ಹೊರಹೋಗಲು ಸಾಧ್ಯವಿಲ್ಲ, ಅಂದರೆ ಶುದ್ಧ ನೆನಪುಗಳು ಯಾವಾಗಲೂ ವಾಸ್ತವದಲ್ಲಿ ಜೀವಿಸಿರುತ್ತವೆ ಹಾಗಾಗಿ ಬರೆಯುವಾಗ ನಿರೂಪಕಿಯೂ ವಾಸ್ತವದಲ್ಲೇ ಜೀವಿಸಿರಬೇಕಾಗುತ್ತದೆ, ಕಲ್ಪನೆ ಇಲ್ಲಿ ಕೆಲಸ ಮಾಡದು. ಆಗ ಎಲ್ಲ ಕೋನದಿಂದ ನಿಂತು ನೋಡುವ ಆಯಾಮಗಳು ಕಳೆದುಹೋಗುತ್ತವೆ. ಆದರೆ ಸುಮಿತ್ರಾ ಅವರು ಕೆಲವು ಘಟನೆಗಳನ್ನು ಇಂದಿನ ಸಂದರ್ಭದಲ್ಲಿಟ್ಟು ತೂಗಿ ನೋಡುತ್ತಾರೆ. ಹಾಗಾಗಿ ಸನ್ನಿವೇಶಗಳಿಗೊಂದು ಬೇರೆಯದೇ ಆದ ತೂಕ ಪ್ರಾಪ್ತವಾಗುತ್ತದೆ.
ಡಾ. ಎಲ್. ಸಿ. ಸುಮಿತ್ರಾ ಅವರ ಸ್ಮೃತಿ ಚಿತ್ರಗಳ ಸಂಕಲನ “ಅಂಗೈ ಅಗಲದ ಆಕಾಶ”ದ ಕುರಿತು ಲೇಖಕಿ ಸುನಂದಾ ಕಡಮೆ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ