Advertisement

Category: ದಿನದ ಪುಸ್ತಕ

ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಅಕಳಂಕ ಚರಿತ್ರೆ: ಸುಭದ್ರಾ ಹೆಗಡೆ ಬರಹ

ಕಾದಂಬರಿಯನ್ನು ಓದುತ್ತಾ ಹೋದಂತೆ ಶೌರ್ಯ, ಸಾಹಸಕ್ಕೆ ಹೆಸರಾಗಿ ನಿಂತ ವೀರವನಿತೆ ಜೀವ ತಳೆದು ನಮ್ಮೆದುರು ನಿಲ್ಲುವಂತೆ ರಾಣಿಯ ಪಾತ್ರವನ್ನು ಅಷ್ಟು ಸೂಕ್ಷ್ಮವಾಗಿ ಹೆಣೆಯಲಾಗಿದೆ. ಜೈನ ಧರ್ಮದವಳಾದ ರಾಣಿ ಸಾಳುವ ವಂಶದ ಕೊನೆಯ ಕುಡಿ, ಸರ್ವಧರ್ಮ ಸಮನ್ವಯವನ್ನು ಸಾರಿದವಳು. ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ, ಗುರುಗಳಾದ ಭಟ್ಟಾಕಳಂಕರು, ಪ್ರಧಾನಿಯಾದ ಸಭಾಹಿತರು, ಶಬಲೆ, ಜಿನದತ್ತ, ಸತ್ಯಾಶ್ರಯ ಇವರೆಲ್ಲರೂ ಕಳೆದುಹೋದ ಸಮೃದ್ಧವಾದ ಸಾಮ್ರಾಜ್ಯವೊಂದರ ಸಾಕ್ಷಿಯಾಗಿ ನಿಲ್ಲುತ್ತಾರೆ. ರಾಣಿಗೆ ಬೆಂಗಾವಲಾಗಿ ನಿಂತು ನಾಡ ಪ್ರೇಮವನ್ನು ತೋರಿಸುತ್ತಾರೆ.
ಗಜಾನನ ಶರ್ಮಾ ಬರೆದಿರುವ ಐತಿಹಾಸಿಕ ಕಾದಂಬರಿ ‘ಚೆನ್ನಭೈರಾದೇವಿʼ ಕುರಿತು ಸುಭದ್ರಾ ಹೆಗಡೆ ಬರಹ

Read More

ಅವ್ವಕ್ಕನೆಂಬ ಅಚ್ಚರಿ…: ಜ.ನಾ. ತೇಜಶ್ರೀ ಹೊಸ ಕಾದಂಬರಿಯ ಪುಟಗಳು

ಈಗ ಅವಳ ದೇಹ ಮೊದಲಿಗಿಂತ ಗಟ್ಟಿಯಾಗಿತ್ತು, ಸಲಾಕೆಯಂತೆ. ಮೇಲಿನ ಕೆಲಸಕ್ಕೆ ಕೆಲಸದವರಿದ್ದರೂ ಅವಳು ಮಾಮೂಲಿನಂತೆ ಎಲ್ಲ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡಿದಷ್ಟೂ ಅವಳಲ್ಲಿ ಕಸುವು, ತಾಳಿಕೊಂಡಷ್ಟೂ ಸುಂದರವಾಗಿ ಕಾಣುವುದನ್ನು ದೊಡ್ಡಯ್ಯ ವಿಸ್ಮಯದಲ್ಲಿ ನೋಡುತ್ತಿದ್ದ. ಮಂಜುನಾಥ ಮೂರು ತಿಂಗಳಿಗೆ ಮಗುಚಿದ, ಆಮೇಲೆ ಅಂಬೆಗಾಲಿಟ್ಟ. ಷಣ್ಮುಖ ಬೆಳೆದಿದ್ದನ್ನು ಹತ್ತಿರದಿಂದ ಗಮನಿಸದ ದೊಡ್ಡಯ್ಯನಿಗೆ ಮಂಜುನಾಥನನ್ನು ನೋಡುವಾಗ ಎಲ್ಲ ಹೊಸದೆನಿಸುತ್ತಿತ್ತು. ತಾನೂ ಮಗುವಾಗಿದ್ದಾಗ ಹೀಗೇ ಮಾಡಿದೆನ ಅಂತ ಯೋಚಿಸುತ್ತಿದ್ದ.
ಜ.ನಾ. ತೇಜಶ್ರೀ ಹೊಸ ಕಾದಂಬರಿ “ಜೀವರತಿ” ಕೃತಿಯ ಪುಟಗಳು ನಿಮ್ಮ ಓದಿಗೆ

Read More

ವೈಜ್ಞಾನಿಕ ಕೌತುಕದ ಬೆರಗನ್ನು ಎಚ್ಚರಿಸುವ “ವಿಲಕ್ಷಣ ಜಲಜಾಲ”: ನಾರಾಯಣ ಯಾಜಿ

ನೀರೆನ್ನುವ ಅಪೂರ್ವ ವಸ್ತು ಈ ಪ್ರಕೃತಿಯಲ್ಲಿ ಸೃಷ್ಟಿಯ ಕಾಲದಿಂದಲೂ ಇದೆ. ಮುಂದೆಯೂ ಇರಲಿದೆ. ಆದರೆ ಅದರಗುಣಮಟ್ಟವನ್ನು ಕಾಪಾಡಿ ಬದುಕುವುದು ಮತ್ತು ಭುವಿಯ ಮೇಲಿನ ಜೀವ ಸಂಕುಲನವನ್ನು ಡೈನೋಸಾರಸ್‌ಗಳಂತೆ ನಾಶವಾಗಿ ಹೋಗದಂತೆ ಮಾಡುವಲ್ಲಿ ಮಾನವರ ಪಾತ್ರದ ಕುರಿತು ಅವರು ಈ ಕೃತಿಯ ಮೂಲಕ ಗಮನ ಸೆಳೆಯುತ್ತಾರೆ. ಕೃತಿಯೊಂದು ಜನರನ್ನು ತಲುಪಲು ಭಾಷೆ ಮತ್ತು ಶೈಲಿ ಬಲು ಮುಖ್ಯ. ಈ ಎರಡರಲ್ಲಿಯೂ ಸಾಗರ್ ಅವರದು ಎತ್ತಿದ ಕೈ.
ಡಾ. ಡಿ. ಎಂ. ಸಾಗರ್ ಬರೆದ “ವಿಲಕ್ಷಣ ಜಲಜಾಲ” ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಅನುಭವಗಳನ್ನು ಮರಳಿ ಬಾಳಿಸುವ ಕಥೆಗಳು: ಎಡೆಯೂರು ಪಲ್ಲವಿ ಕಥೆಗಳಿಗೆ ವಿನಯಾ ಒಕ್ಕುಂದ ಮುನ್ನುಡಿ

ನಾಗರಿಕ ಸೌಜನ್ಯಕ್ಕಾಗಿ ಬಲು ಬೆಲೆ ತೆರಬೇಕಾದ ಆಧುನಿಕ ಬದುಕಿನ ಪಂಚಾಂಗ ಇಲ್ಲಿದೆ. ಹಾಗಿದ್ದರೆ, ಆಧುನಿಕತೆಯು ಹಳೆಯ ವರ್ಗೀಕೃತ ತಪ್ಪುಗಳನ್ನು ಮೀರಿಸಿಕೊಂಡಿದೆಯೇ? ಸಾಮಾಜಿಕ ಸಾಂಕ್ರಾಮಿಕಗಳಾಗಿದ್ದ ಜಾತಿ, ಧರ್ಮ, ವರ್ಗ, ಲಿಂಗಗಳೀಗ ಇಲ್ಲವಾಗಿವೆಯೇ? ಖಂಡಿತ ಇಲ್ಲ. ಈಗಲೂ ಈ ಎಲ್ಲ ತರತಮಗಳು ಹಾಗೆಯೇ ಮುನ್ನಡೆಯುತ್ತಿವೆ. ರೂಪಾಂತರಗೊಂಡು ವಿವರಣೆಗೆ ನಿಲುಕದಷ್ಟು ಸಂಕೀರ್ಣ ಸ್ಥಿತಿಯನ್ನು ಪಡೆದಿವೆ. ಪ್ರೀತಿಯ ರಾಜಕಾರಣದಿಂದ ಮತ್ತೆ ಬಲವರ್ಧನೆಗೊಳ್ಳುತ್ತಿವೆ. ಯಾಜಮಾನ್ಯವು ಯಾಜಮಾನ್ಯವೇ ಆಗಿ ಮುನ್ನಡೆಯುತ್ತಿದೆ.
ಎಡೆಯೂರು ಪಲ್ಲವಿ ಕಥಾ ಸಂಕಲನ “ಕುಂಡದ ಬೇರು” ಕೃತಿಗೆ ವಿನಯಾ ಒಕ್ಕುಂದ ಮುನ್ನುಡಿ

Read More

ದೇಸೀಧ್ವನಿಯ ಕಥೆಗಳು: ಪ್ರಕಾಶ್‌ ಪುಟ್ಟಪ್ಪ ಕಥಾಸಂಕಲನಕ್ಕೆ ಡಾ. ಮಹೇಶ್ವರಿ ಯು. ಮುನ್ನುಡಿ

ಕತೆಗಾರಿಕೆಯ ಕೌಶಲವನ್ನು, ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಇನ್ನಷ್ಟು ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು. ಆ ಘಮಲನ್ನೂ ಕ್ರೂರ ವಾಸ್ತವವನ್ನೂ ಜೊತೆಜೊತೆಯಾಗಿ ಕಟ್ಟಿಕೊಡುವ ‘ಕಂಡಾಯದೊಡೆಯ ಉಘೇಉಘೇ, ಐರನ್ ಆನೆಗಳು, ನಿಗಿನಿಗಿಕೆಂಡ ಮುಂತಾದ ಕತೆಗಳಲ್ಲದೆ ಭಿನ್ನಮಾದರಿಯ ಕತೆಗಳೂ ಈ ಸಂಗ್ರಹದಲ್ಲಿವೆ.. ಸಂಕಲನದ ಅತ್ಯುತ್ತಮ ಕತೆಗಳಲ್ಲಿ ಆ ಸತ್ವವೇ ಮೈದುಂಬಿದೆ.
ಪ್ರಕಾಶ್‌ ಪುಟ್ಟಪ್ಪ ಕಥಾಸಂಕಲನ ‘ಗಾಂಧಿಜೋಡಿನ ಮಳಿಗೆ’ಗೆ ಡಾ. ಮಹೇಶ್ವರಿ ಯು. ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ