Advertisement

Category: ಸರಣಿ

ಹಣಕ್ಕಾಗಿ ಕಡಿದುಹೋದ ಅನುಬಂಧ: ಮಾರುತಿ ಗೋಪಿಕುಂಟೆ ಸರಣಿ

ಮಾವನ ಎಲ್ಲಾ ಕೆಲಸಗಳಲ್ಲಿಯೂ ಅಪ್ಪ ಮುಂದಿರುತ್ತಿದ್ದ. ಕೊನೆಗೊಂದು ದಿನ ಮದುವೆಯ ಹೆಣ್ಣು ಗೊತ್ತಾಗಿ ಮದುವೆಯೂ ನಡೆದು ಹೋಯಿತು. ಮದುವೆಯಲ್ಲಿಯಂತೂ ಅಪ್ಪ ನಿರಂತರವಾಗಿ ಓಡಾಡಿದ್ದ. ತನ್ನ ಕೆಲಸಗಳನ್ನೆಲ್ಲ ಬದಿಗೊತ್ತಿ ಮುಂದೆ ನಿಂತು ಮದುವೆ ಮಾಡಿದ್ದ. ನಾವಿನ್ನೂ ಚಿಕ್ಕ ಹುಡುಗರಾದ್ದರಿಂದ ಮದುವೆಯಲ್ಲಿ ನಮ್ಮನ್ನು ಜೊತೆಗಿರಿಸಿಕೊಂಡೆ ಫೋಟೊ ತೆಗಿಸಿಕೊಂಡಿದ್ದ ನಮ್ಮಾವನಿಗೆ ನಮ್ಮ ಮೇಲೆ ಬಹಳ ಅಕ್ಕರೆ ಇದೆ ಎಂದುಕೊಂಡೆವು. ದೊಡ್ಡವರಾದ ಮೇಲೆಯೆ ನಮಗೂ ತಿಳಿದದ್ದು, ನಡತೆಗು ಮನಸ್ಸಿನ ಭಾವನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆಯೆಂದು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಮರೆತುಹೋಗುತ್ತಿದ್ದೆ ಬಿಲ್ಲು ಪಾವತಿಸಲು!: ಎಚ್. ಗೋಪಾಲಕೃಷ್ಣ ಸರಣಿ

ಮದುವೆ ಆದ ಮೇಲೆ ನನ್ನಾಕೆಗೆ ಈ ಕೇಸರಿಬಾತ್ ಕತೆ ಹೇಳಿದ್ದೆ. ನಂತರ ನಾನೂ ಅವಳೂ ಬೆಳಿಗ್ಗೆ, ನನಗೆ ಸೆಕೆಂಡ್ ಶಿಫ್ಟ್ ಇದ್ದಾಗ ಕೇಸರಿ ಭಾತ್‌ಗೆ ಲಗ್ಗೆ ಹಾಕ್ತಾ ಇದ್ದೆವು. ಆಗ ತಿಂದ ಡಬರಿ ಗಟ್ಟಲೆ ಕೆಸರಿಭಾತಿನ ರುಚಿ ನನಗೆ ಈಗಲೂ ಬಾಯಿ ಸಮುದ್ರ ಮಾಡುತ್ತೆ. ಸಣ್ಣ ವಯಸ್ಸು, ಕಲ್ಲು ತಿಂದು ಅರಗಿಸಿಕೊಳ್ಳುವ ಯೌವ್ವನ ಹಾಗೂ ಸಕ್ಕರೆ ಖಾಯಿಲೆ ಅಂಟುವ ವಯಸ್ಸಲ್ಲ, ಅದರಿಂದ ಅದೆಷ್ಟೋ ಕ್ವಿಂಟಾಲ್ ಕೇಸರಿಬಾತ್‌ಗೆ ಮುಕ್ತಿ ಕಾಣಿಸಿದ್ದೆವು. ಇದು ಸುಮಾರು 83ನೇ ಇಸವಿಯವರೆಗೆ ಅನೂಚಾನವಾಗಿ ನಡೆದುಕೊಂಡು ಬಂತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ನೀನೆ ಭುವನಕ್ಕಾರಾಧ್ಯನೈ… ಚೂತರಾಜಾ: ಚಂದ್ರಮತಿ ಸೋಂದಾ ಸರಣಿ

ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ನಾಲ್ಕನೆ ಕಂತು

Read More

ಲೇಬರ್‌ ಕ್ಯಾಂಪಿನಲ್ಲಿ ಹುಟ್ಟಿದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಅವರ ದೇಶದ ಮೇಲಿನ ಪ್ರೀತಿ ಅವರಲ್ಲಿ ಆಳವಾಗಿ ಬೇರೂರಿತ್ತಾದರೂ, ಅದು ಡಾಂಭಿಕತೆಯ ಪ್ರೀತಿ ಅಥವಾ ವಾಗಾಡಂಬರವಾಗಿರಲಿಲ್ಲ; ಬದಲಿಗೆ ಶಾಂತತೆಯಿಂದ ಕೂಡಿತ್ತು ಹಾಗೂ ವೈಯಕ್ತಿಕವಾಗಿತ್ತು. ಅವರ ಲೇಬರ್ ಕ್ಯಾಂಪಿನ ನಂತರದ ಕವಿತೆಗಳಲ್ಲಿ ಮೂಲಭೂತ ಮಾನವ ಸ್ಥಿತಿ ಮತ್ತದರ ಅಮಿತ ಕಷ್ಟಗಳು ಪ್ರಧಾನ ವಿಷಯಗಳಾಗಿವೆ. ಪ್ರಕೃತಿವಸ್ತುಗಳಿಂದ ತುಂಬಿದ ಸಾಂಕೇತಿಕತೆಯನ್ನು ತೋರಿಸುತ್ತಾ ಅವರು ತನ್ನ ಪ್ರೀತಿಯ ಪರಿಸರವನ್ನು, ದೇಶ, ಮತ್ತು ಅದರ ಜನರನ್ನು ಮೀರಿ ನಿಂತು ಸಾರ್ವತ್ರಿಕ ಕವಿಯಾಗುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಬರವಣಿಗೆಯ ಶಿಸ್ತನ್ನು ಕಲಿಸಿದ ಸಿಸ್ಟರ್ ಲಾರೆನ್ಸಿಯಾ: ಸುಮಾವೀಣಾ ಸರಣಿ

ಸಿಸ್ಟರ್ ಲಾರೆನ್ಸಿಯ ಅವರಿಗೆ ಗಾರ್ಡೆನಿಂಗ್ ಅಂದರೂ ಇವರಿಗೆ ಬಹಳ ಇಷ್ಟವಿತ್ತು. ನಮ್ಮ ತರಗತಿಯ ಮುಂದೆ ಇದ್ದ ಹೂತೋಟದಲ್ಲಿ ಚಂದದ ಗಿಡಗಳನ್ನು ಬೆಳೆಸಿದ್ದರು. ಅದರಲ್ಲಿ ದಾಳಿಂಬೆ ಬಣ್ಣದ ಪಾಪಿ ಹೂಗಳು ಅರಳುತ್ತಿದ್ದುದನ್ನು ಅದರ ನಯವಾದ ಎಸಳುಗಳನ್ನು ಇವತ್ತಿಗೂ ಮರೆಯಲಾಗುತ್ತಿಲ್ಲ. ತಮ್ಮ ತಲೆಯ ವಸ್ತ್ರವನ್ನು ಸರಿ ಮಾಡಿಕೊಂಡು ಬಗ್ಗಿ ಕೆಲಸ ಮಾಡುತ್ತಿದ್ದರು. “ಮುಂದೆ ಮಿಡ್ಲ್ ಸ್ಕೂಲಿಗೆ ಹೋಗುತ್ತೀರ ಚಂದ ಕಲಿತು ಹೋಗಬೇಕು” ಎಂದು ಪದೇ ಪದೇ ಹೇಳುತ್ತಿದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ನಾಲ್ಕನೆಯ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ