Advertisement

Category: ವಾರದ ಕಥೆ

ಸ. ಹರೀಶ್‌ ಬರೆದ ಈ ಭಾನುವಾರದ ಕತೆ

ಎಲ್ಲವನ್ನು ಕೇಳಿಸಿಕೊಂಡಿದ್ದ ಅವಿನಾಶ್ ಡಾಕ್ಟರಿಗೆ ಕೈ ಮುಗಿದ. ಅಲ್ಲಿ ಮಾಧವಿಗೆ ಮನಸ್ಸು ತೀರಾ ತಲ್ಲಣಿಸಿ ಹೋಯಿತು. ಯಾವಾಗ ಕೇರ್ ಟೇಕರ್ ತನ್ನ ಸುತ್ತಾಟ ಮುಗಿಸಿ ಮನೆ ಒಳಗೆ ಕಾಲಿಟ್ಟಳೊ, ಅವಳಿಗೆ ಮನುಷ್ಯರ ಬಗ್ಗೆ ನಂಬಿಕೆಯೇ ಹೊರಟು ಹೋಯಿತು. ಅವಳ ಮುಖದ ಮೇಲೆ ದುಡ್ಡು ಬಿಸಾಕಿ, `ಮುಖ ತೋರಿಸಬೇಡ, ನಿನಗೆ ಪೊಲೀಸಿಗೆ ಕೊಡದೇ ಬಿಟ್ಟಿದ್ದೀನಿ, ಗೆಟ್ ಲಾಸ್ಟ್’ ಅಂತ ನರನಾಡಿ ಕಿತ್ತುಬರುವಂತೆ ಅರಚಿದಳು.
ಸ. ಹರೀಶ್‌ ಕಥಾ ಸಂಕಲನ “ಅಮ್ಮ ಅಂದ್ರೆ ಭೂಮಿ”ಯ ಶೀರ್ಷಿಕೆ ಕತೆ, ನಿಮ್ಮ ಈ ಭಾನುವಾರದ ಓದಿಗೆ

Read More

ಆಶಾ ರಘು ಬರೆದ ಈ ಭಾನುವಾರದ ಕತೆ “ನೇಪಥ್ಯ”

ನಾನು ಬಣ್ಣ ಹಚ್ತಾ, ಮೊಳೆ ಹೊಡೀತಾ, ಲೈಟು ಕಟ್ತಾ ಬೆಳೆಯತೊಡಗಿದೆ. ಹರಿದ ಒಳ ಅಂಗಿಯ ಮೇಲೆ ರಾಜಕುಮಾರನ ಗರಿಗರಿ ಉಡುಪು..! ತಲ್ಲಣಗಳಲ್ಲಿ ಕುಸಿಯುವ ಮನಸ್ಸನ್ನು ಮೀರಿ ಹೊರಗೆ ಹಾಸ್ಯೋತ್ಸಾಹದ ಸಂಭಾಷಣೆಗಳ ಹೊನಲು..! ಒಮ್ಮೊಮ್ಮೆ ಇದು ತಿರುಗುಮುರುಗೂ ಆಗುವುದುಂಟು..! ನಾಟಕವಲ್ಲವೇ..!? ಎಷ್ಟೋ ಬಾರಿ ನಾನು ವಾಸ್ತವ ಸಂಗತಿಗಳಿಗೆ ಪ್ರತಿಕ್ರಿಯಿಸಿದರೆ, ಅದು ದಿಟವಾ ಅಥವಾ ನಾಟಕ ಆಡುತ್ತಿದ್ದೇನೆಯಾ ಅಂತ ನನಗೇ ಗುಮಾನಿ ಅನ್ನಿಸುವಷ್ಟು ಅಭಿನಯ ಕಲೆ ನನಗೆ ಒಲಿಯಿತು. ನಡೆಯುತ್ತಿದ್ದವನಿಗೆ ಸೈಕಲ್ ಬಂತು.
ಆಶಾ ರಘು ಬರೆದ “ಕೆಂಪು ದಾಸವಾಳ” ಕಥಾ ಸಂಕಲನದ ಕತೆ “ನೇಪಥ್ಯ” ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವೈದೇಹಿ ಬರೆದ ಕತೆ

ಯಾಕೋ ನನಗೆ ಕೋರ್ಟುಮನೆ ಅಲೆದೇ ಸೋತು ಕುಸಿದುಹೋಗಿದ್ದ ಅಪ್ಪನ ಹೋರಾಟದ ಬಗ್ಗೆ ಹೇಳಲೇಬೇಕೆನಿಸಿತು. ಆಸ್ತಿಗಾಗಿ ಕುಟುಂಬದಲ್ಲೇ ಒಂದು ಆತ್ಮಹತ್ಯೆ ಆಯಿತು, ಒಂದು ಕೊಲೆ ಆಯಿತು, ಇದೆಲ್ಲ ನಮ್ಮ ಮಟ್ಟಿಗೆ ಎಂಥ ದೊಡ್ಡದು ಯೋಚಿಸಿ. ಅಪ್ಪ ಕಡೆಕಡೆಗೆ ತಮ್ಮದೇ ಕುಟುಂಬದೊಂದಿಗೆ ಕೋರ್ಟುಕಚೇರಿ ವ್ಯಾಜ್ಯ ಯಾಕಾದರೂ ಬೇಕಿತ್ತು ಅಂತ ಕೊರಗುತಿದ್ದರು ಅಷ್ಟಿಷ್ಟಲ್ಲ. ಹಾಗೆಂದು ‘ಜಗಳ ಬೇಡ, ಎಲ್ಲ ನಿಮಗೇ, ತಕೊಳ್ಳಿ’ ಅಂತ ಬಿಟ್ಟುಕೊಟ್ಟರೇನು? ಇಲ್ಲವಲ್ಲ. ಅದು ಸಾಧ್ಯವೂ ಇಲ್ಲ. ‘ಒಂದು ರೀತಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆಯಂತೆ ನಾವೆಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯ ಕೊನೆಯ ಕಂತಿನಲ್ಲಿ ವೈದೇಹಿ ಬರೆದ ಕತೆ “ಅಮುದ ಹೇಳಿದ ಕತೆ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ “ಟಿಕ್ ಟಿಕ್ ಟಿಕ್ ಟಿಕ್ ಕೈಕೊಟ್ಟ ಗಡಿಯಾರ”

Read More

ಆನಂದ ಈ. ಕುಂಚನೂರ ಬರೆದ ಈ ಭಾನುವಾರದ ಕತೆ

ನಿದ್ರೆಯಿಲ್ಲದೆ ಬಳಲಿಕೆಯಲ್ಲಿ ಅಸಾಧ್ಯ ಆಕಳಿಕೆ ಬರುತ್ತಿದ್ದರೂ ಕಣ್ರೆಪ್ಪೆ ಒಂದನ್ನೊಂದು ತಾಕುತ್ತಿರಲಿಲ್ಲ. ಯಾವಾಗಲೂ ನುಂಗುವ ನಿದ್ದೆ ಗುಳಿಗೆ ಕೂಡ ಈಗೀಗ ಕೆಲಸ ಮಾಡುತ್ತಿಲ್ಲ. ಹೀಗೆ ಎಲ್ಲ ಅಸಂಖ್ಯ ಕಾರ್ಮೋಡಗಳ ಮಧ್ಯೆ ಬೆಳ್ಳಿರೇಖೆಯೊಂದು ಮಿಂಚಿದಂತಾಗಿ ಗೆಲುವಾದರು. ತಮಗೆ ಹೊಳೆದ ವಿಚಾರಕ್ಕೆ ಖುಷಿಯಾಯಿತು.
ಆನಂದ ಈ. ಕುಂಚನೂರ ಹೊಸ ಕಥಾ ಸಂಕಲನ “ನಿರೂಪ”ದ ಒಂದು ಕತೆ “ನಕ್ಷತ್ರ ದಾನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ