Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ

ಇದೇ ಗುಣವಿಶೇಷಣಗಳೂ ಹಾಗೂ ಅವನ ಅಯಸ್ಕಾಂತದಂತಹ ನಗುವೆ ಸಿಂಧೂಳನ್ನು ಅವನಿಗೆ ಕಚ್ಚಿಕೊಳ್ಳುವಂತೆ ಮಾಡಿದ್ದು. ಮ್ಯಾಗ್ನೆಟ್ಟಿನ ಎರಡು ಧ್ರುವಗಳು ಪರಸ್ಪರ ಆಕರ್ಷಣೆ, ವಿಕರ್ಷಣೆಗೊಳ್ಳುವಂತೆ ಒಮ್ಮೆ ಅವನಿಂದ ವಿಮುಖಗೊಂಡರೆ ಮತ್ತೊಮ್ಮೆ ಅವನನ್ನರಸಿ ಸೆಳೆತ ತೀವ್ರವಾಗಿ ಬಳಿಗೋಡುತ್ತಿದ್ದಳು. ಅವನಿಗೂ ಸಿಂಧುವಿನ ಅಗತ್ಯವಿಲ್ಲವೇನಂತಿಲ್ಲ. ಭೌತಿಕ ಅಗತ್ಯಗಳ ಜೊತೆಗೆ ಮಾನಸಿಕವಾಗಿಯೂ ಸಾಥಿಯವಳು. ಅವರಿಬ್ಬರಿಗೂ ತಮ್ಮ ಬೌದ್ಧಿಕ ಮಟ್ಟಕ್ಕೆ ಸಾಟಿಯಾಗುವಂತಹ ಗೆಳೆಯರು ಇಂತಹ ಊರಿನಲ್ಲೆಲ್ಲಿ ಸಿಗಬೇಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ

Read More

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಮಯ ಮುಂದುವರಿಯಲಾಗಲಿಲ್ಲ ಅಕರಿಗೆ. ಭಾವನೆಯ ನಿರಂತರತೆಗೆ ಒಗ್ಗಿಹೋಗಿದ್ದ ಅವಳಿಗೆ ಭಾವನೆಗಳನ್ನು ತುಂಡುತುಂಡಾಗಿಸಿ ಜೋಡಿಸಿಕೊಳ್ಳುವ ಬಗೆ ಅರ್ಥವಾಗುತ್ತಲೇ ಇರಲಿಲ್ಲ. ಪಾತ್ರವೇ ತಾನಾಗಿ, ಪರಕಾಯಪ್ರವೇಶ ಮಾಡಿ, ಅಭಿನಯಿಸುತ್ತಿದ್ದ ಅವಳಿಗೆ ಬಿಡಿ ಬಿಡಿ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವುದು ಇಷ್ಟವಾಗುತ್ತಿರಲಿಲ್ಲ. ಸಿನಿಮಾ ಶೂಟಿಂಗ್ ಅಸಹನೀಯ ಎನಿಸತೊಡಗಿತ್ತು. ಸಂಪಾದನೆಯೇನೋ ಆಗುತ್ತಿತ್ತು. ಆದರೆ ಕೆಲಸದಿಂದ ದೊರೆಯುವ ಆನಂದ ಕಳೆದುಹೋಗಿತ್ತು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಕರುಳಬಳ್ಳಿ ಬಾಡಿಗೆಗಿದೆ!”

Read More

ಮಂಜುನಾಯಕ ಚಳ್ಳೂರು ಬರೆದ ಕತೆ “ಫೂ….”

ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು.
ಮಂಜುನಾಯಕ ಚಳ್ಳೂರು ಅವರ “ಫೂ..” ಕಥಾಸಂಕಲನದ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ

ಇವಾ ಹಿಂಗ್ಯಾಕ ಇದ್ದಾನ? ನನ್ನ ನೋಡಿದ್ರ ನಗೋದಿಲ್ಲಾ ಮಾತಾಡೊದಿಲ್ಲಾ? ಅವ್ವನೂ ಯಾವಾಗ್ಲೂ ಹಿಂಗs ಇರತಾಳ…. ಬ್ಯಾಂಕಿನಿಂದ ಬಂದಾಕಿನs ಮಲಗಿ ಬಿಡತಾಳ…. ನಾ ಯಾರ ಕೂಡ ಮಾತಾಡಬೇಕು?…. ಮುಂಜಾನಿಂದ ಊಟಿಲ್ಲಾ…. ಹಂಗs ಕೂತಾಳ; ಅಪ್ಪಾ ತಾ ಮಾತ್ರ ಹೊರಗ ಊಟಾ ಮಾಡಿ ಬರತಾನ, ಆಕೀಗೆ ಊಟಾ ಮಾಡು ಅಂತ ಸುದ್ದಾ ಹೇಳೋದಿಲ್ಲಾ…. ಛೇ ಎಂಥಾ ಅಪ್ಪಾ ಇವಾ….?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ “ನಾ ಯಾಕ ಹುಟ್ಟಿದೆನೋ…… ?” ನಿಮ್ಮ ಓದಿಗೆ

Read More

ರವಿಶಂಕರ್ ಎಸ್‌.ಎಲ್.‌ ಬರೆದ ಈ ಭಾನುವಾರದ ಕಥೆ

ಮನೆಯಕಡೆಯಿಂದ ಜಾನಕಿ ನರಳುವ ಸಣ್ಣಸದ್ದು ಕೇಳತೊಡಗಿತು. ಜಾನಕಿಗೆ ಒಂಭತ್ತು ತಿಂಗಳುಗಳು ತುಂಬಿದ್ದರಿಂದ ಹೆರಿಗೆನೋವು ಶುರುವಾಗಿತ್ತು. ಶಿವಮ್ಮ ಸಾಕಷ್ಟು ಹೆರಿಗೆಗಳನ್ನು ಮಾಡಿಸಿದ್ದರಿಂದ, ಯಾರ ಸಹಾಯವೂ ಬಯಸದೆ, ಒಬ್ಬಂಟಿಯಾಗೇ ಹೆರಿಗೆಮಾಡಿಸುವ ಅನುಭವ ಪಡೆದಿದ್ದಳು. ಹೆರಿಗೆನೋವಿನ ನರಳುವಿಕೆಯ ಕೂಗು ಹೆಚ್ಚಾಗುತ್ತಿದ್ದಂತೆಯೇ, ಸಂಗಣ್ಣ ತಾನು ಇಳಿದು ಹೋಗಲೆ. ಬೇಡವೇ? ಎಂಬ ಯೋಚನೆಗೆಬಿದ್ದ.
ರವಿಶಂಕರ್ ಎಸ್‌.ಎಲ್.‌ ಬರೆದ ಈ ಭಾನುವಾರದ ಕಥೆ “ಹಬ್ಬ” ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ