Advertisement

Category: ದಿನದ ಅಗ್ರ ಬರಹ

ಕಳೆದುಕೊಂಡವರ ನೆನಪಿನಲ್ಲಿ…

ಕರ್ಫ್ಯೂ ಆಗಿ ಅಂಚೆ ವ್ಯವಸ್ಥೆ ನಿಂತು ಹೋಗಿತ್ತು. ಒಂದು ಮುಖ್ಯವಾದ ಪಾರ್ಸೆಲ್ ಅಂಚೆ ಇಲಾಖೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಊರಿನಲ್ಲಿರುವ ಹೈಸ್ಕೂಲ್ ಗೆಳೆಯ ಆನಂದನಿಗೆ ಫೋನ್ ಮಾಡಿದ್ದೆ. ಅವರ ತಂದೆ ಊರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು. ‘ಏನಾದರೂ ಮಾಡಕ್ಕಾಗತ್ತಾ?’ ಕೇಳಿದ್ದೆ. ಆಗ ಚೆನ್ನಾಗೆ ಮಾತಾಡಿದ್ದ. ಅದಾಗಿ ಒಂದು ವಾರಕ್ಕೆ ಫೇಸಬುಕ್ಕಲ್ಲಿ ‘ರೆಸ್ಟ್ ಇನ್ ಪೀಸ್ ಆನಂದ್’ ಎಂದು ಸುದ್ದಿ ಬಂತು. ಕೋವಿಡ್ ಇಷ್ಟು ಹತ್ತಿರಕ್ಕೆ ಬಂತು. ಒಂದು ಸಾಂಕ್ರಾಮಿಕ ರೋಗ ಎಲ್ಲವನ್ನೂ ಹೀಗೆ ಕಸವನ್ನು ಬುಟ್ಟಿಯಲ್ಲಿ ಹಾಕಿ ಹೊತ್ತೊಯ್ಯುವಂತೆ ಮನುಷ್ಯರನ್ನು ಹೊತ್ತೊಯ್ಯಲು ಆರಂಭಿಸಿತ್ತು. ವ್ಯಾಪಾರವೇ ಇಲ್ಲದೆ ಜನ ಊಟಕ್ಕಾಗಿ ಪರದಾಡಿದ್ದರು.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

Read More

ಜ್ಞಾನಜ್ಯೋತಿಯಲಿ ಜಗವ ಬೆಳಗಿದನೀತ

ಹೊಸ ಬದುಕಿನ ಹುಡುಕಾಟದಲ್ಲಿ ಲಂಡನ್ ಗೆ ಬಂದಮೇಲೆ, ಹಿಂದಿನ ಸೈದ್ಧಾಂತಿಕ ಅನ್ವೇಷಕ ವೃತ್ತಿಗಿಂತ ಸಂಪೂರ್ಣ ಭಿನ್ನವಾದ ವೃತ್ತಿ ಆರಂಭಿಸುವ ಅವಕಾಶ ಸಿಕ್ಕಿತು, “ರಾಯಲ್ ಮಿಂಟ್” ಎನ್ನುವ ಸರಕಾರಿ ಸ್ವಾಮ್ಯದ ನಾಣ್ಯ ತಯಾರಿ ಕಂಪೆನಿಯ ಉದ್ಯೋಗಿಯಾಗಿ. ಕ್ರಿಸ್ತಶಕ 886ರಲ್ಲಿ ಪ್ರಾರಂಭಗೊಂಡು ದೀರ್ಘ ಇತಿಹಾಸ ಇರುವ ಮಿಂಟ್ ಕಂಪೆನಿಯ ಮಾತ್ರವಲ್ಲದೇ ಬ್ರಿಟನ್ನಿನ ಆರ್ಥಿಕ ಸ್ಥಿತಿಯೂ ಆ ಸಮಯದಲ್ಲಿ ಹದಗೆಟ್ಟಿತ್ತು. ಕಳ್ಳನಾಣ್ಯಗಳು ಎಲ್ಲೆಲ್ಲೂ ಚಲಾವಣೆಯಲ್ಲಿದ್ದವು. ಬಳಕೆಯಲ್ಲಿದ್ದ ನಾಣ್ಯಗಳಲ್ಲಿ ಐದರಲ್ಲಿ ಒಂದು ನಕಲಿ ಆಗಿರುತ್ತಿತ್ತು. ಮಿಂಟ್ ನ ಮೇಲ್ವಿಚಾರಕನಾಗಿ ಖೋಟಾ ಹಣದ ಜಾಲವನ್ನು ನ್ಯೂಟನ್ ಸಮರ್ಥವಾಗಿ ಪ್ರತಿಬಂಧಿಸಿದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಸರ್‌ ಐಸಾಕ್‌ ನ್ಯೂಟನ್‌ರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ನೇಪಥ್ಯದಲ್ಲಿ ಹಾದು ಹೋಗುವ ಆಲೋಚನೆಗಳು

ಆಕೆ ಈ ಹಿಂದೆ ನಮ್ಮ ತಂಡದಲ್ಲಿ ನಟಿಸಿದ್ದ ನಟಿ. ಆಕೆಗೆ ಮೊದಲು ತುಂಬ ನೀಳ ಮತ್ತು ದೃಢವಾದ ಕಾಯ ಇತ್ತು. ನಡುಮಧ್ಯೆ ಕೆಲವು ಷೋಗಳಿಗೆ ಆಕೆ ಗೈರು. ಯಾಕೆ ಎಂದು ವಿಚಾರಿಸಿದಾಗ ಆಕೆ ತಣ್ಣನೆಯ ದನಿಯಲ್ಲಿ ‘ ಸರ್ ನನಗೆ ಕ್ಯಾನ್ಸರ್ ಆಗಿದೆ..ಟ್ರೀಟ್ಮೆಂಟ್ ತಗೋತಿದ್ದೀನಿ.. ಸೊ ಬರಲಿಕ್ಕೆ ಆಗ್ತಿಲ್ಲ..’. ಅಂದರು. ಆ ಹೊತ್ತು ಅದು ನನ್ನಲ್ಲಿ ಗಾಬರಿ ಹುಟ್ಟಿಸಿದ ಉತ್ತರವಾಗಿತ್ತು. ನನ್ನ ದನಿಯಲ್ಲಿದ್ದ ಗಾಬರಿ ಗುರುತಿಸಿ ಆಕೆ ಮತ್ತೆ ‘ ಸರ್ ಅಷ್ಟು ಸೀರಿಯಸ್ ಏನಿಲ್ಲ’ ಎಂದರು. ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್‍ ಬರಹ  ಇಂದಿನ  ಓದಿಗಾಗಿ.

Read More

ಭಾರತ್ ಬ್ಲೇಡಿನ ಲಕ್ಷೆ ಮತ್ತು ಮನೆಕನ್ನದ ಕತೆಗಳು

ಮಹಿಳೆಯರು ಗಂಟಿಚೋರ್ ಸಮುದಾಯದ ಎಲ್ಲಾ ಸಂಗತಿಗಳಲ್ಲಿಯೂ ಪಾಲುದಾರರಾಗಿದ್ದರು. ತುಡುಗುತನದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಕುತೂಹಲಕಾರಿಯಾಗಿದೆ. ಗುಂಪಾಗಿ ತುಡುಗು ಮಾಡುವುದಕ್ಕಿಂತ ಒಂಟಿಯಾಗಿ ತುಡುಗು ಮಾಡುವ ಪ್ರಮಾಣ ಹೆಚ್ಚಾಗಿತ್ತು. ಹಾಗಾಗಿ ಗಂಟಿಚೋರರ ತುಡುಗುತನದ ಪ್ರವೃತ್ತಿಯಲ್ಲಿ ಮಹಿಳೆಯರ ಪಾಲುದಾರಿಕೆ ವಿಶೇಷವಾಗಿದೆ. ಇವರಲ್ಲಿಯೂ ಪ್ರಾದೇಶಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಮಹಿಳೆಯರೂ ಇದ್ದಾರೆ. ‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಅರುಣ್ ಜೋಳದ ಕೂಡ್ಲಿಗಿ ಬರೆದ ಬರಹ ಇಲ್ಲಿದೆ. 

Read More

ಓದುವ ಖುಷಿಗೆ ಪ್ರೇರಣೆ ನೀಡುವ ಹೊಸ ಪರಿಮಳ

ಓದುವುದನ್ನು ಇಷ್ಟಪಡುವವರಿಗೆ ಲೇಖ ಮಲ್ಲಿಕಾ ಪುಸ್ತಕ ಇಷ್ಟವಾಗಬಹುದು. ತಮ್ಮ ದೀರ್ಘವಾದ ಓದಿನ ಅನುಭವ ಸಾರವನ್ನು ಭಟ್ಟಿಇಳಿಸಿ, ಲೇಖಕಿ ಸುಮಾ ವೀಣಾ ಅವರು ಈ ಕೃತಿಯನ್ನು ರಚಿಸಿದ್ದಾರೆ. ಸಾಹಿತ್ಯ ಲೋಕದ ಕೈಪಿಡಿಯಂತಿರುವ ಪುಸ್ತಕದಲ್ಲಿ, ಉಲ್ಲೇಖವಾಗಿರುವ ಪುಸ್ತಕಗಳೂ ಮಹತ್ವದ್ದಾಗಿವೆ. ತಮ್ಮ ಅಧ್ಯಯನಶೀಲತೆ, ಸಂಶೋಧನೆ, ಸಾಹಿತ್ಯಾಸಕ್ತಿ, ತೌಲನಿಕ ಮೀಮಾಂಸೆಯನ್ನೊಳಗೊಂಡಂತೆ ಅವರು ರೂಪಿಸಿದ ಈ ಪುಸ್ತಕವು ಸಂಗ್ರಾಹ್ಯವಾದುದು. ಲೇಖ ಮಲ್ಲಿಕಾ ಸಾಹಿತ್ಯ ಕೃತಿಯ ಕುರಿತ ವಿಶ್ಲೇಷಣಾ ಬರಹವೊಂದನ್ನು ಬರೆದಿದ್ದಾರೆ ಡಿ.ಯಶೋದಾ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ