Advertisement

Category: ಸರಣಿ

ಉಲ್ಟಾಪಲ್ಟಾ ಆದ ನನ್ನ ಪ್ಲಾನು! : ಎಚ್. ಗೋಪಾಲಕೃಷ್ಣ ಸರಣಿ

ಅವರು ಎಲೆಕ್ಟ್ರಿಕ್ ಕಾಂಟ್ರಾಕ್ಟ್ ಮಾಡ್ತಾ ಇದ್ದರು, ಪಾರ್ಟ್ ಟೈಮ್ ಆಗಿ. ನೀನೂ ಇದನ್ನೇ ಮಾಡು, ದುಡ್ಡು ಚೆನ್ನಾಗಿ ಸಿಗುತ್ತೆ, ಹೇಗಿದ್ದರೂ ನಿಮ್ಮದು ಹೊಸಾ ಏರಿಯ, ಬೇಕಾದಷ್ಟು ಜನ ಮನೆ ಕಟ್ಟುತ್ತಾರೆ, ನೀನೇ ಕಾಂಟ್ರಾಕ್ಟ್ ಮಾಡಬಹುದು ಅಂತ ಹುರಿದುಂಬಿಸಿ ಏಣಿ ಹತ್ತಿಸಿದ್ದ. ಪಾರ್ಟ್ ಟೈಮ್ ಕೆಲಸ, ಅದೂ ಚೆನ್ನಾಗಿ ದುಡ್ಡು ಮಾಡಬಹುದು ಅನ್ನುವ ಹಾಗಿದ್ದರೆ ಒಂದು ಕೈ ನೋಡೇ ಬಿಡೋಣ ಅನ್ನುವ ಉತ್ಸಾಹ ತುಂಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಮಳೆ ಜಿನುಗಿಗೆ ಅರಳುವ ಜೀವನಪ್ರೀತಿ: ಭವ್ಯ ಟಿ.ಎಸ್. ಸರಣಿ

ಮಳೆಗಾಲ ಮಲೆನಾಡಿನ ವಸುಂಧರೆಯನ್ನು ಸಿಂಗರಿಸಿದೆ. ಮಂಜು ಆವರಿಸಿದ ಬೆಟ್ಟ ಗುಡ್ಡಗಳು, ಮಳೆಯಲ್ಲಿ ಮಾತ್ರ ಗೋಚರಿಸುವ ಸೀತಾಳೆಯಂತಹ ವನಸುಮಗಳು, ಬಗೆಬಗೆಯ ಅಣಬೆಗಳು, ದಾರಿಯುದ್ದಕ್ಕೂ ಮನಸೆಳೆಯುವ ಸಣ್ಣ ಸಣ್ಣ ಜಲಪಾತಗಳು, ತುಂಬಿ ಹರಿಯುವ ನದಿ ತೊರೆಗಳು ಮಲೆನಾಡನ್ನು ಭೂ ಲೋಕ ಸ್ವರ್ಗವಾಗಿಸಿವೆ. ದೂರದೂರುಗಳಿಂದ ಪ್ರವಾಸಿಗರು ಮಳೆಗಾಲದಲ್ಲಿ ಮಲೆನಾಡಿನ ದೃಶ್ಯ ವೈಭವ ಸವಿಯಲು ಬರುತ್ತಿದ್ದಾರೆ. ಅನೇಕ ರೆಸಾರ್ಟ್‌ಗಳು, ಹೋಂ ಸ್ಟೇಗಳು ತಲೆಎತ್ತಿವೆ. ಮಲೆನಾಡು ತನ್ನ ಮೊದಲ ನೀರವ, ನಿರ್ಜನ ಭವ್ಯತೆಯನ್ನು ಕಳೆದುಕೊಳ್ಳುವ ಭೀತಿಯೂ ಇದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಗಯಾನಾ ದೇಶದ ಕವಿ ಮಾರ್ಟಿನ್ ಕಾರ್ಟರ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಕಾರ್ಟರ್ ತನ್ನ ಕವಿತೆಗಳಲ್ಲಿ, ಸರಳವಾದ, ಸ್ಪಷ್ಟವಾದ ಶೈಲಿಯನ್ನು ಇಷ್ಟಪಡುತ್ತಾರೆ. ದೀರ್ಘವಾದ ಸಂಕೀರ್ಣ ಕವಿತೆಗಳಿಗಿಂತ ಸರಳವಾದ ಕವಿತೆಗಳನ್ನು ಬರೆಯುವುದು ಹೆಚ್ಚು ಕಷ್ಟ ಎಂದು ಅವರ ಅಭಿಪ್ರಾಯ. ಸರಿಯಾಗಿರುವುದು ಮುಖ್ಯ. “ಇದು ಇದಕ್ಕೆ ಸರಿ ಅಥವಾ ಅದಕ್ಕೆ ಸರಿ ಎಂಬ ಪ್ರಶ್ನೆಯಲ್ಲ, ಅದು ಸರಿಯಾಗಿದೆ ಅಂತ ಅನಿಸಬೇಕು, ಅಷ್ಟೆ. ಕೆಲವೊಮ್ಮೆ ನಿಮಗೆ ಕವಿತೆಗಳ ಪುಸ್ತಕವೊಂದು ಸಿಗುತ್ತದೆ, ಅದರಲ್ಲಿ ಒಂದು ಕವಿತೆಯು ಕವಿ ಹೇಳುತ್ತಿರುವ ವಿಷಯಕ್ಕೆ ಸಂಪೂರ್ಣವಾಗಿ ಸರಿಯಾಗಿರಬಹುದು…
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಗಯಾನಾ (Guyana) ದೇಶದ ಖ್ಯಾತ ಕವಿ ಮಾರ್ಟಿನ್ ಕಾರ್ಟರ್-ರವರ (Martin Carter, 1927-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ನನ್ನ ಪುಟ್ಟ ಶಾಲೆ: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮ ಗುರ್ಜಿ ಎಲ್ಲರ ಕೈ ಮೇಲೆ ಕಿತ್ತಳೆ ತೊಳೆ ಆಕಾರದ ಪೆಪ್ಪರಮಿಠಾಯಿ ಇಡುತ್ತಿದ್ದಂತೇ, ಅದು ಬುಳಕ್ಕನೆ ಬಾಯಿಗಿಳಿದು ಬಿಡುತ್ತಿತ್ತು. ನಾವೆಲ್ಲ ಅದನ್ನು ಕಡಿಯದೇ ದವಡೆಯಲ್ಲಿ ಅದುಮಿಟ್ಟುಕೊಂಡು ಮೆಲ್ಲಗೆ ರಸ ಹೀರಿ, ಹೀರಿ ಚಪ್ಪರಿಸುತ್ತಿದ್ದೆವು. ಅದು ಖಾಲಿಯಾಗುವ ತನಕ ಮಾತು ಕತೆ ಎಲ್ಲ ಬಂದ್… ನಮ್ಮಿಡೀ ದಿನದ ಸಂಭ್ರಮ, ಸಂತೋಷ ಆ ಪುಟ್ಟ ಮಿಠಾಯಿಗೋಸ್ಕರವೇ ಇರುತ್ತಿತ್ತೊ ಗೊತ್ತಿಲ್ಲ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಗೌರವ ಹೆಚ್ಚಿಸುವ ಬಟ್ಟೆ; ಚೆನ್ನಾಗಿಲ್ಲದಿರೆ ಆಗಬಹುದು ಬದುಕು ಮೂರಾಬಟ್ಟೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಮ್ಮ ವ್ಯಕ್ತಿತ್ವ, ಗುಣ ಮುಖ್ಯವೇ ಹೊರತು, ಹೊರಗೆ ಧರಿಸಿರುವ ದಿರಿಸಲ್ಲ ಎಂದು ಹೇಳುವ ಮಾತು ಕೇವಲ ಹೇಳಲಿಕ್ಕೆ ಮಾತ್ರ ಚೆಂದ ಅಷ್ಟೇ. ಇಂದಿನ ಯುಗದಲ್ಲಿ ಬಾಹ್ಯ ಆಕರ್ಷಣೆಯೇ ಮುಖ್ಯ!! ಆಸ್ತಿಯಾಗಿ ಕಚ್ಚೆ ಹರಿವೆಯಷ್ಟು ಹೊಲ ಇಲ್ದಿದ್ರೂ ಒಳ್ಳೇ ಮನೆ, ಕಾರು ಇದ್ದರೆ ಸಂಬಂಧ ಮಾಡೋಕೆ ಜನರು ಬರ್ತಾರೆ!! ಇಲ್ದಿದ್ರೆ ಅವರ ಕಥೆ ಅಷ್ಟೇ!! ಆದರೂ ಬ್ರಿಟಿಷರಿಂದ ‘ಅರೆ ಬೆತ್ತಲೆ ಫಕೀರ’ ಎಂದು ಕರೆಸಿಕೊಂಡು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಮಹಾತ್ಮ ಗಾಂಧೀಜಿಯವರು ಧರಿಸುತ್ತಿದ್ದುದು ಸಾಮಾನ್ಯ ಅರೆಬರೆ ಉಡುಪನ್ನೇ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ