Advertisement

Category: ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ದೇವದಾಸ ಕಳಸದ ಕತೆ

ಇಲ್ಲಿ ದಡೂತೆಪ್ಪನ ಶೆಡ್ಡಿನ ಸಂಸಾರ ಮೂರ್ನಾಲ್ಕು ವರ್ಷ ನಿರಾಯಾಸವಾಗಿ ಸಾಗಿತು. ಕೂಡು ಸಂಸಾರದಿಂದ ಸಂಪಾದನೆಗೆ ಕುಂದೆಂದು ಭಾವಿಸಿದ್ದ ಚನ್ನಪ್ಪ ಪಕ್ಕದ ಬಡಾವಣೆಯಲ್ಲಿ ಬದುಕು ಕಟ್ಟಿಕೊಂಡಿದ್ದ. ವಾಚಮನ್ಕಿಯೊಂದಿಗೆ ಕಟ್ಟಡದ ಅನ್ಯ ಕೆಲಸಗಳಿಂದಲೂ ಗಳಿಕೆ ಹೆಚ್ಚಿಸಿಕೊಂಡಿದ್ದ. ಅವನಿಗೆ ಅಂಥ ಯಾವ ಚಟ ಇರಲಿಲ್ಲವೆಂದರೂ ರಾತ್ರಿ ಮಾತ್ರ ಅರವತ್ತು ಎಮ್ಮೆಲ್ ಬೇಕೇಬೇಕಿತ್ತು. ಆತನ ಅಕ್ಕ ಹನುಮವ್ವನೂ ಕಟ್ಟಡ ಕೆಲಸದಲ್ಲಿ ದುಡಿಯುತ್ತಿದ್ದಳು. ಡಾ. ದೇವದಾಸ ಕಳಸದ ಬರೆದ ಕತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ದೀಪ್ತಿ ಭದ್ರಾವತಿ ಕತೆ

ಅರುಂಧತಿಗೆ ಎದೆಯೊಳಗೆ ಕೊಳ್ಳಿದೆವ್ವ ಓಡಾಡಿದಂತೆ ಭಾಸವಾಯಿತು. ನರ್ಸು ಹಲ್ಲು ಕಚ್ಚಿಕೊಂಡಳಾದರೂ, ಆಯಾ ಮಾತ್ರ ಅದನ್ನು ಸಮರ್ಥಿಸಿಕೊಳ್ಳುವವಳಂತೆ “ಅಯ್ಯಾ ಇರೋದನ್ನ ಏಳುದ್ನಪ್ಪ” ಇವ್ರು ರಾತ್ರಿ ಎಲ್ಲ ಸುಖ ಪಟ್ಕೊಂಡು ಈವಾಗ ನಮ್ ತವ ಕೂಗ್‍ಕೊಂಡ್ರೆ ಏನ್ ಬತ್ತದೆ” ಎಂದಳು. ಅರುಂಧತಿಗೆಒಮ್ಮೆ ಹಾವು ಮೆಟ್ಟಿದಂತಾಗಿ ಸುಮ್ಮನೆ ಅವಳನ್ನೇ ಒಮ್ಮೆ ನೋಡಿದಳು. ಬೋಳು ಹಣೆ, ಬರಿಗೈ, ನಿರ್ವಿಕಾರ ಭಾವ ಅವಳ ಕುರಿತಾಗಿ ಬೇರೆ ಏನನ್ನೋ ಧ್ವನಿಸಿತು. ದೀಪ್ತಿ ಭದ್ರಾವತಿ ಬರೆದ ಕತೆ ‘ಸ್ಫೋಟ’ ನಿಮ್ಮ ಈ ಭಾನುವಾರದ ಓದಿಗೆ

Read More

ಡಾ. ಜ್ಯೋತಿ ಬರೆದ ಈ ಭಾನುವಾರದ ಕತೆ

ನಾನು, ಮಕ್ಕಳೊಂದಿಗೆ ಕಾಡು ಮೇಡು ಸುತ್ತುತ್ತಾ ಕಷ್ಟನಷ್ಟ ಅನುಭವಿಸುವಾಗ ಜೊತೆಗಿದ್ದು, ಅಂತೂ ಈಗ ಗದ್ದುಗೆ ಸಿಕ್ಕ ಮೇಲೆ ವೈರಾಗ್ಯ ಮೂಡಿ, ಅಕ್ಕ ಭಾವನ ಹಿಂದೆ ಹೆಜ್ಜೆಯಿಡುವ ನಿರ್ಧಾರ ಮಾಡಿ, ಕಾಡಿನತ್ತ ಮುಖ ಮಾಡಿದೆ. ನನ್ನ ಮಕ್ಕಳಿಗೆ ತಕ್ಷಣ ನಂಬಲಾಗಲಿಲ್ಲ. ಮೊದಲು ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕುರುಕ್ಷೇತ್ರ ಯುದ್ಧರಂಗ ನೋಡಿದ ಮೇಲೆ ನನಗೆ ವೈರಾಗ್ಯ ಮೂಡಿತು. ಈ ವೈಭೋಗ, ಒಣ ಪ್ರತಿಷ್ಠೆ ಯಾವುದೂ ನನಗೆ ಬೇಕಿಲ್ಲವೆನಿಸಿತು. -ಡಾ.ಜ್ಯೋತಿ ಬರೆದ ಕತೆ ‘ಕುಂತಿಯ ಮುಸ್ಸಂಜೆ ಮಾತು’ ಇಂದಿನ ಓದಿಗಾಗಿ. 

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಕೆ. ದಯಾನಂದ ಕತೆ

ಕಷ್ಟಪಟ್ಟು ಎದ್ದು ಗೋಡೆಗೆ ಒರಗಿಕೊಂಡ ಆಕೆ ಕೈ ಸನ್ನೆ ಮಾಡಿ ನೀರು ಕೇಳಿದಳು. ಹತ್ತಿರದಲ್ಲೇ ನಿಂತಿದ್ದ ಹುಡುಗಿಯೊಬ್ಬಳು ನೀರು ತಂದುಕೊಟ್ಟಳು. ನೀರು ಕುಡಿದು ಸುಧಾರಿಸಿಕೊಂಡ ಮೇಲೆ ಆಕೆ ದೊಡ್ಡ ಉಸಿರು ಬಿಟ್ಟು, ‘ಮಗ ಸತ್ತರೆ ತಾಯಿ ಏನು ಹೇಳ್ತಾಳಪ್ಪ. ಮಗ ಸತ್ತ, ಸಾಯಿಸಿದ್ರು’ ಎಂದು ಅಳಲು ಶುರುಮಾಡಿದಳು. ಕಣ್ಣೀರು ಒರೆಸಿಕೊಳ್ಳುತ್ತಾ, ‘ಇನ್ನೊಬ್ಬ ಮಗ ಇದ್ದಿದ್ರೆ ಆ ಪಾಪಿಗಳನ್ನ ಹೊಡೆದುಕೊಂದು ಈ ಸಾವಿಗೆ ಸೇಡು ತೀರಿಸ್ಕೊ ಅಂತ ಹೇಳಬೋದಿತ್ತು. ಆದ್ರೆ ಇದ್ದವ್ನು ಒಬ್ಬನೇ ಮಗ. ಅವನು ವಾಪಸ್ ಬರ್ತಾನಾ’ ಎಂದು ಬರಿಗಣ್ಣುಗಳಿಂದ ಅವನನ್ನು ನೋಡಿದಳು.

Read More

ಕೆ. ಪ್ರಭಾಕರನ್‌ ಅನುವಾದಿಸಿದ ಎಂ ಮುಕುಂದನ್‌ ಕಥೆ

ಕಾನ್‍ಫೆರೆನ್ಸ್ ರೂಮಿನ ಪಳ ಪಳಾ ಹೊಳೆಯುತ್ತಿದ್ದ ಮೇಜಿನಮೇಲೆ ಫ್ಲವರ್ ಪಾಟೂ ಮಿನರಲ್ ವಾಟರ್ ಬಾಟಲುಗಳೂ ಬಂದು ನಿಂತವು. ಗಾಜಿನ ಬಾಗಿಲುಗಳ ಮೂಲಕ ನೋಡಿದರೆ, ಮಂಜು ಮುಸುಕಿದ ಪರ್ವತ ಶ್ರೇಣಿಗಳಲ್ಲಿ ಎಳೆಬಿಸಿಲು ಸ್ಪಷ್ಟಗೊಳ್ಳುತ್ತಿರುವುದು, ಮಸುಕಾಗುತ್ತಿರುವುದು ಕಾಣಬಹುದು. ಆಕಾಶದಲ್ಲಿ ಮಳೆಯ ಸೂಚನೆಗಳು ಗೋಚರಿಸುತ್ತಿದ್ದವು. ಅವರು ಕಂಪನಿಯ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾ ವಾದವಿವಾದಗಳನ್ನು ಮುಂದಿಡುತ್ತಿದ್ದರು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ