Advertisement

Tag: ಕಾವ್ಯಾ ಕಡಮೆ

ಹೊಸ ತಲೆಮಾರಿನ ಕಥೆಗಳು

‘ಕೊನೇ ಊಟ’ ಈ ಸಂಕಲನದ ಅತ್ಯಂತ ಮುಖ್ಯವಾದ ಅಷ್ಟೇ ಹೃದಯಸ್ಪರ್ಶಿ ಕಥೆ. ಸಂಯುಕ್ತ ಸಂಸ್ಥಾನಗಳ ನೇವಾರ್ಡ ರಾಜ್ಯದಲ್ಲಿ ಪೂರ್ವಕ್ಕಿರುವ ಕುಪ್ರಸಿದ್ಧ ಕಾರಾಗೃಹ ಈಲಿಯ ಜೈಲು. ಜೈಲಿನ ಸುತ್ತಲಿನ ಗೋಡೆಯನ್ನು ಹರಿತವಾದ ರೇಜರ್ ಬ್ಲೇಡುಗಳಿಂದ ನಿರ್ಮಿಸಿದ್ದಾರೆಂದರೆ ಒಳಗಡೆ ಇನ್ನೆಷ್ಟು ಭಯಾನಕ ಯಾತನಾಮಯ ದಬ್ಬಾಳಿಕೆ ನಡೆದಿರುತ್ತದೆಯೆಂಬುದು ಕೇವಲ ಊಹೆಗೆ ಬಿಟ್ಟ ವಿಷಯ, ಯಾವ ಕೈದಿಯೂ ಇಲ್ಲಿಂದ ಜೀವಂತ ಬಿಡುಗಡೆಯಾಗಿ ಹೊರಗೆ ಬಂದಿಲ್ಲ ಅಥವಾ ಗೋಡೆ ಜಿಗಿದು ಪಾರಾಗಿ ಓಡಿಹೋಗಿಲ್ಲ..
ಕಾವ್ಯಾ ಕಡಮೆ ಕಥಾ ಸಂಕಲನ “ಮಾಕೋನ ಏಕಾಂತ”ದ ಕುರಿತು ವಿಶ್ಲೇಷಣೆ ಬರೆದಿದ್ದಾರೆ ವ್ಯಾಸ ದೇಶಪಾಂಡೆ 

Read More

ಬರವಣಿಗೆ ಎಂಬ ಅಫೀಮು

ಎಲ್ಲರಿಗೂ ಸಮನಾಗಿ ಸಿಗುವ ಇಪ್ಪತ್ನಾಲ್ಕೇ ಘಂಟೆಗಳನ್ನು ಇವರೆಲ್ಲ ತಡೆದು ನಿಲ್ಲಿಸಿದರು ಹೇಗೆ? ಜೀವನಕ್ಕೆ ಬೇಕಾದ ಹಣ ಸಂಪಾದಿಸಿದರು ಹೇಗೆ? ಮನೆಯನ್ನು ತೂಗಿಸಿದರು ಹೇಗೆ? ಅರೆ ಹೊಟ್ಟೆ ಉಂಡೇ ಎಷ್ಟು ರಾತ್ರಿ ಕಳೆದರು? ಅಷ್ಟಾಗಿಯೂ ಒಂದೊಳ್ಳೆಯ ಪುಟ ಬರೆದ ಮೇಲೆ ಅವರ ತುಟಿಯ ಮೇಲೆ ಮೂಡಿದ ಮುಗುಳೆಂಥದು? ಅಪಹಾಸ್ಯಕ್ಕೊಳಗಾದರೇ? ಪ್ರೀತಿಸುವವರಿಂದ ದೂರವಾದರೇ? ಅವರು ತಮ್ಮ ಬರವಣಿಗೆಗಾಗಿ ತೆತ್ತ ಬೆಲೆಯೆಂಥದು? ಕಲೆಯಿಂದ ಸಿಗುವ ಸುಖ ಈ ಎಲ್ಲವನ್ನೂ ಮೀರಿದ್ದೇ?

Read More

ಜಿಂಕೆಗಳು ಕೊಲೆ ಮಾಡಬಲ್ಲವೇ?

ಪೊಲೀಸರು ಊರಿನ ಎಲ್ಲರ ಜೊತೆಗೆ ಯನೀನಾಳನ್ನೂ ವಿಚಾರಣೆಗೆ ಒಳಪಡಿಸುತ್ತಾರೆ. ಯಾರ ಬಳಿಯೂ ಇರದ ಉತ್ತರಗಳು ಯನೀನಾಳ ಬಳಿ ದೊರೆಯುತ್ತವೆ. ಬಿಗ್ ಫೂಟ್ ಅಲ್ಲದೇ ಇತರರ ಕೊಲೆಯಾದ ಸ್ಥಳಗಳಲ್ಲಿಯೂ ಬೇರೆ ಬೇರೆ ತರಹದ ಪ್ರಾಣಿಗಳ ಹೆಜ್ಜೆ ಗುರುತುಗಳು ಕಂಡಿರುತ್ತವೆ. ನಾವೇ ಸಾಧು ಪ್ರಾಣಿಗಳ ಒಳಗಿನ ಕ್ರೌರ್ಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲವೇನೋ, ಈ ಎಲ್ಲ ಸಾಧು ಪ್ರಾಣಿಗಳೇ ಒಂದಾಗಿ ಊರಿನ ಜನರನ್ನು ಸಾಯಿಸುತ್ತಿರಬಹುದು ಎಂಬ ವಾದವನ್ನು ಒಪ್ಪಿಸುವ ಯನೀನಾ ಪೊಲೀಸರ ಕುಹಕಕ್ಕೆ ಗುರಿಯಾಗುತ್ತಾಳೆ.
‘ಕಾವ್ಯಾ ಓದಿದ ಹೊತ್ತಿಗೆ’ ಅಂಕಣದಲ್ಲಿ…

Read More

ನಕ್ಷತ್ರ ಮಂಡಲ ಇರುವುದು ಎಲ್ಲಿ?

ಬಸವಣ್ಣ ಹೇಳಿದ “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ನುಡಿಯೇ ಈ ಕಾದಂಬರಿಯ ಧ್ಯೇಯವಾಕ್ಯ. ಪ್ರತೀ ಅಧ್ಯಾಯದಲ್ಲೂ ಇರುವ ಸರ್ವನಿಯಾಮಕ ಎಳೆಯೆಂದರೆ ಅದು ಸಂಚಾರ, ಚಲನೆ. “ಜಗತ್ತಿಗೆ ಒಂದು ಸ್ಥಳದಲ್ಲಿ ನೆಲೆ ನಿಲ್ಲದವರ ಮೇಲೆ ಏನು ದ್ವೇಷವೋ ಕಾಣೆ. ಅದಕ್ಕೇ ಸಂಚಾರವನ್ನು ಆಯ್ದುಕೊಂಡವರನ್ನೆಲ್ಲ ತಡವಿಲ್ಲದೇ ಹೊಡೆದುರುಳಿಸಿದೆ ಚರಿತ್ರೆ” ಎನ್ನುತ್ತಾಳೆ ಕಾದಂಬರಿಯ ನಿರೂಪಕಿ ಒಂದು ಕಡೆ. ಅವಳು ನಿರಂತರವಾಗಿ ಚಲನೆಯಲ್ಲೇ ಇರುವವಳು. ಅಂದರೆ ಪ್ರಪಂಚದ ಬೇರೆ ಬೇರೆ ಊರುಗಳಿಗೆ ಸೈಟ್ ಸೀಯಿಂಗಿಗೆಂದು ಹೋಗಿ ಬರುವವಳಲ್ಲ.

Read More

ಅಪರಾಧಕ್ಕೆ ತಕ್ಕ ಶಿಕ್ಷೆ ಅಂದರೇನರ್ಥ?

ಬಿಸಿಲು, ಉಪವಾಸ, ಸುತ್ತಲಿನ ಕೊಳಕು, ದೊಡ್ಡವರ ಸಣ್ಣತನ… ಮುಂತಾದವುಗಳಿಂದ ಅವನು ಬೇಸತ್ತಿದ್ದಾನೆ. ಇವನ ಒಳಿತು ಮತ್ತು ಭವಿಷ್ಯಕ್ಕಾಗಿ ತಂಗಿ ದುನ್ಯಾ ಸಿರಿವಂತನಾದ ಲೂಷನ್‍ನನ್ನು ಇಷ್ಟವಿಲ್ಲದಿದ್ದರೂ ವರಿಸಲು ಸಿದ್ಧವಾಗಿರುವ ವಿಷಯ ಈಗಷ್ಟೇ ಅವನಿಗೆ ತಾಯಿಯ ಪತ್ರದಿಂದ ತಿಳಿದಿದೆ. ಏನನ್ನಾದರೂ ಗಂಭೀರವಾಗಿ ಯೋಚಿಸುವಾಗ ಕೈಕಟ್ಟಿ ಅತ್ತಿಂದಿತ್ತ ಸರಸರನೆ ಓಡಾಡುವ ತಂಗಿಯ ಚಿತ್ರ ಅವನ ಕಣ್ಣ ಮುಂದಿದೆ.
ಕಾವ್ಯಾ ಓದಿದ ಹೊತ್ತಿಗೆ ಅಂಕಣದಲ್ಲಿ ಫ್ಯದೊರ್ ದಾಸ್ತಯೇವ್ಸ್ಕಿಯ ಪ್ರಸಿದ್ಧ ಕಾದಂಬರಿ “ಕ್ರೈಂ ಅಂಡ್‌ ಪನಿಷ್ಮೆಂಟ್‌” ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜಾರಿದ ಬದುಕನ್ನು ಸ್ವವಿಮರ್ಶಿಸಿಕೊಂಡ ಆತ್ಮಕಥೆ: ನಾರಾಯಣ ಯಾಜಿ ಬರಹ

ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ…

Read More

ಬರಹ ಭಂಡಾರ