Advertisement

Tag: ಕೆಂಡಸಂಪಿಗೆ

ಕೊಡಗಿನ ಮೊಟ್ಟೆಯೂ… ಮದ್ದು ಪಾಯಸವೂ: ಸುಮಾವೀಣಾ ಸರಣಿಸ

ಕೊಡವರಲ್ಲಿ ಕಕ್ಕಡ ಪದಿನೆಟ್ಟು, ಆಟಿಪದಿನೆಟ್ಟು, ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಈ ಜಾನಪದೀಯ ಪರ್ವ ಕೃಷಿಕರ ಪಾಲಿಗೆ ಮಹಾಪರ್ವವೆಂದೇ ಹೇಳಬಹುದು. ಆದರೆ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಈ ಮಾಸ ನಿಷಿದ್ಧ. ಜೊತೆಗೆ ಗ್ರಾಮೀಣ ಭಾಗದ ದೇವಾಲಯಗಳಲ್ಲೂ ನಿತ್ಯ ಪೂಜೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಈ ವರ್ಷ ಆಗಸ್ಟ್ 3 ನೆ ತಾರೀಖು ಈ ಆಚರಣೆ ಇದೆ. ಸರಿ ಸುಮಾರು ಮುಂಗಾರಿನ ಭತ್ತದ ನಾಟಿ ಮಾಡಿ ಮುಗಿಯುವ ಕಾಲಕ್ಕೆ ಈ ಆಟಿ ಹದಿನೆಂಟರ ಆಚರಣೆ ಇರುತ್ತದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ನಮ್ಮೊಳಗೂ ಒಂದು “ಬೌಲ್” ಇದೆಯೇ?: ಬಿ.ಕೆ. ಸುಮತಿ ಬರಹ

ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ?
ಡಾ. ಎಂ.ಎಸ್.‌ ಮೂರ್ತಿಯವರ “ಬೌಲ್‌” ಕಾದಂಬರಿಯ ಕುರಿತು ಬಿ.ಕೆ. ಸುಮತಿ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ

ಇದೇ ಗುಣವಿಶೇಷಣಗಳೂ ಹಾಗೂ ಅವನ ಅಯಸ್ಕಾಂತದಂತಹ ನಗುವೆ ಸಿಂಧೂಳನ್ನು ಅವನಿಗೆ ಕಚ್ಚಿಕೊಳ್ಳುವಂತೆ ಮಾಡಿದ್ದು. ಮ್ಯಾಗ್ನೆಟ್ಟಿನ ಎರಡು ಧ್ರುವಗಳು ಪರಸ್ಪರ ಆಕರ್ಷಣೆ, ವಿಕರ್ಷಣೆಗೊಳ್ಳುವಂತೆ ಒಮ್ಮೆ ಅವನಿಂದ ವಿಮುಖಗೊಂಡರೆ ಮತ್ತೊಮ್ಮೆ ಅವನನ್ನರಸಿ ಸೆಳೆತ ತೀವ್ರವಾಗಿ ಬಳಿಗೋಡುತ್ತಿದ್ದಳು. ಅವನಿಗೂ ಸಿಂಧುವಿನ ಅಗತ್ಯವಿಲ್ಲವೇನಂತಿಲ್ಲ. ಭೌತಿಕ ಅಗತ್ಯಗಳ ಜೊತೆಗೆ ಮಾನಸಿಕವಾಗಿಯೂ ಸಾಥಿಯವಳು. ಅವರಿಬ್ಬರಿಗೂ ತಮ್ಮ ಬೌದ್ಧಿಕ ಮಟ್ಟಕ್ಕೆ ಸಾಟಿಯಾಗುವಂತಹ ಗೆಳೆಯರು ಇಂತಹ ಊರಿನಲ್ಲೆಲ್ಲಿ ಸಿಗಬೇಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಮತಾ ಅರಸೀಕೆರೆ ಕತೆ

Read More

ಗ್ಲೋಬಲ್-ಲೋಕಲ್ ಊರುಗಳ ಉಪಕಥೆಗಳು: ವಿನತೆ ಶರ್ಮ ಅಂಕಣ

ಇವೆಲ್ಲವನ್ನು ಹಿಂದಿನ, ಎಂದಿನ ಕುತೂಹಲದಿಂದ ನೋಡುತ್ತಾ ನಿಲ್ಲುವ ನನ್ನನ್ನು ಅನುಮಾನದಿಂದ ನೋಡುವ ಜನರು ಜಾಸ್ತಿಯಾಗಿರುವುದು ಗಮನಕ್ಕೆ ಬರುತ್ತದೆ. ಯಾರು ನೀವು, ಇಲ್ಲಿ ಯಾಕೆ ನಿಂತು ನಮ್ಮನ್ನು ನೋಡುತ್ತಿದ್ದೀರಿ, ನಿಮ್ಮಷ್ಟಕ್ಕೆ ನೀವು ನಿಮ್ಮ ಕೆಲಸ ನೋಡಿಕೊಂಡು ಮುಂದೆ ಸಾಗಿ, ಎಂದು ಕೆಲವರು ಕೇಳುವಾಗ ಜನಜೀವನದ ಮನಸ್ಸುಗಳ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣು ಸಡಿಲವಾಗಿರುವುದು ಕಾಣುತ್ತದೆ. ನಮ್ಮಷ್ಟಕ್ಕೆ ನಾವು, ನಿಮ್ಮಷ್ಟಕ್ಕೆ ನೀವು ಎನ್ನುವ ಮಾತನ್ನು ಕೇಳಿದಾಗ ಯಾಕೋ ಮುಂದುವರೆದ ಪಾಶ್ಚಾತ್ಯ ದೇಶ-ಸಮಾಜಗಳ ಬಂಡವಾಳಶಾಹಿ ಧೋರಣೆ ನೆನಪಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ನೀನೆ ಭುವನಕ್ಕಾರಾಧ್ಯನೈ… ಚೂತರಾಜಾ: ಚಂದ್ರಮತಿ ಸೋಂದಾ ಸರಣಿ

ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ನಾಲ್ಕನೆ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ