Advertisement

Tag: ಪ್ರವಾಸ

ಅರೋರಾ ಬೋರಿಯಾಲಿಸ್: ನರ್ತಿಸುವ ಬೆಳಕಿನ ನೂರೆಂಟು ಮೋಹಕ ರೂಪ

ಹಿಂದಿನ ಸಾಲಿನಲ್ಲಿ ಮಲಗಿದ್ದ ಶ್ವೇತಾ ಜೋರಾಗಿ ಭುಜ ಅಲುಗಿಸಿ ನನ್ನನೆಬ್ಬಿಸುತ್ತಿದ್ದಾಳೆ. ಅವಳಿಗೆ ಗಂಟಲುಬ್ಬಿ ಮಾತೇ ಹೊರಡುತ್ತಿಲ್ಲ. ಕೈಸನ್ನೆ ಮಾಡಿ ಕಿಟಕಿಯ ಪರದೆ ಎತ್ತು ಎನ್ನುತ್ತಿದ್ದಾಳೆ. ಪೈಲಟ್ ಕಡೆ ಬೆರಳು ತೋರಿಸುತ್ತಿದ್ದಾಳೆ. ನನಗೋ ಎದೆ ಧಸಕ್ ಎಂದಿತು. ಅವಳ ಮುಖದ ತುಂಬಾ ಇದ್ದ ನಗು ನೋಡಿ ವಿಮಾನ ಅಪಾಯದಲ್ಲಿಲ್ಲ ಎಂದು ಖಾತ್ರಿಯಾಯಿತು. ಅಂದರೆ.. ಅಂದರೆ.. ನಿಜಕ್ಕೂ ನಾರ್ಥರ್ನ್ ಲೈಟ್ಸ್ ಕಾಣಿಸುತ್ತಿದೆಯಾ? ಇವೆಲ್ಲ ನಡೆದಿದ್ದು ಕೆಲವೇ ಸೆಕೆಂಡುಗಳಲ್ಲಿ ಎನ್ನಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ವೈಶಾಲಿಹೆಗಡೆ ಬರಹ

Read More

ಝಂಡಾ ಊಂಚಾ ಬಿಟ್ಟು.. ಘಮಘಮಿಸುವ ಊಟದ ಹಿಂದೆ ಹೊರಟೂ…

ಮೌಂಟ್ ಅಬುನಲ್ಲಿನ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇರುತ್ತೆ ಅಂತ ಯಾರೋ ಹೇಳಿದ್ದರು. ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇದ್ದರೆ ದೇವರನ್ನ ಯಾವಾಗ ನೋಡೋದು ಅನ್ನುವ ಸಂಶಯ ಹುಟ್ಟಿತ್ತು. ನನ್ನಾಕೆ ಒಂದು ಮೊಟಕು ಕೊಟ್ಟು ಇಪ್ಪತ್ನಾಲ್ಕು ಗಂಟೇನೂ ತಿಂತಲೇ ಕೂಡು ಹಾಗಿಲ್ಲ ಅಂತ ಭೋಜನ ಶಾಲೆಯಿಂದ ಆಚೆಗೆ ದರ ದರ ಎಳೆದುಕೊಂಡು ಹೋಗಿದ್ದಳು. ಊಟಕ್ಕೆ ಅಲ್ಲೂ ಚಪಾತಿ, ಅದಕ್ಕೆ ನೆಂಚಿಕೊಳ್ಳೂಕ್ಕೆ ಅದೇನೋ ಒಂದು.
ಎಚ್. ಗೋಪಾಲಕೃಷ್ಣ ಬರೆದ ಹಾಸ್ಯ ಪ್ರಬಂಧ ನಿಮ್ಮ ಓದಿಗೆ

Read More

ಕಾವಿಧಾರಿಗಳೊಂದಿಗೆ ಕಳೆದ ಕಾಲದ ಮೆಲುಕುಗಳು…

ಜಿಪ್ಸಿಯಂತಿದ್ದ ಆತ ಎಲ್ಲರೊಡನೆ ಚಕ್ಕಲ್ಮಟ್ಟ್ಕೆ ಹಾಕಿಕೊಂಡು ಊಟ ಮಾಡುತ್ತಿದ್ದರು. ನನ್ನ ಕ್ಯಾಮೆರ ಲೆನ್ಸ್ ಆತನನ್ನು ನೋಡುತ್ತಿದ್ದದ್ದು ಗಮನಕ್ಕೆ ಬಂದೊಡನೆ ಒಂದು ನಗು ಒಂದು ಜ್ಞಾನ ಮುದ್ರೆಯನ್ನು ನನ್ನೆಡೆಗೆ ಬಿಸ್ಹಾಕಿದರು. ಈ ಮೇಳದ ಜಾಗದಲ್ಲಿ ಸ್ವಲ್ಪ ಹಳೇ ಹುಲಿಯಂತೆಯೇ ಕಂಡರವರು. ಕ್ಯಾಮೆರ ಮತ್ತು ಮೀಡಿಯಾವನ್ನು ಆಕರ್ಷಿಸಲು ಬೇಕಾದ ಹಾವಭಾವ ಅವರಲ್ಲಿತ್ತು ಅನ್ನಿಸಿತು.. ಮಾತು ಬೆಳೀತಾ ಬೆಳೀತಾ ಗೊತ್ತಾಯ್ತು ಆತ ಅಮೆರಿಕೆಯ ಅಲೆಮಾರಿ ಅಂತ. ಹಾಡು ನಟನೆ ಪ್ಯಾಷನ್. ಅದರಲ್ಲೇ ಜೀವನ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಿದರೂ ಉಹುಂ, ಯಶಸ್ಸು ಒಲ್ಲೆ ಅಂತ ಹಠ ಹಿಡಿದಿತ್ತು. ಅಂಜಲಿ ರಾಮಣ್ಣ ಬರಹ

Read More

ಕ್ಯಾತನಮಕ್ಕಿಯ ಕಾಲಮೇಲೆ ಕೂತು ಗಾಳಿಗುಡ್ಡವ ನೆನೆದು

ಕಿಲೋಮೀಟರ್ ದೂರದಲ್ಲಿ ಬೈಕು ನಿಲ್ಲಿಸಿ ನಮ್ಮ ಟ್ರೆಕಿಂಗ್ ಆರಂಭಿಸಿದಾಗ ಇದ್ದ ಉತ್ಸಾಹ, ಕ್ಯಾತನಮಕ್ಕಿಯನ್ನು ಅರ್ಧ ಹತ್ತಿದಾಗಲೇ ಬತ್ತುವುದರಲ್ಲಿತ್ತು. ಒಂಚೂರು ಕುಳಿತು ನೀರು ಕುಡಿದು ಕಚ್ಚಾ ರಸ್ತೆಯಲ್ಲಿ ಬೆವರಿಳಿಸಿ, ತುದಿ ತಲುಪುವಾಗ ಜೀಪಿನಲ್ಲಿ ಬಂದವರ ದರ್ಬಾರಿಗೆ ಮನವೊಮ್ಮೆ ಪಿಚ್ಚೆಂದಿತ್ತು. ಆದರೂ ನಡೆದು ಗಮ್ಯ ತಲುಪುವ ಸಾರ್ಥಕ ಭಾವ ಆರಾಮಾಗಿ ತೇಲಿ ಬಂದವರಿಗೆಲ್ಲಿ ಬರಬೇಕು ಎಂದು ನಮಗೆ ನಾವೇ ಬೆನ್ತಟ್ಟಿಕೊಂಡು ಮುನ್ನಡೆದೆವು.
ಚಿಕ್ಕಮಗಳೂರಿನ ‘ಕ್ಯಾತನಮಕ್ಕಿʼ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ಶುಭಶ್ರೀ ಭಟ್ಟ

Read More

ಎಲ್ಲಿ ಹೋದರೇನು… ಮನ ಮರೆಯುವುದಿಲ್ಲ ನಿನ್ನನು

ಚಾಲಕ ಖಾನ್ ಅಲ್ಲಿಂದ ಒಂದು ಗಂಟೆ ಐದು ನಿಮಿಷಗಳ ಪ್ರಯಾಣದಲ್ಲಿ ತಲುಪಿಸಿದ್ದು ನೀರ್ದೇವನ ಪಾದಕ್ಕೆ. ಒಂದು ಬದಿ ಪ್ರಪಾತ ಮತ್ತೊಂದು ಬದಿ ಸಮುದ್ರ… ನಡುವೆ ಈ ನೀರ್ಮಕ್ಕಳ ಕಾಯ್ವ ದೇವನ ಪಳಿಯುಳಿಕೆ. ಸೂರ್ಯ ಮುಳುಗುತ್ತಿದ್ದ, ಬಂದಿದ್ದವರು ವಿಧವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಜೋರು ಗಾಳಿ, ತಂಪು ಸಮಯ ಸಮುದ್ರ ನೋಡುತ್ತಾ ಕೂರಲು ಒಂಟಿ ನಿಂತ ಸಣ್ಣ ಬಂಡೆ. ಅದೆಷ್ಟು ಚಂದಿತ್ತು ಅಲ್ಲಿ ಕೂತು ಇಹಪರವನ್ನು ಮರೆತಿದ್ದು. ಸಾಯಂಕಾಲ 6 ಗಂಟೆಯ ನಂತರ ಅಲ್ಲಿ ಇರಲು ಬಿಡುವುದಿಲ್ಲ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಗ್ರೀಸ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ