Advertisement

Tag: ಸುಧಾ ಆಡುಕಳ

ಪ್ರಪಂಚದಷ್ಟೇ ಪುರಾತನವಾದ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ: ಸುಧಾ ಆಡುಕಳ ಮಾತುಗಳು

ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು.
ಸುಧಾ ಆಡುಕಳ ಅನುವಾದಿಸಿದ ಒರಿಯಾನ ಫಲಾಚಿ ಕಾದಂಬರಿ “ಎಂದೂ ಹುಟ್ಟದ ಮಗುವಿಗೆ ಪತ್ರ”ಕ್ಕೆ ಬರೆದ ಅವರ ಮಾತುಗಳು ಇಲ್ಲಿವೆ

Read More

ನೀಲಿ ಮತ್ತು ಸೇಬು: ಸುಧಾ ಆಡುಕಳ ಕಥಾಸಂಕಲನಕ್ಕೆ ಎಚ್. ಎಸ್. ಸತ್ಯನಾರಾಯಣ ಮುನ್ನುಡಿ

‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ.
ಸುಧಾ ಆಡುಕಳ ಅವರ “ನೀಲಿ ಮತ್ತು ಸೇಬು” ಕಥಾ ಸಂಕಲನಕ್ಕೆ ಡಾ. ಎಚ್. ಎಸ್. ಸತ್ಯನಾರಾಯಣ ಬರೆದ ಮುನ್ನುಡಿ

Read More

ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪುರಸ್ಕಾರ: ಸುಧಾ ಆಡುಕಳ ಬರಹ

ಹಿಜಾಬ್ ಧಾರಣೆಯ ವಿರುದ್ಧ ಇರಾನಿ ಮಹಿಳೆಯರೆಲ್ಲರೂ ಬಂಡೆದ್ದಿರುವ ವಿಷಯ ಇಡಿಯ ಜಗತ್ತಿಗೆ ತಿಳಿದಿದೆ. ಮೊಹಮ್ಮದಿ ಈ ಹೋರಾಟದ ಮುಂಚೂಣಿಯಲ್ಲಿರುವವರು. ‘ಮಹಿಳೆ – ಜೀವನ – ಸ್ವಾತಂತ್ರ್ಯ’ ಎಂಬ ಮೂರು ವಿಷಯಗಳನ್ನು ಮುಂದಿಟ್ಟುಕೊಂಡು ತಮ್ಮ ಹೋರಾಟವನ್ನು ಸಂಘಟಿಸಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳು ನಿಲ್ಲಬೇಕು.
ಈ ಸಲದ ನೊಬೆಲ್‌ ಶಾಂತಿ ಪುರಸ್ಕೃತ ನರ್ಗೆಸ್‌ ಮೊಹಮ್ಮದಿ ಅವರ ಕುರಿತು ಸುಧಾ ಆಡುಕಳ ಬರಹ

Read More

ಟೇಪ್‌ ರೆಕಾರ್ಡರ್ ವಿಥ್ ರೇಡಿಯೋ ಎಂಬ ಮಾಯಾಪೆಟ್ಟಿಗೆ: ಸುಧಾ ಆಡುಕಳ ಬರಹ

ಎಲ್ಲರ ಒಕ್ಕೊರಲ ಒತ್ತಾಯಕ್ಕೆ ಅಪ್ಪನೂ ಇಲ್ಲವೆನ್ನಲಾರದೇ ನಡುಅಂಗಳದಲ್ಲಿಯೇ ಚಾಪೆ ಹಾಸಿ, ಮದ್ದಲೆಯೊಂದಿಗೆ ಸಜ್ಜಾಗಿಯೇಬಿಟ್ಟರು. ಸುತ್ತ ಮುತ್ತಿದ ನೀರವ ಮೌನದ ನಡುವೆ ಅಪ್ಪ ಮದ್ದಲೆ ಬಡಿಯುತ್ತಾ, ದೊಡ್ಡ ದನಿಯಲ್ಲಿ “ವಿಘ್ನೇಶಾಯ ಸರಸ್ವತೈ ಪರ‍್ವತೈ ಗುರುವೇ ನಮಃ” ಎಂದು ಗಣಪತಿ ಪೂಜೆಯೊಂದಿಗೆ ಆರಂಭಿಸಿ, “ಸರಸಿಜಾಂಬಕಿಯರೇ ಕೇಳಿ” ಎಂಬ ಭೀಷ್ಮಪರ್ವದ ನಾಲ್ಕು ಹಾಡುಗಳನ್ನು ಹಾಡಿ ಇನ್ನು ಸಾಕು ಎಂಬಂತೆ ಕೈಸನ್ನೆ ಮಾಡಿದರು. ಇದನ್ನೇ ಕಾಯುತ್ತಿದ್ದ ಸಾಹೇಬರು ಟಕ್ ಎಂದು ರೆಕಾರ್ಡಿಂಗನ್ನು ಬಂದ್ ಮಾಡಿದರು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಎಂದಿಗೂ ಹುಟ್ಟದ ಮಗುವಿಗೆ ಮೂರು ಕಿನ್ನರ ಕತೆಗಳು

ಪಾತ್ರೆ ತೊಳೆದು ಮುಗಿಸಿದ ಅಮ್ಮ ಹಾಲಿಗೆ ಬಂದು ಮೊದಲು ನೆಲದ ಹಾಸನ್ನು ಬ್ರಶ್‌ನಿಂದ ತಿಕ್ಕಿ ಸ್ವಚ್ಛಗೊಳಿಸುತ್ತಿದ್ದರು. ನಂಆಗೆಲ್ಲ ಆ ಸುಂದರ ಹೆಂಗಸು ಸೋಫಾದ ಮೇಲೆ ಮಲಗಿ ಪುಸ್ತಕವನ್ನು ಓದುತ್ತಲೇ, ಏನಾದರೂ ದೂರುಗಳನ್ನು ದಾಖಲಿಸುತ್ತಿದ್ದಳು. ಟೇಬಲ್ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಹುಡುಗಿಗೆ ಅರ್ಥವಾಗದ ವಿಷಯವೊಂದಿತ್ತು.
ಇಟಲಿಯ ಸಾಹಿತಿ ಮತ್ತು ಪತ್ರಕರ್ತೆಯಾಗಿದ್ದ ಓರಿಯಾನ ಪಲಾಸಿಯವರ ‘ಎಂದಿಗೂ ಹುಟ್ಟದ ಮಗುವಿಗೆ ಪತ್ರ’ ಕಾದಂಬರಿಯನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸುತ್ತಿದ್ದು, ಅದರ ಭಾಗವೊಂದು ನಿಮ್ಮ ಓದಿಗೆ ಇಲ್ಲಿದೆ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಡಂಕಲ್‌ಪೇಟೆಯ ಒಳ-ಹೊರಗೆ: ಜಿ. ಪಿ.ಬಸವರಾಜು ಮಾತುಗಳು

ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ…

Read More

ಬರಹ ಭಂಡಾರ