Advertisement

Tag: ಹೆಚ್. ಆರ್. ಸುಜಾತಾ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಹೆಚ್. ಆರ್. ಸುಜಾತಾ ಕತೆ

“ಹೋಗಿ ಬಂದು ಮೂಗಿ ತಕ ಹೋದ” ಅಂತ ಮೊದ್ಲೇ ಗಾದೆ ಮಾತಿಲ್ವಾ? ಹಂಗಾಯ್ತು ಇದೂವೆ. ಇವಳಿಗೆ ಬಾಯಿಲ್ಲ. ಅವನಿಗೆ ನೀತಿನೇಮ ಇಲ್ಲ. ಯಾರ್ಗಾರ ಹೇಳತಳೆ ಅನ್ನೋ ಭಯವಂತೂ ಮೊದ್ಲೇ ಇಲ್ಲ. ಇಬ್ರಗೂ ವಯಸ್ಸಿನ ಚಪಲ. ತೀರಸಕಂಡವರೆ. ಆದ್ರೆ ಆ ನನ್ ಮಗಂಗೇನು ಕಷ್ಟ? ಗಂಡಸು. ಮದ್ವೆ ಮಾಡ್ಕತನೆ ಇಲ್ಲಾಂದ್ರೆ….. ಇನ್ನೊಭ್ಳು ತಕೆ ಹೋಯತನೆ. ಇವಳಿಗೆ ತಾನೆ ಇರದು ಈಗ ಹಬ್ಬ. ಹರುಷದ ಕೂಳಿಗೆ ವರುಷದ ಕೂಳು ಕಳಕಂಡಂಗ ಆಯ್ತಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಹೆಚ್. ಆರ್. ಸುಜಾತಾ ಕತೆ

Read More

`ಮಣಿಬಾಲೆʼ ಕೃತಿಯ ಒಂದೆರಡು ಪುಟಗಳು

ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು.
ಇತ್ತೀಚೆಗಷ್ಟೇ ಬಿಡುಗಡೆಯಾದ ಹೆಚ್.ಆರ್. ಸುಜಾತಾ ಅವರ ಕೃತಿ “ಮಣಿಬಾಲೆ” ಕೆಲವು ಪುಟಗಳು ನಿಮ್ಮ ಓದಿಗೆ

Read More

ಮರಸು ಅನ್ನೋ ಊರಿನ ಸ್ಥಳ ಪುರಾಣ: ಸುಜಾತಾ ತಿರುಗಾಟ ಕಥನ

“ಅವರು ಅಂದಿನಿಂದಲೂ ನಮ್ಮವರೇ ಆಗಿ ಹೋಗಿದ್ದಾರೆ. ಹಳೆಮರಸಿನ ಹೊಲಗೇರಿ ಪಕ್ಕದಲ್ಲೊಂದು ಅಂಕು ಡೊಂಕಾಗಿರೊ ಹಣ್ಣುಹಣ್ಣು ಮುದುಕನಂಥ ಕಣಗಲು ಮರ, ಅಷ್ಟೆತ್ತರದ ಗುಡ್ಡೆ ಮೇಲೆ ಇರೊ ಒಂದು ಲಿಂಗ, ಅದಕ್ಕೆಇರೊ ಒಂದು ಕಾಡು ಕಲ್ಲಿನ ಮಂಟಪ, ವಲಸೆ ಹೋದ ಲಿಂಗಾಯಿತರ ಕುರುಹಿನ ಹಾಗೆ ಮಳೆಗಾಳಿಗೆ ನಲುಗದೆ ಉಳಿದುಹೋಗಿದೆ. “ಮರಸು ಊರಿನ ಜನರು ಆ ಕಡೆಗೆ ಊರು ಬದಲಾಯಿಸುವಾಗ…”

Read More

ಬಾಹುಬಲಿಯ ಸ್ನಾನವೂ.. ಜೇನ್ನೊಣದ ಸಂಚಾರವೂ..: ಸುಜಾತಾ ತಿರುಗಾಟ ಕಥನ

“ಆ ಹಿಮಗಿರಿಯ ಬೆಳ್ನೊರೆಯ ಹಾಲು ಕರೆದು ಇಲ್ಲಿ ಹೂ ಅರಳಿದ ಭಾಗ್ಯ. ಜೀವ ತಡಿಯದೆ ಅಣ್ಣ ಮನೆಯಿಂದ ತಿರುಗಿಬಂದಿದ್ದ. ತನ್ನ ಬೆವರು ಹನಿಯ ಕಷ್ಟಕ್ಕೆ ಇಳಿದುಬಂದ ಕೈಲಾಸದ ಸಿರಿಯನ್ನು ಅವನು ನನಗೆ ತೋರುತ್ತಿದ್ದರೆ ಅಣ್ಣನ ಮಗಳ ಕಣ್ಣು ಪ್ರೀತಿಯಿಂದ ಅತ್ತಿತ್ತ ತಿರುಗುತ್ತಿದ್ದವು. ನೋಡಿ ನೋಡಿ ದಣಿದು ದಣಿದು ಹೂಜೇನಿನ ಸಜ್ಜೆ ಮನೆಯನ್ನು ಅದರ ಪಾಡಿಗೆ ಅಲ್ಲೇ ಬಿಟ್ಟು…”

Read More

ನಮ್ಮೂರಿನಲ್ಲಿ ತೆರೆದುಕೊಂಡ ತಾಯಂದಿರ ಪುಟ….: ಸುಜಾತಾ ತಿರುಗಾಟ ಕಥನ

“ಹಳೆ ಬೇರಲ್ಲಿ ಹೊಸ ಚಿಗುರನ್ನ ಅರಳಿಸುವ ಕಲೆಯನ್ನ ಕಲಿಬೇಕಾಗಿದೆ. ಬದುಕು ಯಾರೊಬ್ಬರ ಸೊತ್ತೂ ಅಲ್ಲ. ಅದು ನಮ್ಮ ಪರಿಪೂರ್ಣವಾದ ಹಕ್ಕು ಎಂಬ ಗಟ್ಟಿ ನಿಲುವು ಪ್ರತಿ ಹೆಣ್ಣಿನಲ್ಲೂ ನೆಲೆಗೊಂಡಾಗ ಪರಿಹಾರದ ದಾರಿಗಳು ತೆರೆದುಕೊಳ್ಳುತ್ತದೆ. ನಮ್ಮ ಮನೆಯ ತಾಯಿ ಅಜ್ಜಿಯರು ಅಕ್ಕಪಕ್ಕದ ಹೆಣ್ಣುಗಳು ಇದಕ್ಕೆ ಸಾಕ್ಷಿಯಾಗಿ ಈ ಬದುಕನ್ನು ನೀಸಿ ನಮ್ಮನ್ನು ಈಗ ಇಲ್ಲಿ ನಿಲ್ಲಿಸಿ ಹೋಗಿದ್ದಾರೆ. ಹೆಣ್ಣಿದ್ದೆಡೆ ಬದುಕು ತಂತಾನೇ ನಿಲ್ಲುತ್ತೆ ಅನ್ನುವ ಮನಃಸ್ಥಿತಿ ಪ್ರತಿಯೊಬ್ಬರ ತಿಳುವಳಿಕೆಯಲ್ಲೂ ಇದೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ