Advertisement

Tag: ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ

ತನ್ನ ಮಗಳು ಕಣ್ಣೆದುರಿಗೆ ಅಳುತ್ತಿರುವುದನ್ನು ಕಂಡೂ ಯಾವುದೇ ವಿಕಾರಗಳನ್ನು ಹರಿಸದೆ ಮೌನದಿಂದ ಶೂನ್ಯವನ್ನು ದಿಟ್ಟಿಸುತ್ತಾ, ಅಜ್ಜನನ್ನು ತಬ್ಬಿಕೊಂಡ ಮಗಳನ್ನು ಮತ್ತು ಅಪ್ಪ ಶೇಖರಪ್ಪಯ್ಯರನ್ನು ನಿರ್ಭಾವದಿಂದ ನೋಡುತ್ತಿದ್ದ. ಶೇಖರಪ್ಪಯ್ಯರ ಹೊಟ್ಟೆ ಹೊತ್ತಿಯೇ ಹೋಯಿತೇನೋ ಎನ್ನುವಂತೆ ಎಡಗೈಯಿಂದ ಹೊಟ್ಟೆಯನ್ನು ಹಿಡಿದು ಹಿಚುಕುತ್ತಾ ಸವರುತ್ತಾ, ಮೊಮ್ಮಗಳನ್ನು ಬಿಗಿದಪ್ಪಿಕೊಂಡು ಮಗನೇ… ಸೂರ್ಯ…. ನಾನು ಕಣೋ ಅಪ್ಪಾ… ಮಾತಾಡೋ, ಮಾತಾಡು ಕಂದ ಎಂದು ಸೂರ್ಯನಿಗೆ ಹೇಳುತ್ತಿದ್ದರೆ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ “ಗಂಧ”

Read More

ನುಡಿ ರಂಗವಲ್ಲಿ: ಶ್ರುತಿ ಬಿ.ಆರ್.‌ ಕಥಾಸಂಕಲನಕ್ಕೆ ಡಾ. ರಾಜೇಂದ್ರ ಚೆನ್ನಿ ಮುನ್ನುಡಿ

‘ಎಲ್ಲೆಗಳ ದಾಟಿದವಳು’ ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ಹಾಗೂ ತುಂಟತನದ ಸಂಬಂಧವನ್ನು ಕತೆಯ ಅರ್ಥಪೂರ್ಣ ಭಾಗವನ್ನಾಗಿಸುತ್ತದೆ. ಏಕೆಂದರೆ ಕತೆಯ ಮುಖ್ಯ ಭಾಗವನ್ನು ನಿರೂಪಿಸುವ ಅಜ್ಜಿ ಕೂಡ ಎಲ್ಲೆಗಳ ದಾಟದವಳು. ತನ್ನ ಸ್ವಂತ ವ್ಯಕ್ತಿತ್ವ, ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಹಟಮಾರಿ, ಹಾಗೆ ನೋಡಿದರೆ ಗಂಡಾಳ್ವಿಕೆ, ಕುಟುಂಬದೊಳಗಿನ ಕ್ರೌರ್ಯ ಇವೆಲ್ಲವುಗಳ ನಿರಂತರತೆಯ ನಡುವೆ ಹೆಣ್ಣು ಕೇವಲ ಗುಲಾಮಳಲ್ಲವೆನ್ನುವುದನ್ನು ಕತೆಯು ಪ್ರತಿಪಾದಿಸುತ್ತದೆ.
ಶ್ರುತಿ ಬಿ.ಆರ್.‌ ಕಥಾಸಂಕಲನ “ಎಲ್ಲೆಗಳ ದಾಟಿದವಳು” ಕೃತಿಗೆ ಡಾ. ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ ಇಲ್ಲಿದೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಹಾಗೇ ಒಂದು ಜೊಂಪು ಹತ್ತಿತ್ತು. ಕನಸಿನಲ್ಲಿ ತನ್ನಲ್ಲಿ ಉಳಿದಿದ್ದ ಟಿಕೆಟ್ ಒಂದಕ್ಕೆ ಲಕ್ಷ ರೂಪಾಯಿಯ ಬಂಪರ್ ಬಂದ ಹಾಗೆ, ಅದರಿಂದ ಬಂದ ಹಣದಲ್ಲಿ ತಂಗಿಯ ಮದುವೆ, ತನಗೊಂದು ಮೂರು ಚಕ್ರದ ಸ್ಕೂಟರ್, ಸಣ್ಣದೊಂದು ಲಾಟರಿ ಟಿಕೆಟ್ ಮಾರುವ, ಸ್ಟೇಷನರಿ ಅಂಗಡಿ. ಅದರಿಂದ ಬರುವ ಆದಾಯ. ಅಲ್ಲಿ ಹುಡುಗನೊಬ್ಬನನ್ನು ಕೆಲಸಕ್ಕೆ ಇರಿಸಿ ತಾನು ಬಿ.ಕಾಂ. ಮುಂದುವರಿಸಿದ ಹಾಗೆ……
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಬಂಪರ್‌ ಬಹುಮಾನ” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ

ನನಗೆ ಕಾಲವೇ ನಿಂತಂತಾಗಿ ಬಿಟ್ಟಿತ್ತು. ಕೈಕಾಲುಗಳೆಲ್ಲ ತಣ್ಣಗೆ. ಅಣ್ಣನ ಸಾವು ಕಣ್ಣಿಗೆ ಚಿತ್ರ ಕಟ್ಟಿದಂತಾಯಿತು. ಇವನೇನಾಗಿ ಹೋದ? ಮೂರುವರೆ ಲಕ್ಷಕ್ಕೆ ಸಾಯುವಂಥವನಾ? ನಾವ್ಯಾರು ಇರಲಿಲ್ಲವೇ ಅವನಿಗೆ? ಯಾರನ್ನು ನೆನಪಿಸದಷ್ಟು ಬ್ಯಾಂಕಿನ ಕಿರುಕುಳವಿತ್ತಾ? ಆಡಳಿತ ಯಂತ್ರ ಅಧಿಕಾರ ವರ್ಗ ರೈತರ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ರಾಜ್ಯದಲ್ಲಿ ಅದೆಷ್ಟು ರೈತರ ಸಾವುಗಳು? ಅವರ ಕುಟುಂಬಗಳಿಗೆ ಯಾರು ದಿಕ್ಕು?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ “ಕರಕಲಾದ ಅನ್ನದಗುಳು” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಿವಕುಮಾರ ಚನ್ನಪ್ಪನವರ ಕತೆ

ತನ್ಗ ಸರಿಯಾಗಿ ಹನ್ನೆಲ್ಡು ವರ್ಷ ಇರಬೇಕು ಅಪ್ಪಯ್ಯ ತನ್ನ ಮ್ಯಾಲ ಕೈಮಾಡಿ, ‘ಬೋಸುಡಿಕೆ ಹೆಣಗನಂಗ್ಯಾಕ್ಲೆ ಆಡ್ತಿ ಗಂಡದಿ ಮಗ್ನ ಹಂಗಿರು ಅದ್ನ ಬಿಟ್ಟು ಇನ್ನೊಂದು ಸಲ ಹೆಂಗಸರ ಸಂದ್ಯಾಗಿದ್ದೆಂದ್ರ ಕೆರ ಕಿತ್ತು ಹೊಕ್ಕಾವು’ ಅಂತೆಲ್ಲಾ ಬೈದು ಹೊಡೆದಿದ್ದ. ಕಾಡ್ಸಕಂತಲೇ ಹೆಣಗ ಅಂತ ಅಂಗ್ಸೋ ಹುಡುಗ್ರು, ಅಪ್ಪ ಎಲ್ಲೋದ್ರು ನಿನ್ನ ಮಗ ಹೆಣುಗನಂತೆ ಹೌದಾ..? ಅನ್ನೋ ಜನ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಶಿವಕುಮಾರ ಚನ್ನಪ್ಪನವರ ಕತೆ “ಕರಿಯೆತ್ತ ಕಾಳಿಂಗ… ಬಿಳಿಯೆತ್ತ ಮಾಲಿಂಗ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ