Advertisement

Tag: ಕವನ ಸಂಕಲನ

‘ಸೀತೆ ಹೂ’ ಅರಳುವ ಸಮಯ…: ಶಾಂತಾ ಜಯಾನಂದ್ ಕವನ ಸಂಕಲನಕ್ಕೆ ಎಚ್.ಆರ್.‌ ಸುಜಾತಾ ಮುನ್ನುಡಿ

ನಿಸರ್ಗ ಪ್ರೇಮ, ಸಂಸಾರ ಹೊಂದಾಣಿಕೆ, ಸಾಮಾಜಿಕ ನಡವಳಿಕೆ, ಸಾಮಾಜಿಕ ನ್ಯಾಯ, ಹೆಣ್ಣಿನ ಶೋಷಣೆ, ಎಲ್ಲವನ್ನೂ ಒರೆಗೆ ಹಚ್ಚುವ ಸಾಮರ್ಥ್ಯ ಶಾಂತಾ ಜಯಾನಂದರ ಕವನಗಳಲ್ಲಿ ಕಾಣಸಿಗುತ್ತವೆ. ರೂಪದರ್ಶಿ, ಕುಂಬಳ ಬಳ್ಳಿಯ ಹೂವು, ಸೀತೆಹೂ, ಸೀರೆ ಮಾರುವ ಹುಡುಗ, ವಿಮಾನ ನಿಲ್ದಾಣ, ಬುದ್ಧ, ನೀಲಿ ಕುರಿಂಜಿ, ಪಯಣ, ಸಾಲು ಮರದ ತಿಮ್ಮಕ್ಕ, ಪಂಚ ಪತಿವ್ರತೆಯರು, ಮುಂತಾದ ಕವನಗಳು ಜಗತ್ತಿನ ಚಲನೆಯನ್ನೂ , ಅದರಲ್ಲಿ ಉಳಿಯುವ ನೆನಪನ್ನು, ತಾತ್ವಿಕ ಧೋರಣೆಯನ್ನು ತೆರೆದು ತೋರುತ್ತವೆ.
ಶಾಂತಾ ಜಯಾನಂದ್ ಕವನ ಸಂಕಲನ “ಸೀತೆ ಹೂ” ಕೃತಿಗೆ ಎಚ್.ಆರ್.‌ ಸುಜಾತಾ ಮುನ್ನುಡಿ

Read More

ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ‌ಎಸ್ ಸಿರಾಜ್‌ ಅಹಮದ್‌ ಮುನ್ನುಡಿ

Read More

ನೀಲಾಕಾಶದ ನಿಹಾರಿಕೆಗಳ ನೋವು ತಿಳಿದಿರಲಿ…

ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ.
ಚಾಂದ್‌ ಪಾಷ ಎನ್.ಎಸ್. ಕವನ ಸಂಕಲನ “ಒದ್ದೆಗಣ್ಣಿನ ದೀಪ”ಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

‘ಒಂದು ಅಂಕ ಮುಗಿದು’ ಧ್ಯಾನಿಸುತ್ತಾ….

‘ತುಂಬೆಗಿಡ ಮತ್ತು ಹುಡುಗಿ’ ಸತ್ತು ಮಣ್ಣಾದ ಹುಡುಗಿಯೊಬ್ಬಳ ಸಮಾಧಿಮೇಲೆ ನೆಟ್ಟ ತುಂಬೆ ಗಿಡದ ವಿಷಯವಿರುವ ಕವಿತೆ. ಬದುಕಿನ ಉತ್ತರಗಳ ಹಂಗು ಹುಡುಗಿಗೂ, ತುಂಬೆಗಿಡಕ್ಕೂ ಇಲ್ಲ. ಬದುಕಿನ ನಶ್ವರತೆಗಳು, ಹುಟ್ಟು, ಸಾವಿನ ಕುರಿತು ಏಳುವ ಜಿಜ್ಞಾಸೆಗಳು ಕವಯತ್ರಿಯ ಭಾವಾತ್ಮಕತೆಯ ತೀವ್ರತರ ಹುಡುಕಾಟವನ್ನು ದರ್ಶಿಸುತ್ತವೆ. ‘ನೀನೆ ಒಂದು ಅಪೂರ್ಣ ಚಿತ್ರ’ ಕವಿತೆಯೂ ಬದುಕಿನ ಎಲ್ಲಾ ಕ್ಷಣಗಳಿಗೆ ಮುಖಾಮುಖಿಯಾಗಿ ಮುಪ್ಪಿನಲ್ಲಿ ಹಿಂದಿನ ಪುಟಗಳನ್ನು ತಿರುವಿಹಾಕುವ ವ್ಯಕ್ತಿಯೊಬ್ಬನ ಕುರಿತು ಬರೆದ ಕವಿತೆ.
ಅಭಿಷೇಕ್‌ ವೈ.ಎಸ್. ಬರೆಯುವ ಅಂಕಣ “ಕಾವ್ಯದ ಹೊಸ ಕಾಲ”

Read More

ದೈನಿಕತೆಯಲ್ಲೆ ದೈವಿಕತೆ..

ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ