Advertisement

Tag: ಕೆಂಡಸಂಪಿಗೆ

ನಡುಗನ್ನಡ ಕಾಲದ ಶತಕ ಸಾಹಿತ್ಯ ಸಮೀಕ್ಷೆ

ಶತಕಸಾಹಿತ್ಯವು ಪ್ರಾಕೃತ ಸಾಹಿತ್ಯದಲ್ಲಿ ಉದಯಗೊಂಡು ಸಂಸ್ಕೃತ ಸಾಹಿತ್ಯದಲ್ಲಿ ಸರ್ವತೋಮುಖವಾಗಿ ಬೆಳೆದು ದ್ರಾವಿಡ ಭಾಷೆಗಳಲ್ಲಿ ತನ್ನ ತಣಿಯಾದ ಫಲಗಳನ್ನು ನೀಡಿದೆ. ಸಂಸ್ಕೃತ ಶತಕಗಳ ಪ್ರೇರಣೆಯಿಂದ ಉಭಯಭಾಷಾವಿಶಾರದರಾದ ಕನ್ನಡದ ಅನೇಕ ಮಹಾಕವಿಗಳು ಶತಕಗಳನ್ನು ಬರೆದು ಇದಕ್ಕೊಂದು ಮೆರುಗು ಕೊಟ್ಟಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಶತಕಗಳು ಕೇವಲ ವೃತ್ತ ರೂಪದಲ್ಲಿ ಕಾಣಿಸಿಕೊಂಡಿವೆ.
ನಡುಗನ್ನಡ ಕಾಲದ ಶತಕ ಸಾಹಿತ್ಯದ ಕುರಿತು ಡಾ. ರಾಜಶೇಖರ ಜಮದಂಡಿ ಬರಹ

Read More

ವಿಶಿಷ್ಟ ದೃಶ್ಯಕಾವ್ಯ ʻನಾನು ಕುಸುಮಾʼ ಪನೋರಮಕ್ಕೆ

ಹೀಗೆ ಎಲ್ಲವೂ ಆಗಿದ್ದ ತಂದೆಯನ್ನು ಕಳೆದುಕೊಂಡ ಮೇಲೆ ಒಂಟಿ ತರುಣಿ ಕುಸುಮ ಮುಂದೆ ಏನಾದಳು ಎಂಬುದನು ಸ್ಮರಿಸಿಕೊಂಡರೆ ಕೈ ಕಾಲುಗಳು ನಡುಗುತ್ತವೆ. ಎಷ್ಟೊಂದು ಸುಂದರವಾಗಿ ಕಾಣುವ ಈ ಜಗತ್ತು ಮತ್ತು ವ್ಯವಸ್ಥೆಯ ಕರಾಳ ಮುಖವನ್ನು ಕಂಡು ಎಂಥವರಲ್ಲೂ ಆಕ್ರೋಶ ಪುಟಿದೇಳುತ್ತದೆ. ಕುಸುಮಳ ಆ ಸ್ಥಿತಿಗೆ ಕಾರಣವಾದವರನ್ನು ಸುಟ್ಟುಹಾಕಬೇಕೆನ್ನುವಷ್ಟು ಸಿಟ್ಟು ಎಲ್ಲ ಸಾತ್ವಿಕ ಮತ್ತು ಸತ್ಯ ಪರವಾದ ಮನಸ್ಸುಗಳಲ್ಲಿ ಉಕ್ಕುತ್ತದೆ! ಆದರೂ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೆ ಎಂಬುದೇ ವಿಷಾದದ ಪ್ರಶ್ನೆ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ʻನಾನು ಕುಸುಮಾʼ ಚಿತ್ರದ ಕುರಿತು ಕುಮಾರ ಬೇಂದ್ರೆ ಬರಹ

Read More

ಮಾರ್ಕೋನಿ ಬೀಚ್: ತೆರೆಯ ಮೇಲಣ ತರಂಗಾಂತರಂಗ

ಸಾಮಾನ್ಯ ಜನರು ಮಾರ್ಕೋನಿ ರಿಸೀವರ್‌ಗಳನ್ನು ಕೊಂಡು ಬೇರೆ ಬೇರೆ ತರಂಗಗಳನ್ನು ಕೈಯಲ್ಲಿ ಕಟ್ಟಿ ಹಾಕಿ ಆಲಿಸುವ ತಂತ್ರಜ್ಞಾನ ಹುಟ್ಟಿದ್ದು ಇಲ್ಲೇ, ಈ ವೆಲ್ಫ್ಲೀಟ್ ಎಂಬ ಚಿಕ್ಕ ಊರಿನಲ್ಲಿ. ರೇಡಿಯೋ ತರಂಗಗಳು ಹುಟ್ಟುಹಾಕಿದ ಕ್ರಾಂತಿ ಅದೆಷ್ಟು ಬೇಗ ಹಬ್ಬಿತೆಂದರೆ ಎಲ್ಲ ಹಡಗುಗಳಲ್ಲೂ ಮಾರ್ಕೋನಿ ಉಪಕರಣವಿತ್ತು. ಸುಪ್ರಸಿದ್ಧ ಟೈಟಾನಿಕ್ ಹಡಗು ಕೂಡ ಮುಳುಗುವ ಮೊದಲು ಮಾರ್ಕೊನಿ ಉಪಕರಣದ ಮೂಲಕ “SOS” ಸಂದೇಶ ಕಳಿಸಿತ್ತು.
ವೈಶಾಲಿ ಹೆಗಡೆ ಬರೆಯುವ ಪ್ರವಾಸ ಲೇಖನ ಮಾಲೆ

Read More

ಚೋಳರ ರಾಜ್ಯಾಡಳಿತವೂ… ಕಾರ್ಯಕಲಾಪಗಳೂ

ನಾಗಪಟ್ಟಣದಲ್ಲಿ ಒಂದು ಬೌದ್ಧ ದೇವಾಲಯವನ್ನು ಕಟ್ಟಿಸಿ ಮತ್ತು ವೈಷ್ಣವ ಮತಕ್ಕೂ ಪ್ರೋತ್ಸಾಹವನ್ನಿತ್ತು, ಪರಧರ್ಮ ಸಹಿಷ್ಣುತೆಯನ್ನು ಪ್ರದರ್ಶಿಸಿರುವನು. ರಾಜ್ಯಾಡಳಿತದಲ್ಲಿ ಸುಧಾರಣೆಯನ್ನು ತಂದು ಹೆಸರುವಾಸಿಯಾದನು. ಕಂದಾಯವನ್ನು ನಿರ್ಧರಿಸಲು ಭೂಮಿಯ ಸರ್ವೆ ಮಾಡಿಸಿದನಲ್ಲದೆ, ತನ್ನ ವಿಶ್ವಾಸಕ್ಕೆ ಯೋಗ್ಯರಾದ ಜನರನ್ನು ಪ್ರತಿನಿಧಿಗಳಾಗಿ ಅಲ್ಲಲ್ಲಿ ನಿಯಮಿಸಿ ಆಡಳಿತವು ಸರಿಯಾಗಿ ನಡೆಯುವಂತೆ ನೋಡಿಕೊಂಡನು.
ಕೆ.ವಿ. ತಿರುಮಲೇಶ್ ಬರೆಯುವ ಸರಣಿ

Read More

ಕ್ಯಾತನಮಕ್ಕಿಯ ಕಾಲಮೇಲೆ ಕೂತು ಗಾಳಿಗುಡ್ಡವ ನೆನೆದು

ಕಿಲೋಮೀಟರ್ ದೂರದಲ್ಲಿ ಬೈಕು ನಿಲ್ಲಿಸಿ ನಮ್ಮ ಟ್ರೆಕಿಂಗ್ ಆರಂಭಿಸಿದಾಗ ಇದ್ದ ಉತ್ಸಾಹ, ಕ್ಯಾತನಮಕ್ಕಿಯನ್ನು ಅರ್ಧ ಹತ್ತಿದಾಗಲೇ ಬತ್ತುವುದರಲ್ಲಿತ್ತು. ಒಂಚೂರು ಕುಳಿತು ನೀರು ಕುಡಿದು ಕಚ್ಚಾ ರಸ್ತೆಯಲ್ಲಿ ಬೆವರಿಳಿಸಿ, ತುದಿ ತಲುಪುವಾಗ ಜೀಪಿನಲ್ಲಿ ಬಂದವರ ದರ್ಬಾರಿಗೆ ಮನವೊಮ್ಮೆ ಪಿಚ್ಚೆಂದಿತ್ತು. ಆದರೂ ನಡೆದು ಗಮ್ಯ ತಲುಪುವ ಸಾರ್ಥಕ ಭಾವ ಆರಾಮಾಗಿ ತೇಲಿ ಬಂದವರಿಗೆಲ್ಲಿ ಬರಬೇಕು ಎಂದು ನಮಗೆ ನಾವೇ ಬೆನ್ತಟ್ಟಿಕೊಂಡು ಮುನ್ನಡೆದೆವು.
ಚಿಕ್ಕಮಗಳೂರಿನ ‘ಕ್ಯಾತನಮಕ್ಕಿʼ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ಶುಭಶ್ರೀ ಭಟ್ಟ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ