Advertisement

Tag: ಕೆಂಡಸಂಪಿಗೆ

ಬದುಕೆಂದರೆ ಜಟಕಾ ಬಂಡಿಯೇ ಇನ್ನೇನೂ ಅಲ್ಲ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪಕ್ಕದಲ್ಲಿ ಸ್ಟೂಲ್ ಮೇಲೆ ಕುಳಿತಿರುವ ವಿಜಯ ಕೂಡ ಸಣ್ಣಗೆ ಇಳಿದುಹೋಗಿದ್ದಾಳೆ. ಆದರೂ ಅವಳ ಮುಖದ ಮೇಲಿನ ಕಾಂತಿ ಇನ್ನೂ ಒಂದಷ್ಟು ಉಳಿದುಕೊಂಡಿದೆ. ಅವಳ ಗಂಡ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಜ್ಞಾಪಕದಂತೆ ಅವಳ ಕಿವಿಗಳಲ್ಲಿ ಚಿನ್ನದ ಓಲೆಗಳು ಕಾಣಿಸುತ್ತಿವೆ. ವಾರ್ಡ್‌ನ ಎರಡೂ ಕಡೆ ಗೋಡೆಗಳ ಪಕ್ಕ ಸಾಲಾಗಿ ಹಾಸಿರುವ ಹಾಸಿಗೆಗಳ ಮೇಲೆ ಗಣಿ ಕಾರ್ಮಿಕರು ಹಾಸಿಗೆಗಳಲ್ಲಿ ಕುಳಿತು ಮಲಗಿ ಮಾತನಾಡುತ್ತಿದ್ದಾರೆ. ಈ ವಾರ್ಡ್‌ನಲ್ಲಿ ಬರೀ ಗಣಿ ರೋಗಗಳಿಂದ ಬಳಲುತ್ತಿರುವ ಕಾರ್ಮಿಕರನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

Read More

ಕಡುಬಿನ ಪುರಾಣ: ಭವ್ಯ ಟಿ.ಎಸ್. ಸರಣಿ

ಮಳೆಗಾಲದಲ್ಲಿ ಮಲೆನಾಡಿನ ಹಸು, ಎತ್ತುಗಳಿಗೆ ಹುರುಳಿಕಾಳು ಬೇಯಿಸಿ ಕೊಡುತ್ತಾರೆ. ಈ ಹುರುಳಿ ಬೇಯಿಸಿದ ನೀರಿಗೆ ಹುರುಳಿಕಟ್ಟು ಎನ್ನುತ್ತಾರೆ. ಇದರ ರುಚಿ ಬಲ್ಲವರೇ ಬಲ್ಲರು. ಕುದ್ದು ದಪ್ಪಗಾಗಿ ಹದಗೊಂಡ ಹುರುಳಿಕಟ್ಟಿಗೆ ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸಿನ ಒಗ್ಗರಣೆ ಕೊಟ್ಟು, ಸ್ವಲ್ಪ ವಾಟೆಹುಳಿ ಅಥವಾ ಹುಣಸೆಹಣ್ಣು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ಘಮಘಮಿಸುವ ಹುರುಳಿಕಟ್ಟಿನ ಸಾರು ತಯಾರಾಗುತ್ತದೆ. ಇದನ್ನು ಕಡುಬಿಗೆ ಕಲಸಿ ತಿಂದರೆ ಸ್ವರ್ಗಕ್ಕೆ ಮೂರೇ‌ ಗೇಣು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಕನ್ನಡವೆಂಬ ಮರೆಗುಳಿ ಮನಸು!: ದರ್ಶನ್‌ ಜಯಣ್ಣ ಬರಹ

ಮಧ್ಯ ಪ್ರದೇಶದಲ್ಲಿನ ಕೆಲವು ಬುಡಕಟ್ಟುಗಳು ಕನ್ನಡಕ್ಕೆ ಬಲು ಹತ್ತಿರದ ಭಾಷೆಗಳನ್ನು ಮಾತನಾಡುತ್ತಾರೆ. ಇತ್ತೀಚೆಗೆ ಅದರ ಮೂಲ ಕರ್ನಾಟಕ ಮತ್ತು ಅವರೆಲ್ಲಾ ಎಲ್ಲೆಡೆ ಹಬ್ಬಿದ್ದ ನಮ್ಮ ಸಾಮ್ರಾಜ್ಯಗಳ ಜೀವಂತ ಮನುಷ್ಯ ಉಳಿಕೆಗಳು ಎಂಬುದು ಕಂಡು ಬಂದಿದೆ. ಮಹಾರಾಷ್ಟ್ರದ ಮರಾಠಿಯ ಕೊಂಕಣಿಯ ಬೆಳವಣಿಗೆಯಲ್ಲಿ ಕನ್ನಡದ ಭಾಷೆಗಳ ಕೊಡುಗೆಯಿದೆ, ತೆಲುಗಿಗೆ ತಮಿಳಿಗೆ ಎಷ್ಟೋ ಕೊಡು-ಕೊಳ್ಳುವ ಪ್ರಕ್ರಿಯೆಗಳಾಗಿವೆ. ಅದು ನಾವು ಉಪಯೋಗಿಸುವ ಎಷ್ಟೋ ಪದಗಳಲ್ಲಿ, ಅಕ್ಷರಗಳಲ್ಲಿ ತೋರುತ್ತದೆ.
ಕನ್ನಡ ಭಾಷೆ ಮತ್ತು ಅದರ ಬಳಕೆಯ ಕುರಿತು ದರ್ಶನ್‌ ಜಯಣ್ಣ ಬರಹ

Read More

ಗತಕಾಲದ ಚಿನ್ನದ ಗಣಿ ಕೊಲಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಕೊಲಂಬಿಯಾದಲ್ಲಿ ದೊಡ್ಡವರು ಮಾತ್ರವಲ್ಲ, ಚಿಕ್ಕ ಮಕ್ಕಳೂ ಸಹ ಕಾಫಿಪ್ರಿಯರು. ಊಟದ ನಂತರವೂ ಸಹ ಕಾಫಿ ಕುಡಿಯುವ ಅಭ್ಯಾಸವನ್ನು ಇವರು ಇಟ್ಟುಕೊಂಡಿದ್ದಾರೆ. ರಾತ್ರಿಯ ಊಟದ ನಂತರ ಹೆತ್ತವರೇ ತಮ್ಮ ಮಕ್ಕಳಿಗೆ ಕಾಫಿಯನ್ನು ಕುಡಿಯುವುದಕ್ಕೆ ಕೊಡುತ್ತಾರೆ. ಇದನ್ನು ‘ಕಾಫಿ ಕಾನ್ ಲೆಚೆ’ ಎಂದು ಕೊಲಂಬಿಯನ್ ಭಾಷೆಯಲ್ಲಿ ಕರೆಯಲಾಗುತ್ತದೆ. ಅಂದರೆ ‘ಹಾಲಿನ ಜೊತೆಗೆ ಕಾಫಿ’ ಎಂದರ್ಥ. ಮಕ್ಕಳಿಗೆ ಹಾಲಿನ ಜೊತೆಗೆ ಬೆರೆಸಿದ ಲೈಟಾದ ಕಾಫಿಯನ್ನು ಕೊಡುವ ದೊಡ್ಡವರು ಸ್ಟ್ರಾಂಗ್ ಕಾಫಿಯನ್ನೇ ಕುಡಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಹೊಟ್ಟೆಬಾಕ ಗಂಡುಮೀನು…: ಮಯೂರ ಬಿ ಮಸೂತಿ ಬರಹ

ಮೀನು ಎಂದಿನಂತೆ ನೂರು ಮೀಟರ್ ರೇಸಿನಲ್ಲಿ ಬಿದ್ದಿತ್ತು. ಹೆಂಡತಿಗೆ ಕರೆದು ತೋರಿಸಿದೆ. ‘ಎಲ್ಲಿ ಸಾಯಲಿಕ್ಕೆ ಬಂದಿದೆಯೆನೋ’ ಎಂದು ಉತ್ತರಿಸಿ ಮನೆಗೆಲಸದಲ್ಲಿ ತೊಡಗಿಸಿಕೊಂಡಳು. ನಮಗೆ ಮೀನನ್ನು ಸಂಭಾಳಿಸುವುದಕ್ಕಿಂತ ಮಕ್ಕಳನ್ನು ನಿಯಂತ್ರಿಸುವುದೇ ಕಷ್ಟಕರವಾಗಿತ್ತು. ಎಲ್ಲಿ ಬೌಲನ್ನು ಬಿಳಿಸುತ್ತಾರೋ…. ಎಂಬ ಭಯ..! ಮಗಳು ಕಿಡ್ಡಿಯಂತೂ “ಹತ್ರ ಹೋಗಬೇಡ ಬಾಂಬಿ ಮೀನು ಕಚ್ಚುತ್ತೆ” ಎಂದು ತನ್ನ ತೊದಲು ನುಡಿಯಲ್ಲಿ ಅಣ್ಣನಿಗೆ ಉಪದೇಶ ನೀಡಿ ತಾನೆ ಬೌಲ್‌ನ ಮುಂದೆ ಮೀನುಗಳು ಭಯ ಬೀಳುವಂತೆ ಹಲ್ಲು ಕಿರಿದುಕೊಂಡು ನಿಲ್ಲುತ್ತಿದ್ದಳು.
ಮಯೂರ ಬಿ ಮಸೂತಿ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ