Advertisement

Tag: ಡಾ. ಲಕ್ಷ್ಮಣ ವಿ. ಎ

ರಿಯಾಜು ಮಾಡದ ಭಾಷೆ ಮೊಂಡಾಗುತ್ತದೆ: ಡಾ. ಲಕ್ಷ್ಮಣ ವಿ ಎ ಬರಹ

ಅತಿಯಾದ ಓದು ಕೆಲವೊಮ್ಮೆ ಸೃಜನಶೀಲತೆಗೆ ಮಾರಕವಾಗಬಹುದು ಎಂಬ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ನಿರಂತರವಾಗಿ ಇತರರ ಧ್ವನಿಗಳನ್ನು ಮಾತ್ರ ಕೇಳುತ್ತಾ ಹೋದರೆ, ನಮ್ಮ ಒಳಧ್ವನಿ ನಿಧಾನವಾಗಿ ಮೌನವಾಗಬಹುದು. ಅತಿಯಾಗಿ ಓದುವ ಕೆಲ ಲೇಖಕರು ಒಂದು ಹಂತದ ನಂತರ ತಮ್ಮದೇ ಭಾಷೆಯನ್ನು ಕಳೆದುಕೊಳ್ಳುತ್ತಾರೆ. ಅವರ ವಾಕ್ಯಗಳಲ್ಲಿ ತಮ್ಮ ಉಸಿರಿಗಿಂತ ಇತರರ ನೆರಳು ಹೆಚ್ಚು ಕಾಣುತ್ತದೆ. ಅವರು ಬರೆಯುವುದಿಲ್ಲ — ಓದಿದವರ ಪ್ರತಿಧ್ವನಿಯನ್ನು ಮರುಸೃಷ್ಟಿಸುತ್ತಾರೆ. ಆದರೆ ಓದದೇ ಇರುವ ಲೇಖಕನ ಸ್ಥಿತಿಯೂ ಅಪಾಯಕರವೇ. ಓದಿಲ್ಲದ ಬರಹ ಹಲವೊಮ್ಮೆ ಆಳವಿಲ್ಲದ ಭಾವೋದ್ರೇಕವಾಗಿ ಉಳಿಯುತ್ತದೆ.
ಓದು-ಬರಹದ ಕುರಿತು ಡಾ. ಲಕ್ಷ್ಮಣ ವಿ.ಎ. ಬರಹ ನಿಮ್ಮ ಓದಿಗೆ

Read More

ವೈದ್ಯರ ಬದುಕಿನ ಪಡಿಪಾಟಲ ಕನ್ನಡಿ: ಕೊಟ್ರೇಶ್ ಅರಸೀಕೆರೆ ಬರಹ

ಇಡೀ ಕಾದಂಬರಿ, ಒಬ್ಬ ಪ್ರಾಮಾಣಿಕ ವೈದ್ಯ ದೇಶ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿದ್ದಾಗಲೂ ಹೇಗೆ ಭ್ರಷ್ಟ ವ್ಯವಸ್ಥೆಗೆ ಬಲಿಯಾಗುತ್ತಾನೆ ಎನ್ನುವ ಕರಾಳ ಕಥನ. ಕೋವಿಡ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆ ಮೇಲೆ ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ಶ್ರೀ ಸಾಮಾನ್ಯನ ಎಲ್ಲ ಆರೋಪಗಳೂ ಸತ್ಯವೆಂದು ಬಿಂಬಿಸುತ್ತದೆ. ವೈದ್ಯಕೀಯ ವ್ಯವಸ್ಥೆಯ ಭ್ರಷ್ಟತೆ ಹೇಗೆ ಲಕ್ಷಾಂತರ ಜನರ ಜೀವನ, ಜೀವದ ಜತೆ ಆಟವಾಡಿದ ಕರಾಳ ಕಥೆಯೇ ಈ ಕಾದಂಬರಿ.
ಡಾ. ಲಕ್ಷ್ಮಣ ವಿ.ಎ. ಕಾದಂಬರಿ ‘ಪಿ. ಎಚ್. ಸಿ ಕವಲುಗುಡ್ಡ’ ಕುರಿತು ಕೊಟ್ರೇಶ್ ಅರಸೀಕೆರೆ ಬರಹ

Read More

ಗೋಡೆ ಮೇಲಿನ ಮಗಳ ಬರಹ ತರಲಾಗಲಿಲ್ಲ….

ಈಗಷ್ಟೇ ಬರೆಯಲು ಕಲಿಯುವ ಮಗುವಿನ ಗೋಡೆಯ ಮೇಲಿನ ಬರಹದಂತೆ ವಕ್ರ ವಕ್ರ… ಕವಿ ತಿರುಮಲೇಶರು ಹೇಳಿದಂತೆ ಎಲ್ಲ ಆರಂಭಗಳೂ ಅನುಮಾನದಲ್ಲೇ! ಬಾಡಿಗೆ ಮನೆಯಲ್ಲಿದ್ದ ಕವಿಯೊಬ್ಬ ಮನೆ ಬದಲಿಸುವಾಗ ಎಲ್ಲಾ ಸಾಮಾನುಗಳನ್ನು ಹೊಸ ಮನೆಗೆ ಒಯ್ದರೂ ಗೋಡೆಯ ಮೇಲೆ ಈಗ ಬೆಳೆದು ದೊಡ್ಡವಳಾದ ಮಗಳ ಗೋಡೆಯ ಗೀರುಗಳನ್ನು ತರಲಾಗಲಿಲ್ಲವೆಂಬ ತಹ ತಹಿಕೆಯ ಕವಿತೆ ಇದೆ. ಕೇವಲ ಗೆರೆಗಳು ಮಾತ್ರವಲ್ಲ, ಸೊಟ್ಟು ಮೂತಿಯ ಪ್ರಾಣಿ, ರೆಕ್ಕೆಯಿಲ್ಲದ ಹಕ್ಕಿ, ಬೆಟ್ಟ…
ಕೈಬರಹದ ಕುರಿತು ಡಾ. ಲಕ್ಷ್ಮಣ ವಿ. ಎ. ಬರಹ ನಿಮ್ಮ ಓದಿಗೆ

Read More

ಮಿಲ್ಟ್ರಿ ಟ್ರಂಕೊಳಗಿನ ಕಥೆಗಳು….

ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ, ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸಮಾಡುತ್ತದೆ. ಹೀಗಾಗಿ ಇಲ್ಲಿನ ಸ್ಮೃತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು ಬಡತನ ದುಡಿಮೆ ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ.
ಡಾ. ಲಕ್ಷ್ಮಣ ವಿ.ಎ. ಬರಹಗಳ ಸಂಕಲನ “ಮಿಲ್ಟ್ರಿ ಟ್ರಂಕು”ಕ್ಕೆ ರಹಮತ್‌ ತರೀಕೆರೆ ಬರೆದ ಮುನ್ನುಡಿ

Read More

ಬದುಕೆಂಬ ಹಡಗಿನ ಅಂತಸ್ತುಗಳು: ಲಕ್ಷ್ಮಣ ವಿ.ಎ. ಅಂಕಣ

“ಇದಕ್ಕೆಲ್ಲ ಜೀವನಶೈಲಿ ಬದಲಿಸಿಕೊಳ್ಳಿ ಎಂಬ ರೆಡಿಮೇಡ್ ಹಾಗು ಸುಲಭ ಉಪದೇಶವೊಂದು ಫಿಟ್ನೆಸ್ ಗುರುಗಳು ಎಸೆಯುತ್ತಾರೆ. ಆದರೆ ಅದನ್ನು ಎಲ್ಲಿಂದ ಶುರು ಮಾಡಬೇಕೆಂದು ಕೇಳಿದರೆ ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಮನುಷ್ಯ ಅಭಿವೃದ್ಧಿ ಅಂದುಕೊಳ್ಳುವುದೆಲ್ಲ ಇನ್ನೊಂದು ಪಾತಳಿಯಿಂದ ನೋಡಿದರೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ