Advertisement

Tag: ಪ್ರಬಂಧ

ಸ್ಯಾನಿಟರಿ ಇಂಜಿನಿಯರ್ಸ್..: ಪೂರ್ಣೇಶ್ ಮತ್ತಾವರ ಪ್ರಬಂಧ

ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಪೂರ್ಣೇಶ್‌ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಚಿಗರಿ ಬಸ್ಸಿನ ಗಂಧರ್ವ: ಲಿಂಗರಾಜ ಸೊಟ್ಟಪನವರ್‌ ಪ್ರಬಂಧ

ನಾನು ಸರ್‌ಗೆ ಐದುನೂರು ಕೊಟ್ಟೆ.. ಅವರು ಮಡಚಿ ಇಟ್ಟುಕೊಂಡರು. ಆಯ್ತು ಎಂದರು.. ನಾನು ನಿಂತೇ ಇದ್ದೆ. ಯಾಕೋ ಅಂದರು.. ನಾನು ಮತ್ತೆ ಐದು ನೋಟು ಕೊಟ್ಟೆ. ಅವರು ಹೈರಾಣ. ಪ್ರಯೋಗ ಮಾಡಿದ್ದು ಅರ್ಥವಾಯಿತು. ಅವರು ಏನೊಂದು ಹೇಳದೆ ಮೌನವಾದರು. ಹೋಗಿ ಕುತ್ಕೋ ಅಂದರು ಡೆಸ್ಕ್‌ನಲಿ ಕೂತೆ. ಸ್ವಲ್ಪ ಹೊತ್ತು ಹಾಗೇ ನೋಡಿದರು. ಹೀಗೆಲ್ಲ ಮಾಡಬಾರದು.. ಎಂದರು ಅಷ್ಟೇ. ನಾನು ಹಾಗೆಲ್ಲ ಮಾಡಿಯೂ ಐದು ನೋಟುಗಳನ್ನು ಅವರಿಗೆ ಕೊಟ್ಟಿದ್ದೆ. ಅವರು ತಪ್ಪನ್ನು ಮಾತ್ರ ತಿದ್ದುವ ಪ್ರಯತ್ನ ಮಾಡಿದ್ದರು.
ಲಿಂಗರಾಜ ಸೊಟ್ಟಪ್ಪನವರ್‌ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ನನ್ನಜ್ಜನೂ… ಮತ್ತು ಅವನ ಸೈಕಲ್ಲೂ….: ಬಸವನಗೌಡ ಹೆಬ್ಬಳಗೆರೆ ಪ್ರಬಂಧ

ಮನೆಯಲ್ಲಿ ಸೈಕಲ್ ಇಲ್ಲದ ಹುಡುಗರು ಆ ಊರಲ್ಲಿದ್ದ ಸಬ್ಬೀರಣ್ಣನ ಪಂಕ್ಚರ್ ಶಾಪ್‌ನಲ್ಲಿ ಬಾಡಿಗೆ ಇರಿಸಿದ್ದ ಸಣ್ಣ ಸೈಕಲ್ಲುಗಳನ್ನು ಹೊಡೆಯುತ್ತಿದ್ದರು. ಇಪ್ಪತ್ತೈದು ಪೈಸೆಗೆ ಅರ್ಧ ಘಂಟೆ ಕಾಲ ಬಾಡಿಗೆ ಕೊಡುತ್ತಿದ್ದನವನು! ಅದ್ಯಾವ ನಂಬಿಕೆ ಮೇಲೆ ಕೊಡುತ್ತಿದ್ದನೋ ಗೊತ್ತಿಲ್ಲ. ಹೊಲಕ್ಕೆ ಬುತ್ತಿ ಒಯ್ಯಬೇಕಾದಾಗ ಮಾತ್ರ ಖುಷಿಯಿಂದ ಸೈಕಲ್ ಕೊಡುತ್ತಿದ್ದ ಅಜ್ಜ ಬೇರೆ ಸಮಯದಲ್ಲಿ ಅದನ್ನು ಮುಟ್ಟೋಕು ಬಿಡ್ತಾ ಇರಲಿಲ್ಲ. ಪೆಟ್ರೋಲ್ ಡೀಸೆಲ್ ಅಂತಾ ಏನೂ ಖರ್ಚು ಆಗೋಲ್ಲ. ಅದ್ಯಾಕಂಗೆ ಆಡ್ತಿದ್ರು ನಮ್ಮಜ್ಜ ಅನ್ನೋದೆ ಇಂದಿಗೂ ನನಗೆ ಉತ್ತರ ಹೊಳೆಯದ ಪ್ರಶ್ನೆಯಾಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಪ್ರಬಂಧಕಾರನಿಗೆ ಉಪದೇಶಾಮೃತ

ಪ್ರಾಮಾಣಿಕವಾದದ್ದಾಗಲೀ, ಯಥೋಚಿತವಾದದ್ದಾಗಲೀ, ದುರುದ್ದೇಶಪೂರ್ವಕವಾದದ್ದಾಗಲೀ ಉಪದೇಶವೆಂಬುದು ಉಪದೇಶವೇ! ಈ ಜಗತ್ತಿನಲ್ಲಿ ಉಪದೇಶಗಳಿಂದ ಆಗಿರುವಷ್ಟು ಹಾವಳಿ ಇನ್ನು ಯಾವುದರಿಂದಲೂ ಆಗಿಲ್ಲ. ಎಲ್ಲ ಬಣ್ಣದ, ಎಲ್ಲ ನೆರಳಿನ, ಎಲ್ಲ ಧರ್ಮದ, ಎಲ್ಲ ವಿತಂಡವಾದದ ಸಕಲ ರೀತಿಯ ಆಧ್ಯಾತ್ಮಿಕ, ಸಾಂಸ್ಕೃತಿಕ ಉಪದೇಶಗಳಿಂದ ಈ ಜಗತ್ತು ನಲುಗಿ ನಲುಗಿ ಬಸವಳಿದುಹೋಗಿದೆ. ಈಗಾಗಲೇ ಸತ್ಯವನ್ನು ಕಂಡಾಗಿದೆ, ಹೇಳಿಯೂ ಆಗಿದೆ ಎಂಬ ಬಾಲಿಶ ಧೋರಣೆಯಿಂದ ಕೊನೆಗೂ ನಾನು ಒಂದು ಮಾತು ಹೇಳುತ್ತೇನೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಕೊನೆಯ ಪ್ರಬಂಧ ನಿಮ್ಮ ಓದಿಗೆ

Read More

ಜನಗಣಮನ..

ಎಲ್ಲರೂ ತಮ್ಮಷ್ಟಕ್ಕೆ ತಾವು ಮರೆತು ಹೋದವರಂತೆ ಗಪ್ ಚುಪ್! ಪ್ರತಿದಿನದ ಸಂತೆಯಾದ್ದರಿಂದ ಅಲ್ಲಿ ಅವರಿಗೆ ಎಲ್ಲವೂ ಯಾಂತ್ರಿಕ. ಆಕಳಿಕೆ ಬಂದರೂ ಕಸುವಾಕಿ ಬಿಗಿ ಹಿಡಿಯುತ್ತಾರೆ. ನೊಣವೊಂದು ಮೊಣಕಾಲು ತುರಿಸಿದರೂ ಹಲ್ಲುಕಚ್ಚಿ ಹಿಡಿಯುತ್ತಾರೆ. ನೆಟ್ಟ ನಿಂತ ಕಾಲು, ಸೆಟೆದು ನಿಂತ ಭಂಗಿ ಊಹೂಂ ಅಲುಗುವಂತಿತ್ರಿಕೆಯೊಂದಿಗೆ ಮಾತು ನಿಲ್ಲಿಸಿದವಳನ್ನು ಗಮನಿಸಿದ ಹಿರೇಮಣಿ ಜೋರಾಗಿ ಗದರುವಂತೆ ಸವಧನ್ ಗದರಿಸುತ್ತಾನೆ. ಕಾಲುಗಳು ಪಕ್ಕಕ್ಕೆ ಬಡಿದುಕೊಳ್ಳುತ್ತವೆ.
ಸದಾಶಿವ ಸೊರಟೂರು ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ